ಬೇಸಿಗೆ ಅಂತ ಅಪ್ಪಿತಪ್ಪಿ ಈ ಸೂಪರ್‌ಫುಡ್‌ಗಳನ್ನು ತಿಂದ್ರು ತಕ್ಷಣವೇ ಏರಿಕೆಯಾಗುತ್ತೆ ಬ್ಲಡ್ ಶುಗರ್...!

Worst Foods For Diabetics: ಬೇಸಿಗೆ ಬಂತೆಂದರೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನದ್ದೇ ರಾಜ್ಯಭಾರ. ಮಾವಿನ ಹಣ್ಣು ಎಂದರೆ ಯಾರ ಬಾಯಲ್ಲಿ ತಾನೇ ನೀರೂರಲ್ಲ. ಆದರೆ, ಮಧುಮೇಹಿಗಳಿಗೆ ಈ ಹಣ್ಣು ಅಪಾಯಕಾರಿ ಆಗಿದೆ. ಕೇವಲ ಮಾವಿನ ಹಣ್ಣಷ್ಟೇ ಅಲ್ಲ ಮಧುಮೇಹಿಗಳಿಗೆ ಬೇಸಿಗೆಯಲ್ಲಿ ಕೆಲವು ಸೂಪರ್‌ಫುಡ್‌ಗಳನ್ನು ಅಪಾಯಕಾರಿ ಎನ್ನಲಾಗುತ್ತದೆ. 

Written by - Yashaswini V | Last Updated : Mar 27, 2025, 10:35 AM IST
  • ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಾಲು ತಾಜಾ ಹಣ್ಣುಗಳು, ಜ್ಯೂಸ್, ಸಲಾಡ್‌ಗಳು ಹಿತಕರವೆನಿಸುತ್ತವೆ.
  • ಹಾಗಾಗಿಯೇ ಅವನ್ನು ಬೇಸಿಗೆಯ ಸೂಪರ್‌ಫುಡ್‌ಗಳು ಎಂತಲೇ ಕರೆಯಲಾಗುತ್ತದೆ.
  • ಆದರೆ, ಬೇಸಿಗೆಯಲ್ಲಿ ಮಧುಮೇಹಿಗಳು ಅಪ್ಪಿತಪ್ಪಿ ಈ ಸೂಪರ್‌ಫುಡ್‌ಗಳನ್ನು ತಿಂದ್ರು ತಕ್ಷಣವೇ ಶುಗರ್ ಲೆವೆಲ್ ಏರಿಕೆಯಾಗುವ ಅಪಾಯ ಹೆಚ್ಚಿದೆ.
ಬೇಸಿಗೆ ಅಂತ ಅಪ್ಪಿತಪ್ಪಿ ಈ ಸೂಪರ್‌ಫುಡ್‌ಗಳನ್ನು ತಿಂದ್ರು ತಕ್ಷಣವೇ ಏರಿಕೆಯಾಗುತ್ತೆ ಬ್ಲಡ್ ಶುಗರ್...!

Summer Worst Foods For Sugar Patients: ಸಕ್ಕರೆ ಕಾಯಿಲೆ ಎಂದರೆ ಮಧುಮೇಹ ಇರುವವರು ತಮ್ಮ ಆಹಾರದ ಬಗ್ಗೆ ಸದಾ ಜಾಗರೂಕರಾಗಿರಬೇಕು. ಮಧುಮೇಹಿಗಳಲ್ಲಿ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾದಾಗ ಇನ್ಸುಲಿನ್ ನ ಕೊರತೆ ಉಂಟಾಗುತ್ತದೆ. ಈ ರೀತಿ ಬ್ಲಡ್ ಶುಗರ್ ಹೆಚ್ಚಾದಾಗ ದೇಹದಲ್ಲಿ ಮೂತ್ರಪಿಂಡದ ಹಾನಿ, ಹೃದಯಾಘಾತದ ಅಪಾಯಗಳು ಹೆಚ್ಚಾಗಬಹುದು. ಮಧುಮೇಹ ನಿಯಂತ್ರಣಕ್ಕೆ ಹಲವು ದಾರಿಗಳಿದ್ದರೂ ಸಹ ಆಹಾರ ನಿಯಂತ್ರಣ ಉತ್ತಮ ಮಾರ್ಗವಾಗಿದೆ. 

Add Zee News as a Preferred Source

ವಾಸ್ತವವಾಗಿ, ಕೆಲವು ಆಹಾರಗಳ ಸೇವನೆಯಿಂದ ಮಧುಮೇಹಿಗಳಲ್ಲಿ ಬ್ಲಡ್ ಶುಗರ್ ಕೂಡಲೇ ಏರಿಕೆಯಾಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಸೂಪರ್‌ಫುಡ್‌ ಎಂತಲೇ ಪ್ರಸಿದ್ದಿಯಾಗಿರುವ ಕೆಲವು ಆಹಾರಗಳು ಕೂಡ ಮಧುಮೇಹಿಗಳಿಗೆ ಹೆಚ್ಚಿನ ಅಪಾಯ ಉಂಟುಮಾಡುವ ಸಾಧ್ಯತೆ ಇದೆ. ಹಾಗಾಗಿಯೇ,  ಶುಗರ್ ಇರುವವರು ಯಾವುದೇ ಕಾರಣಕ್ಕೂ ಇಂತಹ ಆಹಾರಗಳನ್ನು ತಿನ್ನಲೇಬಾರದು ಎನ್ನಲಾಗುತ್ತದೆ. 

ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಾಲು ತಾಜಾ ಹಣ್ಣುಗಳು, ಜ್ಯೂಸ್, ಸಲಾಡ್‌ಗಳು ಹಿತಕರವೆನಿಸುತ್ತವೆ. ಹಾಗಾಗಿಯೇ ಅವನ್ನು ಬೇಸಿಗೆಯ ಸೂಪರ್‌ಫುಡ್‌ಗಳು ಎಂತಲೇ ಕರೆಯಲಾಗುತ್ತದೆ. ಆದರೆ, ಬೇಸಿಗೆಯಲ್ಲಿ ಮಧುಮೇಹಿಗಳು ಅಪ್ಪಿತಪ್ಪಿ ಈ ಸೂಪರ್‌ಫುಡ್‌ಗಳನ್ನು ತಿಂದ್ರು ತಕ್ಷಣವೇ ಶುಗರ್ ಲೆವೆಲ್ ಏರಿಕೆಯಾಗುವ ಅಪಾಯ ಹೆಚ್ಚಿದೆ. ಅಂತಹ ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ... 

ಇದನ್ನೂ ಓದಿ- ಔಷಧಿಯೇ ಬೇಡ.. ಮಧುಮೇಹಿಗಳು ಬೆಳಿಗ್ಗೆ ಎದ್ದ ಕೂಡಲೇ ಈ ಮರದ ಮೂರ್ನಾಲ್ಕು ಎಲೆಗಳನ್ನು ಕಿತ್ತು ತಿಂದರೆ ಶುಗರ್ ಯಾವತ್ತೂ ಹೆಚ್ಚಾಗಲ್ಲ! 

* ಕಲ್ಲಂಗಡಿ ಹಣ್ಣು: 
ಕಲ್ಲಂಗಡಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ಈ ಹಣ್ಣಿನಲ್ಲಿ ಗ್ಲೈಸೆಮಿಕ್ ಸೂಚ್ಯಂಕ (GI) ಅಧಿಕವಾಗಿರುತ್ತದೆ. ಇದು ಮಧುಮೇಹಿಗಳಲ್ಲಿ ತ್ವರಿತ ಶುಗರ್ ಲೆವೆಲ್ ಏರಿಕೆಗೆ ಕಾರಣವಾಗುತ್ತದೆ. ಹಾಗಾಗಿ, ಶುಗರ್ ಸಮಸ್ಯೆ ಇದ್ದವರು ಈ ಹಣ್ಣನ್ನು ತಿನ್ನಬಾರದು. 

* ಮಾವಿನ ಹಣ್ಣು: 
ಹಣ್ಣುಗಳ ರಾಜ ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ. ಆದರೆ, ಹೆಚ್ಚಿನ ಗ್ಲೈಸೆಮಿಕ್ ಸೂಚಿ ಹೊಂದಿರುವ ಈ ಹಣ್ಣಿನಲ್ಲಿ ಅಧಿಕ ಪ್ರಮಾಣದ ಸಕ್ಕರೆಯೂ ಇರುವುದರಿಂದ ಮಧುಮೇಹಿಗಳಿಗೆ ಇದು ವಿಷವಿದ್ದಂತೆಯೇ ಸರಿ. 

* ಎಳನೀರು: 
ಬೇಸಿಗೆಯಲ್ಲಿ ಎಳನೀರು ಅಮೃತಕ್ಕಿಂತಲೂ ಕಡಿಮೆ ಇಲ್ಲ ಎಂತಲೇ ಹೇಳಬಹುದು. ಆದರೆ, ಮಧುಮೇಹಿಗಳು ಎಳನೀರು ಕುಡಿದರೆ ಶುಗರ್ ಏರುಪೇರಾಗುವ ಸಂಭವವಿರುತ್ತದೆ. 

ಇದನ್ನೂ ಓದಿ- ಖಾಲಿ ಹೊಟ್ಟೆಯಲ್ಲಿ ಶುಗರ್ ಲೆವೆಲ್  250 mg/dl ಕ್ಕಿಂತ ಹೆಚ್ಚಿದ್ಯಾ... ಚಿಂತೆಬಿಡಿ, ಈ 2 ತರಕಾರಿಯನ್ನು ಹಸಿಯಾಗಿ ತಿನ್ನಿ ಕೂಡಲೇ ನಿಯಂತ್ರಣಕ್ಕೆ ಬರುತ್ತೆ ಬ್ಲಡ್ ಶುಗರ್ 

* ಬಾಳೆಹಣ್ಣು: 
ಬಾಳೆಹಣ್ಣಿನಲ್ಲಿಯೂ ಕೂಡ ಗ್ಲೈಸೆಮಿಕ್ ಮಟ್ಟ ಅಧಿಕವಾಗಿರುತ್ತದೆ. ಹಾಗಾಗಿ, ಶುಗರ್ ಇರುವವರು ಬಾಳೆಹಣ್ಣನ್ನು ಅದರಲ್ಲೂ ಪಚ್ಚಬಾಳೆಹಣ್ಣನ್ನು ತಿನ್ನುವುದನ್ನು ತಪ್ಪಿಸಬೇಕು. 

ಇದಲ್ಲದೆ, ತಂಪು ಪಾನೀಯಗಳು, ಇತರ ಸಿಹಿಕಾರಕಗಳನ್ನು ಕೂಡ ನಿಮ್ಮ ಆಹಾರದಿಂದ ದೂರ ಇಟ್ಟರೆ ಒಳಿತು. ಇಲ್ಲವೇ ಮಧುಮೇಹಿಗಳಲ್ಲಿ ಇತರ ರೋಗಗಳ ಅಪಾಯ ಹೆಚ್ಚಾಗುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News