ರಾಸಾಯನಿಕ ಬಳಸಿ ಹಣ್ಣಾಗಿಸಿರುವ ಮಾವನ್ನು ಈ ಎರಡು ವಿಧಾನಗಳಿಂದ ಕಂಡು ಹಿಡಿಯಿರಿ ! ಕಾರ್ಬೈಡ್ ನಿಂದ ಮಾಗಿದ ಹಣ್ಣು ತಿಂದರೆ ಆವರಿಸುವುದು ಈ ಕಾಯಿಲೆ

How to know if mango is ripened with chemicals: ಆಹಾರ ತಪಾಸಣೆಯಲ್ಲಿ ತೊಡಗಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಹಣ್ಣುಗಳನ್ನು ಮಾಗಿಸಲು ಬಳಸುವ ಕ್ಯಾಲ್ಸಿಯಂ ಕಾರ್ಬೈಡ್ ಬಳಕೆಯ ಬಗ್ಗೆ ಎಚ್ಚರಿಕೆ ನೀಡಿದೆ  

Written by - Ranjitha R K | Last Updated : Apr 7, 2025, 03:24 PM IST
  • ಬೇಸಿಗೆ ಕಾಲ ಬಂದ ತಕ್ಷಣ, ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
  • ಮಾವಿನ ರುಚಿಯನ್ನು ಸವಿಯಲು ಇಷ್ಟಪಡದವರಿಲ್ಲ.
  • ಮಾವಿನಕಾಯಿ ತಾನಾಗಿ ಬಲಿತ ಮೇಲೆ ಅದರ ರುಚಿ ದುಪ್ಪಟ್ಟಾಗುತ್ತದೆ.
ರಾಸಾಯನಿಕ ಬಳಸಿ ಹಣ್ಣಾಗಿಸಿರುವ ಮಾವನ್ನು ಈ ಎರಡು ವಿಧಾನಗಳಿಂದ ಕಂಡು ಹಿಡಿಯಿರಿ ! ಕಾರ್ಬೈಡ್ ನಿಂದ ಮಾಗಿದ ಹಣ್ಣು ತಿಂದರೆ ಆವರಿಸುವುದು ಈ ಕಾಯಿಲೆ

How to know if mango is ripened with chemicals : ಬೇಸಿಗೆ ಕಾಲ ಬಂದ ತಕ್ಷಣ, ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮಾವಿನ ರುಚಿಯನ್ನು ಸವಿಯಲು ಇಷ್ಟಪಡ ದವರಿಲ್ಲ. ಮಾವಿನಕಾಯಿ ತಾನಾಗಿ ಬಲಿತ ಮೇಲೆ ಅದರ ರುಚಿ ದುಪ್ಪಟ್ಟಾಗುತ್ತದೆ. ಆದರೆ ರಾಸಾಯನಿಕಗಳ (ಕಾರ್ಬೈಡ್ ಬಳಸಿ ಮಾಗಿದ ಮಾವು) ಸಹಾಯದಿಂದ ಹಣ್ಣಾಗಿಸಿದ ಮಾವಿನಹಣ್ಣು ಆರೋಗ್ಯಕ್ಕೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು.(Carbide ripe mango harmful for health). ಮಾವಿನ ಹಣ್ಣುಗಳನ್ನು ಹಣ್ಣಾಗಿಸಲು ಸಾಮಾನ್ಯವಾಗಿ ಕಾರ್ಬೈಡ್ ಬಳಸಲಾಗುತ್ತದೆ. ಆಹಾರ ತಪಾಸಣೆಯಲ್ಲಿ ತೊಡಗಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಹಣ್ಣುಗಳನ್ನು ಮಾಗಿಸಲು ಬಳಸುವ ಕ್ಯಾಲ್ಸಿಯಂ ಕಾರ್ಬೈಡ್ ಬಳಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ರಾಸಾಯನಿಕವಾಗಿ ಮಾಗಿದ ಮಾವಿನಹಣ್ಣುಗಳು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಮತ್ತು ರಾಸಾಯನಿಕವಾಗಿ ಮಾಗಿದ ಮಾವಿನಹಣ್ಣುಗಳನ್ನು ಹೇಗೆ ಪರಿಶೀಲಿಸುವುದು ನೋಡೋಣ. 

Add Zee News as a Preferred Source

ಕಾರ್ಬೈಡ್ ಆರೋಗ್ಯಕ್ಕೆ ಅಪಾಯಕಾರಿ : 
ಕಾರ್ಬೈಡ್ ಸೇವನೆಯಿಂದ ತಲೆತಿರುಗುವಿಕೆ, ಬಾಯಾರಿಕೆ, ಕಿರಿಕಿರಿ, ದೌರ್ಬಲ್ಯ, ನುಂಗಲು ತೊಂದರೆ, ವಾಂತಿ ಮತ್ತು ಚರ್ಮದ ಹುಣ್ಣುಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇದರೊಂದಿಗೆ, ಉಸಿರಾಟದ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು, ಚರ್ಮದ ಅಲರ್ಜಿಗಳು ಮತ್ತು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳ ಅಪಾಯವಿದೆ.

ಇದನ್ನೂ ಓದಿ : Weight Loss: ಮುಕೇಶ್‌ ಅಂಬಾನಿ ಅವರ ಮಗ ಅನಂತ್‌ ಅಂಬಾನಿ 18 ತಿಂಗಳಲ್ಲಿ 108 ಕೆಜಿ ಇಳಿಸಿಕೊಂಡಿದ್ದು ಹೇಗೆ ಗೊತ್ತಾ? ಇವರ ಡಯಟ್‌ ಸೀಕ್ರೆಟ್‌ ಇಷ್ಟೆ ಅಂತೆ

ಕಾರ್ಬೈಡ್ ಬಳಸಿ ಹಣ್ಣಾದ ಮಾವಿನ ಹಣ್ಣುಗಳನ್ನು ಹೇಗೆ ಪರಿಶೀಲಿಸುವುದು?
ಮಾವಿನಹಣ್ಣುಗಳನ್ನು ತಿನ್ನುವ ಮೊದಲು ಅವುಗಳನ್ನು ಪರೀಕ್ಷಿಸಲು ಮರೆಯದಿರಿ. ಮಾವಿನ ಹಣ್ಣುಗಳನ್ನು ಕಾರ್ಬೈಡ್ ಬಳಸಿ ಹಣ್ಣಾಗಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸುವ ಸರಳ ವಿಧಾನ ಇಲ್ಲಿದೆ. ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಮಾವಿನ ಹಣ್ಣುಗಳನ್ನು ಒಂದೊಂದಾಗಿ ನೀರಿನಲ್ಲಿ ಹಾಕಿ. ಮಾವಿನ ಹಣ್ಣು ಮುಳುಗಿದರೆ ಅದರಲ್ಲಿ ರಾಸಾಯನಿಕ ಬಳಸಿಲ್ಲ, ಆದರೆ ಅದು ಮುಳುಗದೆ ನೀರಿನಲ್ಲಿ ತೇಲುತ್ತಿದ್ದರೆ ಅದನ್ನು ರಾಸಾಯನಿಕ ಬಳಸಿ ಮಾಗಿಸಲಾಗಿದೆ ಎಂದರ್ಥ. ಅಂದರೆ ಆ ಹಣ್ಣನ್ನು ತಿನ್ನಲೇಬೇಡಿ.

 

ಇದಲ್ಲದೆ, ಕಾರ್ಬೈಡ್ ಬಳಸಿ ಹಣ್ಣಾಗಿಸಿದ ಮಾವಿನ ಹಣ್ಣುಗಳ ಮೇಲೆ ಕಪ್ಪು ಮತ್ತು ಬಿಳಿ ಚುಕ್ಕೆಗಳು ಗೋಚರಿಸುತ್ತವೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಮಾವಿನ ಹಣ್ಣು ತಿನ್ನುವ ಮೊದಲು ಅದು ನೈಸರ್ಗಿಕವಾಗಿ ಹಣ್ಣಾದ ಮಾವು ಎನ್ನುವುದನ್ನು ಖಚಿತಪಡಿಸಿಕೊಳ್ಳಿ.  ಯಾವುದೇ ಕಾರಣಕ್ಕೂ ಎಷ್ಟೇ ಆಸೆ ಇದ್ದರೂ ಕೆಮಿಕಲ್ ಬಳಸಿದ ಹಣ್ಣನ್ನು ಮಾತ್ರ ಸೇವಿಸಬೇಡಿ.  ಮಾವಿನ ಹಣ್ಣುಗಳನ್ನು ತಿನ್ನುವ ಮೊದಲು, ಮಾವಿನ ಹಣ್ಣುಗಳನ್ನು ರಾಸಾಯನಿಕಗಳ ಸಹಾಯದಿಂದ ಹಣ್ಣಾಗಿಸಲಾಗಿದೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ.  

ಇದನ್ನೂ ಓದಿ : ಹೆಚ್ಚು ಹೊತ್ತು ಮೂತ್ರ ತಡೆದರೇ ಕಿಡ್ನಿ ಸ್ಟೋನ್‌ ಆಗುತ್ತವೆಯೇ? ತಜ್ಞರು ಏನಂತಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News