ಸರಿಯಾಗಿ ನಿದ್ರೆ ಮಾಡದಿದ್ರೆ ಮಾರಕ ಕ್ಯಾನ್ಸರ್‌ ಮತ್ತು ಹೃದಯೋಗದ ಅಪಾಯ ಹೆಚ್ಚಾಗುತ್ತೆ ಹುಷಾರ್!!

ನಮಗೆ ಪ್ರತಿದಿನ 6 ರಿಂದ 8 ಗಂಟೆಗಳ ಕಾಲ ನಿದ್ರೆ ಅತ್ಯಗತ್ಯ. ಸಾಕಷ್ಟು ನಿದ್ರೆ ಬರದಿದ್ದರೆ ಮೊದಲು ಪರಿಣಾಮ ಬೀರುವುದು ರೋಗನಿರೋಧಕ ವ್ಯವಸ್ಥೆಯ ಮೇಲೆ. ಜೀವಕೋಶಗಳು 70%ರಷ್ಟು ಕಡಿಮೆಯಾಗುತ್ತವೆ, ಪ್ರತಿಕಾಯ ಉತ್ಪಾದನೆ ಕಡಿಮೆಯಾಗುತ್ತದೆ & ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

Written by - Puttaraj K Alur | Last Updated : Mar 16, 2025, 05:50 PM IST
  • ನೀವು ಮಲಗುವ ರೀತಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ
  • ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿದಿನ 6 ರಿಂದ 8 ಗಂಟೆಗಳ ಕಾಲ ನಿದ್ರೆ ಅತ್ಯಗತ್ಯ
  • ಆರೋಗ್ಯಕರ ನಿದ್ರೆಯಿಲ್ಲದಿದ್ದರೆ ಕ್ಯಾನ್ಸರ್‌ ಮತ್ತು ಹೃದಯೋಗದ ಅಪಾಯ
ಸರಿಯಾಗಿ ನಿದ್ರೆ ಮಾಡದಿದ್ರೆ ಮಾರಕ ಕ್ಯಾನ್ಸರ್‌ ಮತ್ತು ಹೃದಯೋಗದ ಅಪಾಯ ಹೆಚ್ಚಾಗುತ್ತೆ ಹುಷಾರ್!!
ನಿದ್ರೆಯ ಅಡ್ಡಪರಿಣಾಮಗಳು

What to do for sound sleep?: ನಿಮಗೆ ನಿದ್ರೆ ಬರದಿದ್ದರೆ ಬೇರೆ ಯಾವುದೋ ಕಾರಣವಿರಬೇಕು; ಪ್ರತಿಯೊಂದು ದೋಷಕ್ಕೂ ಪ್ರೀತಿಯೇ ಕಾರಣವಲ್ಲ! ರಾತ್ರಿ ನಿದ್ರೆ ಕಳೆದುಕೊಂಡಾಗಲೂ ಇದೇ ಮಾತನ್ನು ಹೇಳಲಾಗುತ್ತದೆ. ಈ ನಿದ್ರೆ ಎಂಬುದು ಸಹ ಒಂದು ಅದ್ಭುತ ವಿಷಯ. ನಿದ್ರೆ ಬರದಿದ್ದರೆ ಇಡೀ ರಾತ್ರಿ ಕಳೆಯುವುದು ತುಂಬಾ ಕಷ್ಟ. ಇದರ ಪರಿಣಾಮವು ಮರುದಿನ ಬೆಳಗ್ಗೆ ಗೋಚರಿಸುತ್ತದೆ. ನಿದ್ರೆಯ ಇಲ್ಲದಿದ್ದರೆ ಯಾವುದೇ ಒಬ್ಬ ವ್ಯಕ್ತಿಯು ಯಾವುದೇ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ. 10-20 ವರ್ಷಗಳ ಹಿಂದೆ ನಿದ್ರೆಯನ್ನ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ʼನಿದ್ರೆ ಮಾಡುವವನು ಕಳೆದುಕೊಳ್ಳುತ್ತಾನೆ, ಎಚ್ಚರವಾಗಿರುವವನು ಗಳಿಸುತ್ತಾನೆ' ಅಂತಾ ಜನರು ನಂಬಿದ್ದರು. ಆದರೆ ಕಾಲ ಕಳೆದಂತೆ ಜೀವನಶೈಲಿ ಬದಲಾಯಿತು ಮತ್ತು ಕೆಲಸ, ಒತ್ತಡದ ಜೀವನದಲ್ಲಿ ಆರೋಗ್ಯವಾಗಿರಲು ನಿದ್ರೆಯ ಮಹತ್ವ ಹೆಚ್ಚಾಯಿತು. ನಾವು ಎಚ್ಚರವಾಗಿರುವಾಗ ಮೆದುಳಿನಲ್ಲಿ ಬಹಳಷ್ಟು ಚಟುವಟಿಕೆಗಳು ನಡೆಯುತ್ತಿರುತ್ತವೆ. ಆದರೆ ನಿದ್ರೆಯ ಸಮಯದಲ್ಲಿ ಮೆದುಳಿನ ಕೋಶಗಳು ಲಯಬದ್ಧ ಅಲೆಗಳನ್ನು ಉತ್ಪಾದಿಸುತ್ತವೆ, ಅದು ಮನಸ್ಸನ್ನು ಶುದ್ಧಗೊಳಿಸುತ್ತದೆ. ಏಕೆಂದರೆ ಹಗಲಿನಲ್ಲಿ ಮೆದುಳಿನಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳು ದೇಹದಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತವೆ.

ನಾವು ಆಳ ನಿದ್ರೆಯಲ್ಲಿದ್ದಾಗ ದೇಹದ ಸ್ವನಿಯಂತ್ರಿತ ನರಮಂಡಲವು ಅದನ್ನು ಸರಿಪಡಿಸಲು ಪ್ರಾರಂಭಿಸುತ್ತದಂತೆ. ನಿದ್ರೆಯ ಸಮಯದಲ್ಲಿ ಈ ಎಲ್ಲಾ ಚಟುವಟಿಕೆಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ನಡೆಯುವುದರಿಂದ ದೇಹವು ಸ್ವಯಂಚಾಲಿತವಾಗಿ ಹಿಮ್ಮುಖವಾಗುತ್ತದೆ. ಆದ್ದರಿಂದ ಪ್ರತಿದಿನ 6 ರಿಂದ 8 ಗಂಟೆಗಳ ಕಾಲ ನಿದ್ರೆ ಅತ್ಯಗತ್ಯ. ನಿಮಗೆ ಸಾಕಷ್ಟು ನಿದ್ರೆ ಬರದಿದ್ದರೆ, ಮೊದಲು ಪರಿಣಾಮ ಬೀರುವುದು ನಿಮ್ಮ ರೋಗನಿರೋಧಕ ವ್ಯವಸ್ಥೆಯ ಮೇಲೆ. ಜೀವಕೋಶಗಳು 70%ರಷ್ಟು ಕಡಿಮೆಯಾಗುತ್ತವೆ ಮತ್ತು ಪ್ರತಿಕಾಯ ಉತ್ಪಾದನೆ ಕಡಿಮೆಯಾಗುತ್ತದೆ, ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ನಿದ್ರೆಯ ಕೊರತೆಯು ಇನ್ಸುಲಿನ್ ಪ್ರತಿರೋಧ ಮತ್ತು ಒತ್ತಡದ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ. ವರದಿಯ ಪ್ರಕಾರ, ಕೆಲವು ದಿನಗಳವರೆಗೆ ನಿದ್ರೆಗೆ ತೊಂದರೆಯಾದರೆ ಆರೋಗ್ಯವಂತ ವ್ಯಕ್ತಿ ಮೊದಲು ಮಧುಮೇಹ ಪೂರ್ವ ಸ್ಥಿತಿಗೆ ತಲುಪುತ್ತಾನೆ. ನಂತರ ಮಧುಮೇಹಿಯಾಗುತ್ತಾನೆ. ಅದಕ್ಕಾಗಿಯೇ ಚೆನ್ನಾಗಿ ನಿದ್ರೆ ಮಾಡಲು ಮತ್ತು ನಿದ್ರೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು 'ವಿಶ್ವ ನಿದ್ರೆ ದಿನ'ವನ್ನು ಆಚರಿಸಲಾಗುತ್ತದೆ. ಒಳ್ಳೆಯ ನಿದ್ರೆ ಪಡೆಯಲು ಹಲವು ಸೂತ್ರಗಳು ವೈರಲ್ ಆಗುತ್ತಲೇ ಇರುತ್ತವೆ. ಸುಲಭ ರೀತಿಯಲ್ಲಿ ಶಾಂತಿಯುತ ನಿದ್ರೆ ಮಾಡುವುದು ಹೇಗೆ ಮತ್ತು ರೋಗಗಳನ್ನು ದೂರವಿಡುವುದು ಹೇಗೆ ಎಂದುದನ್ನ ತಿಳಿಯಿರಿ...

ಇದನ್ನೂ ಓದಿ:  ಗಂಟುಗಳಲ್ಲಿ ಅಂಟಿರುವ ಯೂರಿಕ್‌ ಆಸಿಡ್‌ನ್ನು ಚಿಟಿಕೆಯಲ್ಲಿ ಕರಗಿಸುತ್ತೆ ಈ ಹಣ್ಣು! ಮತ್ಯಾವತ್ತೂ ಆ ಸಮಸ್ಯೆ ಬರೋದಿಲ್ಲ

ನಿದ್ರೆಯ ಕೊರತೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ

* ಒತ್ತಡ
* ಆತಂಕ
* ಖಿನ್ನತೆ
* ಬಿಪಿ ಅಸಮತೋಲನ
* ಮೆದುಳಿನಲ್ಲಿ ವಿಷಗಳು ರೂಪುಗೊಳ್ಳುತ್ತವೆ
* ವಿಷದಿಂದಾಗಿ ದೇಹದಲ್ಲಿನ ಬದಲಾವಣೆಗಳು
* ಶುಗರ್
* ಅಧಿಕ ಕೊಲೆಸ್ಟ್ರಾಲ್
* ಕ್ಯಾನ್ಸರ್
* ಡಿಎನ್‌ಎ‌ ಮೇಲೆ ಹಾನಿ
* ಹಾರ್ಮೋನುಗಳ ಸಮಸ್ಯೆಗಳು

ಕಡಿಮೆ ನಿದ್ರೆಯ ಸಮಸ್ಯೆ

* ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತೊಂದರೆ
* ಕಲಿಕಾ ಸಾಮರ್ಥ್ಯ ಕಡಿಮೆಯಾಗುತ್ತದೆ
* ಸ್ಮರಣಶಕ್ತಿ ದುರ್ಬಲಗೊಳ್ಳುತ್ತದೆ.

ಗೊರಕೆಯ ಕಾರಣಗಳು

* ಬೊಜ್ಜು
* ಥೈರಾಯ್ಡ್
* ಟಾನ್ಸಿಲ್‌ಗಳು
* ಅಧಿಕ ರಕ್ತದೊತ್ತಡ
* ಮಧುಮೇಹ
* ಆಸ್ತಮಾ

ಗೊರಕೆಯ ಅಡ್ಡಪರಿಣಾಮಗಳು

* ನಿದ್ರಾಹೀನತೆ
* ಸಕ್ಕರೆ-ಬಿಪಿ ಅಸಮತೋಲನ
* ಕೊಲೆಸ್ಟ್ರಾಲ್ ಹೆಚ್ಚಳ
* ಸೈಲೆಂಟ್‌ ಅಟ್ಯಾಕ್
* ಮಿದುಳಿನ ಪಾರ್ಶ್ವವಾಯು

ಕುಟುಂಬ ಜೀವನದ ಮೇಲೆ ಗೊರಕೆಯ ಪರಿಣಾಮ

* 46% ಜನರಿಗೆ ಗೊರಕೆ ಸಮಸ್ಯೆ ಇದೆ
* 20% ದಂಪತಿಗಳು ಗೊರಕೆಯಿಂದ ಪ್ರತ್ಯೇಕವಾಗಿ ಮಲಗುತ್ತಾರೆ

ಒಳ್ಳೆಯ ನಿದ್ರೆ ಪಡೆಯುವುದು ಹೇಗೆ?

* ತಾಜಾ ಆಹಾರವನ್ನು ಮಾತ್ರ ಸೇವಿಸಿ
* ಕರಿದ ಆಹಾರವನ್ನು ತಪ್ಪಿಸಿ 
* ಪ್ರತಿದಿನ 5-6 ಲೀಟರ್ ನೀರು ಕುಡಿಯಿರಿ
* ಚೆನ್ನಾಗಿ ವ್ಯಾಯಾಮ ಮಾಡಿ

ಗೊರಕೆಯಿಂದ ಪರಿಹಾರ

* ಪುದೀನಾ ಒಂದು ಸರ್ವರೋಗ ನಿವಾರಕವಾಗಿದೆ. 
* ಪುದೀನಾ ಎಣ್ಣೆಯಿಂದ ಬಾಯಿ ಮುಕ್ಕಳಿಸಿ
* ನೀರಿನಲ್ಲಿ ಬೆರೆಸಿ ಬಾಯಿ ಮುಕ್ಕಳಿಸಿ
* ಮೂಗಿನ ಊತ ಕಡಿಮೆಯಾಗುತ್ತದೆ
* ಉಸಿರಾಟ ಸುಲಭವಾಗುತ್ತದೆ.
* ಒಂದು ಕಪ್ ಬೇಯಿಸಿದ ನೀರನ್ನು ತೆಗೆದುಕೊಂಡು
* 10 ಪುದೀನ ಎಲೆಗಳನ್ನು ಸೇರಿಸಿ
* ಅದನ್ನು ಬೆಚ್ಚಗಿನ ನೀರಿನಲ್ಲಿ ಕುಡಿಯಿರಿ.

ಗೊರಕೆಗೆ ಹೀಗೆ ಮಾಡಿ

* ಬೆಳ್ಳುಳ್ಳಿ ಪ್ರಯೋಜನಕಾರಿ
* 1-2 ಎಸಳು ಬೆಳ್ಳುಳ್ಳಿಯನ್ನು
* ನೀರಿನೊಂದಿಗೆ ಸೇವಿಸಿ.
* ಇದು ಅಡಚಣೆಯನ್ನು ತೆಗೆದುಹಾಕಿ
* ಶಾಂತಿಯುತ ನಿದ್ರೆಯನ್ನು ನೀಡುತ್ತದೆ.

ಮನೆಮದ್ದುಗಳಿಂದ ಗೊರಕೆಯಿಂದ ಪರಿಹಾರ 

* ರಾತ್ರಿಯಲ್ಲಿ ಅರಿಶಿನ ಹಾಲು ಕುಡಿಯಿರಿ
* ಬೆಚ್ಚಗಿನ ನೀರಿನೊಂದಿಗೆ ದಾಲ್ಚಿನ್ನಿ ಪುಡಿಯನ್ನು ತೆಗೆದುಕೊಳ್ಳಿ
* ಏಲಕ್ಕಿಯೊಂದಿಗೆ ಬೆಚ್ಚಗಿನ ನೀರನ್ನು ಕುಡಿಯಿರಿ
* ಮಲಗುವ ಮೊದಲು ಹಬೆ ತೆಗೆದುಕೊಳ್ಳಿ

ಅಧಿಕ ರಕ್ತದೊತ್ತಡವನ್ನು ನಿವಾರಿಸಲು

* ಸಾಕಷ್ಟು ನೀರು ಕುಡಿಯಿರಿ
* ಒತ್ತಡ ಕಡಿಮೆ ಮಾಡಿಕೊಳ್ಳಿ
* ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ
* ಜಂಕ್ ಫುಡ್ ತಪ್ಪಿಸಿ.

ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ

* ಸೌತೆಕಾಯಿ-ಹಾಗಲಕಾಯಿ, ಸೋರೆಕಾಯಿ-ಟೊಮೆಟೊ ರಸವನ್ನು ತೆಗೆದುಕೊಂಡು
* ಗಿಲೋಯ್ ಕಷಾಯವನ್ನು ಕುಡಿಯಿರಿ.

ಜೀರ್ಣಕ್ರಿಯೆ ಸರಿಯಾಗಿರಲಿ, ಪಂಚಾಮೃತ ಕುಡಿಯಿರಿ

* ಜೀರಿಗೆ
* ಕೊತ್ತಂಬರಿ
* ಸೋಂಪು, ಮೆಂತ್ಯ ಮತ್ತು ಸೆಲರಿಗಳನ್ನು
* ತಲಾ ಒಂದು ಚಮಚ ತೆಗೆದುಕೊಂಡು
* ಅವುಗಳನ್ನು ಒಂದು ಗಾಜಿನ ಲೋಟದಲ್ಲಿ ಹಾಕಿ
* ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ.
* ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
* 11 ದಿನಗಳ ಕಾಲ ನಿರಂತರವಾಗಿ ಕುಡಿಯಬೇಕು

ಹೃದಯ ಬಲಗೊಳ್ಳಲು ನೈಸರ್ಗಿಕ ಪರಿಹಾರ

1 ಚಮಚ ಅರ್ಜುನ ತೊಗಟೆ
1 ಚಮಚ ದಾಲ್ಚಿನ್ನಿ ಮತ್ತು 5 ತುಳಸಿ ಎಲೆಗಳನ್ನು ಕುದಿಸಿ ಕಷಾಯ ಮಾಡಿ.
ಇದನ್ನು ಪ್ರತಿದಿನ ಕುಡಿಯುವುದರಿಂದ ನಿಮ್ಮ ಹೃದಯ ಆರೋಗ್ಯಕರವಾಗಿರುತ್ತದೆ.

ಇದನ್ನೂ ಓದಿ: ನಿತ್ಯ ಖಾಲಿ ಹೊಟ್ಟೆಯಲ್ಲಿ ಈ ಗಿಡದ 2 ಎಲೆ ತಿಂದರೆ... ಬಿಪಿ, ಶುಗರ್‌ ಭಯವಿಲ್ಲದೇ ಬದುಕಬಹುದು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ:  Zee5 ನಲ್ಲೂ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News