ಮಧುಮೇಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಬಹಳ ಸಾಮಾನ್ಯವಾದ ಕಾಯಿಲೆಯಾಗಿದೆ.
ಸಂಶೋಧನೆಗಳ ಪ್ರಕಾರ ಸದಾಪುಷ್ಪಾ ಗಿಡದ ಎಲೆಗಳಿಗೆ ಮಧುಮೇಹ ಕಡಿಮೆ ಮಾಡುವ ಶಕ್ತಿಯಿರುತ್ತದೆ. ಈ ಎಲೆಯನ್ನು ವಿಶ್ವಾದ್ಯಂತ ಮಧುಮೇಹ ರೋಗದ ಔಷಧವಾಗಿ ಬಳಸಲಾಗುತ್ತದೆ.
ಈ ಎಲೆಯಲ್ಲಿರುವ ಔಷಧೀಯ ಗುಣಗಳು ನಮ್ಮ ದೇಹಕ್ಕೆ ಬಹಳ ಅಗತ್ಯವಾಗಿದೆ.
ಈ ಎಲೆ ಟೈಪ್ 2 ಡಯಾಬಿಟೀಸ್ ರೋಗಿಗಳಿಗೆ ನ್ಯಾಚ್ಯುರಲ್ ಮೆಡಿಸಿನ್ ಆಗಿ ಕೆಲಸಮಾಡುತ್ತದೆ. ಇದು ಬ್ಲಡ್ ಶುಗರ್ ಏರಲು ಬಿಡುವುದಿಲ್ಲ.
.ಒಂದು ಮುಷ್ಠಿ ಸದಾ ಪುಷ್ಪದ ಎಲೆ ತೆಗೆದುಕೊಂಡು ಅದನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯಬೇಕು.
ಸದಾಪುಷ್ಪದ ಎಲೆಯನ್ನು ಒಣಗಿಸಿ ಚೆನ್ನಾಗಿ ಪುಡಿ ಮಾಡಿ ಇಟ್ಟುಕೊಂಡು ಯಾವುದೇ ಆಹಾರಕ್ಕೆ ಬೆರೆಸಿ ಸೇವಿಸಬಹುದು.
ಈ ಎಲೆಯನ್ನು ಆಯುರ್ವೇದ ಔಷಧಿಯಾಗಿ ಬಳಸಲಾಗುತ್ತದೆ. ಇದು ಕೇವಲ ಮಧುಮೇಹ ಮಾತ್ರವಲ್ಲ, ಗಂಟಲು ಕಿರಿಕಿರಿ, ಮಲೇರಿಯಾ ಮುಂತಾದ ರೋಗಗಳ ವಿರುದ್ದವೂ ಹೋರಾಡುತ್ತದೆ.
ಈ ಎಲೆಯಲ್ಲಿರುವ ಹೈಪೊ ಗ್ಲೈಸೆಮಿಕ್ ಕಾರಣದಿಂದಾಗಿ ಇದು ಮಧುಮೇಹದ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ