ಹಾಲಿನೊಂದಿಗೆ ಮಖಾನಾ ಬೆರೆಸಿ ತಿಂದ್ರೆ ಸುಲಭವಾಗಿ ಕರಗುತ್ತೆ ಹೊಟ್ಟೆ ಬೊಜ್ಜು, ಜಿಮ್, ವ್ಯಾಯಾಮ ಇಲ್ಲದೆಯೂ ಇಳಿಯುತ್ತೆ ತೂಕ

Makhana Benefits: ಮಖಾನಾ ಅಂದ್ರೆ ತಾವರೆಬೀಜಗಳು ಅಪಾರ ಆರೋಗ್ಯ ಲಾಭಗಳನ್ನು ಹೊಂದಿವೆ. ಅದರಲ್ಲೂ ಹಾಲಿನೊಂದಿಗೆ ಮಖಾನಾ ಸೇವಿಸಿದ್ರೆ ಜಿಮ್, ವ್ಯಾಯಾಮ ಇಲ್ಲದೆಯೂ ಸುಲಭವಾಗಿ ತೂಕ ಇಳಿಸಬಹುದಂತೆ.  

Written by - Yashaswini V | Last Updated : Mar 31, 2025, 03:23 PM IST
  • ಮಖಾನಾ ಅಥವಾ ತಾವರೆ ಬೀಜಗಳು ಆರೋಗ್ಯಕ್ಕೆ ಹತ್ತು ಹಲವು ಪ್ರಯೋಜನಗಳನ್ನು ಹೊಂದಿದೆ.
  • ಮಖಾನಾವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ಸುಲಭವಾಗಿ ತೂಕ ಇಳಿಸಬಹುದು
  • ಬಿ‌ಪಿ, ಶುಗರ್ ನಿಯಂತ್ರಣಕ್ಕೂ ಲಾಭದಾಯಕ ಮಖಾನಾ
ಹಾಲಿನೊಂದಿಗೆ ಮಖಾನಾ ಬೆರೆಸಿ ತಿಂದ್ರೆ ಸುಲಭವಾಗಿ ಕರಗುತ್ತೆ ಹೊಟ್ಟೆ ಬೊಜ್ಜು, ಜಿಮ್, ವ್ಯಾಯಾಮ ಇಲ್ಲದೆಯೂ ಇಳಿಯುತ್ತೆ ತೂಕ

Lotus Seeds Benefits: ಮಖಾನಾ ಅಥವಾ ತಾವರೆ ಬೀಜಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಮಖಾನಾವನ್ನು ಹಾಲಿನೊಂದಿಗೆ ತಿನ್ನುವುದರಿಂದ ಇದರ ಆರೋಗ್ಯ ಪ್ರಯೋಜನಗಳು ದುಪ್ಪಟ್ಟು ಹೆಚ್ಚಾಗುತ್ತದೆ. ಹಾಗಾದರೆ ಮಖಾನಾ ಅಥವಾ ತಾವರೆ ಬೀಜಗಳನ್ನು ಹಾಲಿನೊಂದಿಗೆ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯಲು ಮುಂದೆ ಓದಿ...  

Add Zee News as a Preferred Source

ನಿದ್ರಾಹೀನತೆಗೆ ಪರಿಹಾರ: 
ಆರೋಗ್ಯ ತಜ್ಞರ ಪ್ರಕಾರ, ಮಖಾನಾಗಳ ಸೇವನೆಯಿಂದ ದೇಹದಲ್ಲಿ ಮೆಲಟೋನಿನ್ ಹಾರ್ಮೋನ್ ಹೆಚ್ಚಾಗುತ್ತದೆ. ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ ತಾವರೆ ಬೀಜಗಳನ್ನು ನೆನೆಸಿ ಕುಡಿಯುವುದರಿಂದ ಇದು ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. 

ಇದನ್ನೂ ಓದಿ- Onion For Diabetes: ಮಧುಮೇಹಕ್ಕೆ ಈರುಳ್ಳಿ ಮದ್ದು.. ಈ ರೀತಿ ಸೇವಿಸಿ ಔಷಧಿಯೇ ಇಲ್ಲದೆ ನಾರ್ಮಲ್‌ಗೆ ಬರುತ್ತೆ ಶುಗರ್‌!

ಮಧುಮೇಹ ನಿಯಂತ್ರಣ: 
ಮಖಾನಾ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದ್ದು ಬ್ಲಡ್ ಶುಗರ್ ಅನ್ನು ಸುಲಭವಾಗಿ ನಿಯಂತ್ರಿಸುವ ಔಷಧೀಯ ಗುಣ ಇದರಲ್ಲಿದೆ. ಮಧುಮೆಹಿಗಳು ಶುಗರ್ ಲೆಸ್ ಹಾಲಿನಲ್ಲಿ ಮಖಾನಾ ಬೆರೆಸಿ ಕುಡಿಯುವುದರಿಂದ ಶುಗರ್ ಹೆಚ್ಚಾಗದಂತೆ ತಡೆಯಬಹುದು. 

ತೂಕ ನಿಯಂತ್ರಣ: 
ತಾವರೆ ಬೀಜಗಳು ಕಡಿಮೆ ಕ್ಯಾಲೊರಿಗಳು ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ. ಹಾಗಾಗಿ, ಇದರ ಸೇವನೆಯಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತೆ ಇರುತ್ತದೆ. ಹಾಲು ಮತ್ತು ಮಖಾನಾವನ್ನು ಒಟ್ಟಿಗೆ ಬೆರೆಸಿ ಕುಡಿಯುವುದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಜೊತೆಗೆ ವ್ಯಾಯಾಮ, ಜಿಮ್ ಸಹಾಯವಿಲ್ಲದೆ ಆರೋಗ್ಯಕರವಾಗಿ ತೂಕ ಇಳಿಸಬಹುದು.  

 ದೈಹಿಕ  ಶಕ್ತಿ:
ಮಖಾನಾದಲ್ಲಿ ಪ್ರೋಟೀನ್ ಹೆರಳವಾಗಿದ್ದು ಇದು ದಿನ ಪೂರ್ತಿ ದೇಹಕ್ಕೆ ಶಂಕಿಯನ್ನು ನೀಡುತ್ತದೆ. ಇದನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಇದರ ಶಕ್ತಿ ದುಪ್ಪಟ್ಟಾಗುತ್ತದೆ. ಇದು ದೈಹಿಕ ಶಕ್ತಿ ಹೆಚ್ಚಿಸುವಲ್ಲಿ ಪರಿಣಾಮಕಾರಿ ಎನ್ನಲಾಗುತ್ತದೆ. 

ಇದನ್ನೂ ಓದಿ- ಮಧುಮೇಹಕ್ಕೆ ರಾಮಬಾಣ ಈ ನೀರು! ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಶುಗರ್‌ ಸಂಪೂರ್ಣ ನಾರ್ಮಲ್‌ ಇರುತ್ತೆ..

ಹೃದ್ರೋಗದ ಅಪಾಯ ಕಡಿಮೆ: 
ಮಖಾನಾದಲ್ಲಿ ಸೋಡಿಯಂ ಅಂಶ ಕಡಿಮೆ ಇರುವುದರಿಂದ ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಲು ಸಹಕಾರಿ ಆಗಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News