ರಾತ್ರಿ ಮಲಗುವ ಮುನ್ನ ದೇಹದ ಈ ಭಾಗಕ್ಕೆ ಆಲಿವ್ ಎಣ್ಣೆ ಹಚ್ಚಿದರೆ ಮುದುಕರಾಗುವವರೆಗೂ ಹಾರ್ಟ್ ಅಟ್ಯಾಕ್ ಆಗುವುದೇ ಇಲ್ಲ ! ಹೃದ್ರೋಗ ತಡೆಯಲು ಇದೇ ಮದ್ದು

ಆಯುರ್ವೇದದಲ್ಲಿ ಎಲ್ಲಾ ಕಾಯಿಲೆಗಳಿಗೂ ನೈಸರ್ಗಿಕ ಪರಿಹಾರ ನೀಡಲಾಗುತ್ತದೆ. ಇದು ಯಾವುದೇ ಅಡ್ಡ ಪರಿಣಾಮ ಇಲ್ಲದೆ ಅನೇಕ ಅಪಾಯಕಾರಿ ಕಾಯಿಲೆಗಳನ್ನು ಹೋಗಲಾಡಿಸುತ್ತದೆ.    

Written by - Ranjitha R K | Last Updated : Apr 28, 2025, 06:22 PM IST
  • ಆಯುರ್ವೇದದಲ್ಲಿಅತ್ಯಂತ ಗಂಭೀರ ಕಾಯಿಲೆಗಳಿಗೂ ನೈಸರ್ಗಿಕವಾಗಿ ಚಿಕಿತ್ಸೆ
  • ಈ ವಿಧಾನಗಳಲ್ಲಿ ಹೊಕ್ಕುಳಿನ ಮೇಲೆ ಎಣ್ಣೆ ಹಚ್ಚುವುದು ಕೂಡಾ ಸೇರಿದೆ.
  • ಹೊಕ್ಕುಳಿನ ಮೇಲೆ ಹಲವು ರೀತಿಯ ಎಣ್ಣೆಗಳನ್ನು ಹಚ್ಚಲು ಶಿಫಾರಸು
ರಾತ್ರಿ ಮಲಗುವ ಮುನ್ನ ದೇಹದ ಈ ಭಾಗಕ್ಕೆ ಆಲಿವ್ ಎಣ್ಣೆ ಹಚ್ಚಿದರೆ  ಮುದುಕರಾಗುವವರೆಗೂ ಹಾರ್ಟ್ ಅಟ್ಯಾಕ್ ಆಗುವುದೇ ಇಲ್ಲ ! ಹೃದ್ರೋಗ ತಡೆಯಲು ಇದೇ  ಮದ್ದು

ಬೆಂಗಳೂರು : ಆಯುರ್ವೇದದಲ್ಲಿಅತ್ಯಂತ ಗಂಭೀರ ಕಾಯಿಲೆಗಳಿಗೂ ನೈಸರ್ಗಿಕವಾಗಿ ಚಿಕಿತ್ಸೆ ನೀಡಬಹುದು. ಈ ವಿಧಾನಗಳಲ್ಲಿ ಹೊಕ್ಕುಳಿನ ಮೇಲೆ ಎಣ್ಣೆ ಹಚ್ಚುವುದು ಕೂಡಾ ಸೇರಿದೆ. ತುಪ್ಪ, ಸಾಸಿವೆ ಎಣ್ಣೆ, ಆಲಿವ್ ಎಣ್ಣೆ ಇತ್ಯಾದಿಗಳನ್ನು ಒಳಗೊಂಡಂತೆ ಹೊಕ್ಕುಳಿನ ಮೇಲೆ ಹಲವು ರೀತಿಯ ಎಣ್ಣೆಗಳನ್ನು ಹಚ್ಚಲು ಶಿಫಾರಸು ಮಾಡಲಾಗಿದೆ.

ಹೊಕ್ಕುಳ ಮೇಲೆ ಆಲಿವ್ ಎಣ್ಣೆ ಹಚ್ಚುವುದರಿಂದಾಗುವ ಪ್ರಯೋಜನಗಳು? : 
ಹೊಕ್ಕುಳಿನ ಮೇಲೆ ಆಲಿವ್ ಎಣ್ಣೆಯನ್ನು ಹಚ್ಚುವುದರಿಂದ ಅನೇಕ ರೀತಿಯಲ್ಲಿ  ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ವಿಟಮಿನ್ ಇ ಇದ್ದು, ಇದು ನಿಮ್ಮ ಚರ್ಮಕ್ಕೆ ಹೊಳಪನ್ನು ತರುತ್ತದೆ. ಇದು ತುಟಿಗಳ ಬಿರುಕು ಬಿಡುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.ಕೂದಲಿನ ಬೆಳವಣಿಗೆಯನ್ನು ಹೆಚ್ಚು ಮಾಡುತ್ತದೆ.

ಇದನ್ನೂ ಓದಿ : ಸೋರಿಯಾಸಿಸ್ ಗಂಭೀರ ಕಾಯಿಲೆಗೆ ಶಾಶ್ವತ ಪರಿಹಾರ ಕಂಡುಹಿಡಿದ ಪತಂಜಲಿ! ಸಂಶೋಧನಾ ವರದಿ ವಿಶ್ವಪ್ರಸಿದ್ಧ ಜರ್ನಲ್‌ನಲ್ಲಿ ಪ್ರಕಟ

ಚರ್ಮವು ಹೊಳೆಯುತ್ತದೆ : 
ಆಲಿವ್ ಎಣ್ಣೆಯು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ನಿಮ್ಮ ಚರ್ಮಕ್ಕೆ ಹೊಳಪನ್ನು ತರುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಚರ್ಮವು ಹೊಳೆಯಬೇಕಾದರೆ   ನಿಯಮಿತವಾಗಿ ಆಲಿವ್ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚಬೇಕು. 

ಗ್ಯಾಸ್ ಸಮಸ್ಯೆಯಿಂದ ಪರಿಹಾರ :
ನಮ್ಮಲ್ಲಿ ಅನೇಕ ಮಂದಿ ತಪ್ಪು ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಅನುಸರಿಸುತ್ತಾರೆ. ಇದರಿಂದಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಲು ಪ್ರಾರಂಭಿಸುತ್ತವೆ. ಈ ಸಮಸ್ಯೆಗಳಲ್ಲಿ ಗ್ಯಾಸ್ ಸಮಸ್ಯೆಯೂ ಸೇರಿದೆ. ನೀವು ಕೂಡಾ ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿದ್ದರೆ, ಹೊಕ್ಕುಳಿನ ಮೇಲೆ ಆಲಿವ್ ಎಣ್ಣೆಯನ್ನು ಹಚ್ಚುವುದು ಪ್ರಯೋಜನಕಾರಿಯಾಗಿದೆ. 

ಹೃದಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ : 
ಹೊಕ್ಕುಳಿಗೆ ಆಲಿವ್ ಎಣ್ಣೆಯನ್ನು ಹಚ್ಚುವುದರಿಂದ ಹೃದಯ ಸಂಬಂಧಿತ ಸಮಸ್ಯೆಗಳು ಗುಣವಾಗುತ್ತವೆ. ಇದು ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿದ್ದು, ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : Diabetes: ಮಧುಮೇಹಿಗಳಿಗೆ ಈ ನೀರು ಅಮೃತ.. ನಿಮ್ಮ ಹಿತ್ತಲಲ್ಲಿ ಬೆಳೆಯುವ ಪುಟ್ಟ ಗಿಡದ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿದರೆ, ಜೀವನದಲ್ಲಿ ಮತ್ತೆಂದೂ ಹೆಚ್ಚಾಗಲ್ಲ ಶುಗರ್‌!

ಕೀಲು ನೋವಿನಿಂದ ಪರಿಹಾರ : 
ಕೀಲುಗಳಲ್ಲಿನ ನೋವು ಮತ್ತು ಊತವನ್ನು ನಿವಾರಿಸಲು ಹೊಕ್ಕುಳಿನ ಮೇಲೆ ಆಲಿವ್ ಎಣ್ಣೆಯನ್ನು ಹಚ್ಚಬೇಕು. ಇದು ಕೀಲು ನೋವಿನಿಂದ ಪರಿಹಾರವನ್ನು ನೀಡುತ್ತದೆ. ಇದು ಕೀಲುಗಳ ಸುತ್ತಲಿನ ಚರ್ಮದ ಊತ ಮತ್ತು ಕೆಂಪು ಬಣ್ಣವನ್ನು ಕಡಿಮೆ ಮಾಡುತ್ತದೆ. 

( ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News