1949ರಲ್ಲಿ ಜನಿಸಿದ ಮನದೀಪ್ ರಾಯ್ ಹಲವು ದಶಕಗಳಿಂದ ಹಾಸ್ಯ ಕಲಾವಿದರಾಗಿ ರಂಜಿಸಿದ್ದಾರೆ.
ಬೆಳದಿಂಗಳ ಬಾಲೆ, ಆಪ್ತರಕ್ಷಕ, ಪುಷ್ಪಕ ವಿಮಾನ, ಮಿಂಚಿನ ಓಟ , ಬೆಂಕಿಯ ಬಲೆ, ಆಕಸ್ಮಿಕ, ಏಳು ಸುತ್ತಿನ ಕೋಟೆ, ಆಸೆಗೊಬ್ಬ ಮೀಸೆಗೊಬ್ಬ, ಆಪ್ತ ರಕ್ಷಕ , ಆಂಟಿ ಪ್ರೀತ್ಸೆ , ಪ್ರೀತ್ಸೋದ್ ತಪ್ಪಾ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ರಾಜ್ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಅನಂತ್ ನಾಗ್ ರೀತಿಯ ಹಿರಿಯ ನಟರ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮನ್ದೀಪ್ ರಾಯ್ ಈಗಿನ ಕಾಲದ ನಟರ ಚಿತ್ರಗಳಲ್ಲೂ ನಟಿಸಿದ್ದಾರೆ.
ಮುಂಬೈನಿಂದ ಬಂದು ಕನ್ನಡ ಕಲಿತಿದ್ದ ಮನ್ದೀಪ್ ರಾಯ್ ಮೂಲತಃ ಮುಂಬೈನವರಾದ ಮನ್ದೀಪ್ ರಾಯ್ ಅವರಿಗೆ ಕನ್ನಡ ಬರುತ್ತಿರಲಿಲ್ಲ. ಮುಂಬೈನಲ್ಲಿ ಶಂಕರ್ ನಾಗ್ ಕುಟುಂಬ ವಾಸವಿದ್ದ ಸಮಯದಲ್ಲಿ ಮನದೀಪ್ ಅವರಿಗೆ, ಶಂಕರ್ಗೂ ಪರಿಚಯ ಆಯ್ತು. ಅಲ್ಲಿಂದ ರಂಗಭೂಮಿ ಕಡೆಗೆ ಮನದೀಪ್ ಅವರಿಗೆ ಒಲವು ಬೆಳೆಯಿತು. ಶಂಕರ್ ನಾಗ್ ಅವರ ಒತ್ತಾಯದ ಮೇರೆಗೆ 'ಮಿಂಚಿನ ಓಟ' ಸಿನಿಮಾದಲ್ಲಿ ಮನ್ದೀಪ್ ನಟಿಸಿದರು.
ಪುಷ್ಪಕವಿಮಾನ,
ಮುತ್ತಿನ ಹನಿ ಸಿನಿಮಾ
ಹೃದಯಾಘಾತದಿಂದ ಮಂದೀಪ್ ರಾಯ್ ಇಂದು ಕೊನೆಯುಸಿರೆಳೆದಿದ್ದಾರೆ.