ಮಧುಮೇಹಿಗಳಿಗೆ ಕೇವಲ ಸಕ್ಕರೆ ಮಾತ್ರವಲ್ಲ ಈ ಮೂರು ವಸ್ತು ಕೂಡಾ ವಿಷವೇ! ಹೃದಯವನ್ನೇ ವೀಕ್ ಮಾಡಿ ಬಿಡುತ್ತದೆ ಈ ಆಹಾರಗಳು !

ಬ್ಲಡ್ ಶುಗರ್ ಇದ್ದಾಗ ಕೆಲವು ಪದಾರ್ಥಗಳನ್ನು ಅತಿಯಾಗಿ ಸೇವಿಸಿದರೆ, ಹೃದಯ ಕಾಯಿಲೆಯಂತಹ ಮಾರಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುವ ಅಪಾಯವಿರುತ್ತದೆ. 

Written by - Ranjitha R K | Last Updated : Mar 5, 2025, 04:55 PM IST
  • ಮಧುಮೇಹ ಕಾಯಿಲೆಯಲ್ಲಿ ದೇಹವು ಇನ್ಸುಲಿನ್ ಉತ್ಪಾದಿಸುವುದನ್ನು ಕಡಿಮೆ ಮಾಡುತ್ತದೆ
  • ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆಯನ್ನು ಮಾರಕವಾಗಿಸುವ ಆಹಾರಗಳ ಸೇವನೆಯನ್ನು ಮಿತಿಗೊಳಿಸಬೇಕು.
  • ಕೆಲವು ಆಹಾರಗಳು ರಕ್ತದ ಸಕ್ಕರೆಯನ್ನು ಹೆಚ್ಚು ಮಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಕ್ಷೀಣಿಸುತ್ತದೆ.
ಮಧುಮೇಹಿಗಳಿಗೆ ಕೇವಲ ಸಕ್ಕರೆ ಮಾತ್ರವಲ್ಲ ಈ ಮೂರು ವಸ್ತು ಕೂಡಾ ವಿಷವೇ! ಹೃದಯವನ್ನೇ ವೀಕ್ ಮಾಡಿ ಬಿಡುತ್ತದೆ ಈ ಆಹಾರಗಳು !

ಬೆಂಗಳೂರು : ಮಧುಮೇಹ ಕಾಯಿಲೆಯಲ್ಲಿ ದೇಹವು ಇನ್ಸುಲಿನ್ ಉತ್ಪಾದಿಸುವುದನ್ನು ಕಡಿಮೆ ಮಾಡುತ್ತದೆ ಅಥವಾ ಅದನ್ನು ಸರಿಯಾಗಿ ಬಳಸುವುದನ್ನು ನಿಲ್ಲಿಸುತ್ತದೆ. ಮಧುಮೇಹ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ರೋಗಿಯ ಆಹಾರವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮಧುಮೇಹ ರೋಗಿಗಳು ರಕ್ತದಲ್ಲಿನ ಸಕ್ಕರೆಯನ್ನು ಮಾರಕವಾಗಿಸುವ ಆಹಾರಗಳ ಸೇವನೆಯನ್ನು ಮಿತಿಗೊಳಿಸಬೇಕು.

Add Zee News as a Preferred Source

ಬ್ಲಡ್ ಶುಗರ್ ಇದ್ದಾಗ ಕೆಲವು ಪದಾರ್ಥಗಳನ್ನು ಅತಿಯಾಗಿ ಸೇವಿಸಿದರೆ, ಹೃದಯ ಕಾಯಿಲೆಯಂತಹ ಮಾರಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುವ ಅಪಾಯವಿರುತ್ತದೆ. ಕೆಲವು ಆಹಾರಗಳು ರಕ್ತದ ಸಕ್ಕರೆಯನ್ನು ಹೆಚ್ಚು ಮಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಕ್ಷೀಣಿಸುತ್ತದೆ. 

ಇದನ್ನೂ ಓದಿ : ಬರೀ ಹಲ್ಲು ಮಾತ್ರವಲ್ಲ ನಾಲಿಗೆ ಕ್ಲೀನ್‌ ಮಾಡದೇ ಇದ್ರು ಬರುತ್ತೆ ನೂರೆಂಟು ರೋಗ! ಇನ್ನೂ ಡೌಟ್‌ ಇದ್ರೆ ಈ ಸ್ಟೋರಿ ಓದಿ..

ಬೆಲ್ಲ :ತಜ್ಞರ ಪ್ರಕಾರ, ಸಕ್ಕರೆಯಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಲ್ಲ ಸೇವಿಸುವುದರಿಂದ ಸಕ್ಕರೆ ಮಟ್ಟ ಹೆಚ್ಚಾಗಬಹುದು.  ಇದು ಮಧುಮೇಹ ರೋಗಿಗಳಿಗೆ ಆರೋಗ್ಯಕರವಲ್ಲ. ಬೆಲ್ಲವು ಸಕ್ಕರೆಗಿಂತ 100% ಆರೋಗ್ಯಕರ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಮಧುಮೇಹಿಗಳಿಗೆ ಸಕ್ಕರೆ ಬದಲಿಗೆ ಬೆಲ್ಲ ಆಯ್ಕೆ ಅಲ್ಲ. 

ಬಿಳಿ ಉಪ್ಪು :ಮಧುಮೇಹದಿಂದ ಬಳಲುತ್ತಿರುವ ಜನರು ಅಧಿಕ ರಕ್ತದೊತ್ತಡದಿಂದ ಪ್ರಭಾವಿತರಾಗುವ ಸಾಧ್ಯತೆ ಹೆಚ್ಚು. ಇದು ಹೃದಯ ಕಾಯಿಲೆ, ಪಾರ್ಶ್ವವಾಯು, ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಉಪ್ಪು ಸೇವನೆಯು ರಕ್ತದಲ್ಲಿನ ಸಕ್ಕರೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಉಪ್ಪನ್ನು ಸೀಮಿತಗೊಳಿಸುವುದರಿಂದ ಅಥವಾ ಕಲ್ಲು ಉಪ್ಪಿಗೆ ಬದಲಾಯಿಸುವುದರಿಂದ ಮಧುಮೇಹದ ತೊಂದರೆಗಳಿಂದ ಖಂಡಿತವಾಗಿಯೂ ರಕ್ಷಿಸಬಹುದು.

ಇದನ್ನೂ ಓದಿ : ಹಲವು ರೋಗಗಳಿಗೆ ರಾಮಬಾಣ ಈ ಹಸಿರು ಟೊಮೆಟೊ..! ಅವುಗಳನ್ನು ಸೇವಿಸುವುದು ಹೇಗೆ ಗೊತ್ತಾ?

ಮೊಸರು :ಮೊಸರಿನ ಸ್ವಭಾವ ಬಿಸಿಯಾಗಿರುತ್ತದೆ. ಇದರಿಂದಾಗಿ ಅದನ್ನು ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಮಧುಮೇಹದಲ್ಲಿ ಜೀರ್ಣಕ್ರಿಯೆ ದುರ್ಬಲಗೊಳ್ಳುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಮೊಸರು ಸೇವಿಸುವುದರಿಂದ ಬೊಜ್ಜು, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳು ಹೆಚ್ಚಾಗಬಹುದು. ಆದರೆ ಮಧುಮೇಹ ರೋಗಿಗಳು ಸಾಂದರ್ಭಿಕವಾಗಿ ಮಜ್ಜಿಗೆಯನ್ನು ಸೇವಿಸಬಹುದು.

(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News