ಒಗ್ಗರಣೆಯಷ್ಟೇ ಅಲ್ಲ… ಸಾಸಿವೆಯಲ್ಲಿದೆ ಈ ಕಾಯಿಲೆಗಳಿಗೆ ಶಾಶ್ವತ ಮುಕ್ತಿ ನೀಡುವ ಗುಣ

Published by: Bhavishya Shetty | Oct 17, 2023

ಆರೋಗ್ಯ ಪ್ರಯೋಜನ

ಸಾಸಿವೆ ಕಾಳುಗಳನ್ನು ಭಾರತೀಯ ಅಡುಗೆಮನೆಯಲ್ಲಿ ಮಸಾಲೆಗಾಗಿ ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ನಾವಿಂದು ಈ ವರದಿಯಲ್ಲಿ ಸಾಸಿವೆಯ ಆರೋಗ್ಯದ ಪ್ರಯೋಜನಗಳ ಬಗ್ಗೆ ಹೇಳುತ್ತಿದ್ದೇವೆ.

Published by: Bhavishya Shetty | Oct 17, 2023

ಸಂಶೋಧನೆಯ ವರದಿ

NCBI ವೆಬ್ಸೈಟ್’ನಲ್ಲಿ ಪ್ರಕಟವಾದ ಸಂಶೋಧನೆಯ ವರದಿ ಪ್ರಕಾರ ಸಾಸಿವೆ ಆಂಟಿ-ಕಾರ್ಸಿನೋಜೆನಿಕ್ ಗುಣಲಕ್ಷಣಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ. ಈ ಗುಣವು ದೇಹದಲ್ಲಿ ಕ್ಯಾನ್ಸರ್ ಬೆಳೆಯುವುದನ್ನು ತಡೆಯುತ್ತದೆ

Published by: Bhavishya Shetty | Oct 17, 2023

ಕ್ಯಾನ್ಸರ್ ಅಪಾಯ

ಸಾಸಿವೆ ಎಣ್ಣೆಯಲ್ಲಿರುವ ಒಮೆಗಾ -3 ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳು ಕರುಳಿನ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟುವಲ್ಲಿ ಕೆಲಸ ಮಾಡುತ್ತದೆ ಎಂದು ಮತ್ತೊಂದು ಸಂಶೋಧನೆಯು ಕಂಡುಹಿಡಿದಿದೆ.

Published by: Bhavishya Shetty | Oct 17, 2023

ಕ್ಯಾನ್ಸರ್ ವಿರೋಧಿ ಗುಣ

ಸಾಸಿವೆ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ ಎಂದು ವೈಜ್ಞಾನಿಕ ಅಧ್ಯಯನಗಳು ದೃಢಪಡಿಸುತ್ತವೆ. ಆದರೆ ಇದು ಕ್ಯಾನ್ಸರ್’ಗೆ ಚಿಕಿತ್ಸೆಯಾಗುವುದಿಲ್ಲ. ಆದ್ದರಿಂದ ಯಾರಾದರೂ ಈ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ, ಅವರು ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು.

Published by: Bhavishya Shetty | Oct 17, 2023

ಆಸ್ತಮಾ

ವೈಜ್ಞಾನಿಕ ಅಧ್ಯಯನದ ಪ್ರಕಾರ, ಸಿನಾಪೈನ್ ಎಂಬ ಸಾವಯವ ಸಂಯುಕ್ತವು ಸಾಸಿವೆ ಬೀಜಗಳಲ್ಲಿ ಕಂಡುಬರುತ್ತದೆ. ಇದು ಸ್ನಾಯು ಚಟುವಟಿಕೆ ಮತ್ತು ಶ್ವಾಸಕೋಶದ ಕಾರ್ಯವನ್ನು ಹೆಚ್ಚಿಸುವ ಮೂಲಕ ಆಸ್ತಮಾವನ್ನು ತಡೆಯಲು ಸಹಾಯ ಮಾಡುತ್ತದೆ

Published by: Bhavishya Shetty | Oct 17, 2023

ಮೈಗ್ರೇನ್

ಸಾಸಿವೆ ಕಾಳುಗಳಲ್ಲಿ ರೈಬೋಫ್ಲಾವಿನ್ ಎಂಬ ವಿಟಮಿನ್ ಇದೆ. ಇದು ಮೈಗ್ರೇನ್ ಅಪಾಯವನ್ನು ಕಡಿಮೆ ಮಾಡುತ್ತದೆ.

Published by: Bhavishya Shetty | Oct 17, 2023

ಅಧಿಕ ರಕ್ತದೊತ್ತಡ

ಮೆಥನಾಲ್ ಸಾರವು ಸಾಸಿವೆ ಬೀಜಗಳಲ್ಲಿ ಕಂಡುಬರುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಇದು ಅಧಿಕ ರಕ್ತದೊತ್ತಡದ ನಿಯಂತ್ರಿಸುತ್ತದೆ.

Published by: Bhavishya Shetty | Oct 17, 2023

ತೂಕ ನಷ್ಟಕ್ಕೆ ಸಹಾಯಕ

ಸಂಶೋಧನೆಯ ಪ್ರಕಾರ, ಸಾಸಿವೆ ಕಾಳುಗಳಿಂದ ತೆಗೆದ ಎಣ್ಣೆಯು ತೂಕ ನಷ್ಟಕ್ಕೆ ಸಹಾಯಕವಾಗಿದೆ. ಸಾಸಿವೆ ಎಣ್ಣೆಯಲ್ಲಿ ಹೇರಳವಾದ ಡಯಾಸಿಲ್ಗ್ಲಿಸೆರಾಲ್ ಕಂಡುಬರುತ್ತದೆ. ಇದು ತೂಕ ನಷ್ಟಕ್ಕೆ ಸಹಾಯಕವಾಗಿದೆ

Published by: Bhavishya Shetty | Oct 17, 2023

ಸೂಚನೆ

- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ

Published by: Bhavishya Shetty | Oct 17, 2023

VIEW ALL

Read Next Story