ನಿತ್ಯ ತುಳಸಿ ಗಿಡಕ್ಕೆ ಈ ವಸ್ತುವನ್ನು ಅರ್ಪಿಸಿದರೆ ಮನೆಯಲ್ಲಿ ಎಂದೆಂದೂ ಕಾಡುವುದಿಲ್ಲ ಆರ್ಥಿಕ ಸಮಸ್ಯೆ!
Tulsi Plant Tips: ತುಳಸಿ ಗಿಡದಿಂದ ಧನಾತ್ಮಕ ಶಕ್ತಿಯು ಮನೆಯಲ್ಲಿ ಪರಿಚಲನೆಯಾಗುತ್ತಲೇ ಇರುತ್ತದೆ. ಅಂದಹಾಗೆ ತುಳಸಿ ಗಿಡಕ್ಕೆ ನಿಯಮಿತವಾಗಿ ನೀರನ್ನು ಹಾಕುತ್ತಿದ್ದರೆ, ಆ ಮನೆಯಲ್ಲಿ ಎಂದಿಗೂ ಆರ್ಥಿಕ ಬಿಕ್ಕಟ್ಟು ಬರುವುದಿಲ್ಲ.
Tulsi Plant Tips: ಹಿಂದೂ ಧರ್ಮದಲ್ಲಿ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ಹರಿ ಮತ್ತು ಮಹಾಲಕ್ಷ್ಮಿ ತುಳಸಿ ಗಿಡದಲ್ಲಿ ನೆಲೆಸಿರುತ್ತಾರೆ. ಆದ್ದರಿಂದ, ತುಳಸಿ ಗಿಡ ಎಲ್ಲಿದೆಯೋ ಅಲ್ಲಿ ಶ್ರೀಹರಿ ಮತ್ತು ಲಕ್ಷ್ಮಿಯ ವಿಶೇಷ ಅನುಗ್ರಹ ಇದ್ದೇ ಇರುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ, ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ತುಳಸಿ ಗಿಡ ಇದ್ದರೆ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂದರ್ಥ.
ತುಳಸಿ ಗಿಡದಿಂದ ಧನಾತ್ಮಕ ಶಕ್ತಿಯು ಮನೆಯಲ್ಲಿ ಪರಿಚಲನೆಯಾಗುತ್ತಲೇ ಇರುತ್ತದೆ. ಅಂದಹಾಗೆ ತುಳಸಿ ಗಿಡಕ್ಕೆ ನಿಯಮಿತವಾಗಿ ನೀರನ್ನು ಹಾಕುತ್ತಿದ್ದರೆ, ಆ ಮನೆಯಲ್ಲಿ ಎಂದಿಗೂ ಆರ್ಥಿಕ ಬಿಕ್ಕಟ್ಟು ಬರುವುದಿಲ್ಲ. ಜೊತೆಗೆ ಹಣದ ಸುರಿಮಳೆಯಾಗುತ್ತದೆ. ಇನ್ನು ಯಾವ ದಿನ ತುಳಸಿಗೆ ನೈವೇದ್ಯ ಮಾಡಿದರೆ ಸಂಪತ್ತಿನ ಮಳೆ ತರುತ್ತದೆ ಎಂಬುದನ್ನು ವಿವರವಾಗಿ ತಿಳಿಯೋಣ.
ಇದನ್ನೂ ಓದಿ: ಈ ಜನ್ಮರಾಶಿಗಳಿಗೆ ಮುಂಬರುವ ದಿನಗಳೆಲ್ಲಾ ಹಬ್ಬವೋ ಹಬ್ಬ: ಅದೃಷ್ಟಮಯ ಬಾಳಲ್ಲಿ ಸಾಲು ಸಾಲು ವಿಜಯಗಳೇ ಬೆನ್ನೇರುವುದು!
ದಾರಿದ್ರ್ಯ ದೂರ
ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರೀಹರಿಯು ತುಳಸಿಯ ಉಪಸ್ಥಿತಿಯಿಲ್ಲದೆ ಭೋಗವನ್ನು ಸ್ವೀಕರಿಸುವುದಿಲ್ಲ. ಇದೇ ಕಾರಣದಿಂದ ತುಳಸಿಯನ್ನು ಮನಃಪೂರ್ವಕವಾಗಿ ಪೂಜಿಸಿದರೆ ಅವರ ಮನೆಗೆ ಸಾಕ್ಷಾತ್ ನಾರಾಯಣ ಆಗಮಿಸುವುದಲ್ಲದೆ, ಬಡತನ-ದಾರಿದ್ರ್ಯವನ್ನು ದೂರಮಾಡುತ್ತಾರೆ ಎಂಬ ನಂಬಿಕೆ ಇದೆ.
ಪಾಪನಾಶ:
ಒಬ್ಬ ವ್ಯಕ್ತಿಯು ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ, ಆತ ತುಳಸಿ ಗಿಡಕ್ಕೆ ನಿಯಮಿತವಾಗಿ ನೀರನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
ನಕಾರಾತ್ಮಕ ಶಕ್ತಿ ದೂರ:
ಪ್ರತಿದಿನ ತುಳಸಿಗೆ ನೀರನ್ನು ಅರ್ಪಿಸಿದರೆ, ಮನೆಯಿಂದ ನಕಾರಾತ್ಮಕತೆಯು ಶಾಶ್ವತವಾಗಿ ದೂರ ಹೋಗುತ್ತದೆ. ಇದರೊಂದಿಗೆ ಧನಾತ್ಮಕ ಶಕ್ತಿಯು ಹರಡುತ್ತದೆ.
ನೀರನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಿ:
ಜ್ಯೋತಿಷ್ಯದ ಪ್ರಕಾರ, ತುಳಸಿಗೆ ನೀರನ್ನು ಅರ್ಪಿಸುವಾಗ ನೀವು 11 ಬಾರಿ ‘ಓಂ ಸುಭದ್ರಾಯ ನಮಃ’ ಎಂದು ಜಪಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿರುವ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ. ಅಲ್ಲದೆ, ಲಕ್ಷ್ಮಿ ದೇವಿಯ ವಿಶೇಷ ಕೃಪೆಯಿಂದಾಗಿ, ಸಂಪತ್ತು ಸುರಿಯುತ್ತದೆ.
ಇದನ್ನೂ ಓದಿ: ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ತತ್ತರ: 2ನೇ ಟೆಸ್ಟ್’ನಲ್ಲಿ 106 ರನ್’ಗಳ ಭರ್ಜರಿ ಗೆಲುವು
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ