ಮಾನಸಿಕ ಖಿನ್ನತೆಗೆ ರಾಮಬಾಣ ಎಂದ ವೈದ್ಯನಿಂದ ಯುವತಿಗೆ ಪಂಗನಾಮ!

 ದೆಹಲಿ ಮೂಲಕದ ಸುಮಂತ್ ಕಾಂತ್ ಕೌಲ್ ಎನ್ನುವ ವೈದ್ಯನೊಬ್ಬ ಈಗ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವತಿಗೆ ಖಾಯಿಲೆಯನ್ನು ಗುಣಪಡಿಸುವುದಾಗಿ ಹೇಳಿ ಈಗ ಆಕೆಗೆ ಪಂಗನಾಮ ಹಾಕಿ ಪೋಲಿಸರ ಅತಿಥಿಯಾಗಿದ್ದಾನೆ.

Last Updated : Oct 11, 2018, 08:45 PM IST
ಮಾನಸಿಕ ಖಿನ್ನತೆಗೆ ರಾಮಬಾಣ ಎಂದ ವೈದ್ಯನಿಂದ ಯುವತಿಗೆ ಪಂಗನಾಮ!  title=
ಸಾಂದರ್ಭಿಕ ಚಿತ್ರ

ನವದೆಹಲಿ:  ದೆಹಲಿ ಮೂಲಕದ ಸುಮಂತ್ ಕಾಂತ್ ಕೌಲ್ ಎನ್ನುವ ವೈದ್ಯನೊಬ್ಬ ಈಗ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವತಿಗೆ ಖಾಯಿಲೆಯನ್ನು ಗುಣಪಡಿಸುವುದಾಗಿ ಹೇಳಿ ಈಗ ಆಕೆಗೆ ಪಂಗನಾಮ ಹಾಕಿ ಪೋಲಿಸರ ಅತಿಥಿಯಾಗಿದ್ದಾನೆ.

19 ರ ಹರೆಯದ ಯುವತಿಯೊಬ್ಬಳು ತನಗಿರುವ ಮಾನಸಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ವೈಧ್ಯನ ಮೊರೆಹೋಗಿದ್ದಳು. ಆದರೆ ಈ ವೈದ್ಯ ಆಕೆಯ ಖಾಯಿಲೆಯನ್ನು ಗುಣಪಡಿಸದೆ ಯುವತಿಯ ಬಳಿ ಸುಮಾರು 50 ಸಾವಿರ ಹಣವನ್ನು ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಈ ಯುವತಿಯಂತೆ ಹಲವು ದೂರುಗಳು ಈ ವೈದ್ಯನ ಮೇಲೆ ಬಂದಿದ್ದರಿಂದಾಗಿ ಸಂಶಯ ವ್ಯಕ್ತಪಡಿಸಿದ ಪೊಲೀಸರು ಈಗ ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಅವರು ದೆಹಲಿ ಹಾಗೂ ಮುಂಬಯಿನಲ್ಲಿ  ಸಂಸ್ಥೆಗಳನ್ನು ಹೊಂದಿದ್ದು ಬರುವ ರೋಗಿಗಳ ಹತ್ತಿರ ಖಾಯಿಲೆಯನ್ನು ಗುಣಪಡಿಸದೇ ಕೇವಲ ಹಣವನ್ನು ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
 

Trending News