ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ.
ಭಾರತವನ್ನು ಮಧುಮೇಹಿಗಳ ರಾಜಧಾನಿ ಎಂದು ಕರೆಯಲಾಗುತ್ತದೆ. ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಇಲ್ಲಿವೆ ಮನೆಮದ್ದುಗಳು.
ರುಚಿಯಲ್ಲಿ ಕಹಿಯಾದರೂ ಹಾಗಲಕಾಯಿ ಮಧುಮೇಹಿಗಳಿಗೆ ವರದಾನವಾಗಿದ್ದು, ಇರದಲ್ಲಿರುವ ಪೋಷಕಾಂಶಗಳು ಇನ್ಸುಲಿನ್ನಂತೆ ಕಾರ್ಯನಿರ್ವಹಿಸುತ್ತವೆ.
ಆಯುರ್ವೇದದ ಹಲವಾರು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಮೆಂತೆಕಾಳುಗಳು ಮಧುಮೇಹ ನಿರ್ವಹಣೆಗೆ ಸಹಕಾರಿ.
ಅಡುಗೆಗೆ ಮಸಾಲೆಯಂತೆ ಬಳಸುವ ದಾಲ್ಚಿನ್ನಿ ಅಥವಾ ಚೆಕ್ಕೆಯು ಮಧುಮೇಹ ನಿವಾರಕ ಗುಣವನ್ನು ಹೊಂದಿದೆ.
ವಿಟಮಿನ್ ʼಸಿʼ ಮತ್ತು ಪ್ರಬಲ ಆಂಟಿ ಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವ ನೆಲ್ಲಿಕಾಯಿ ಇನ್ಸುಲಿನ್ ಸಂವೇದನೆ ಹೆಚ್ಚಿಸಿ ರಕ್ತದಲ್ಲಿನ ಸಕ್ಕರೆ ಮಟ್ಟ ತಗ್ಗಲು ನೆರವಾಗುತ್ತದೆ.
ಅರಿಶಿನದ ಸೇವನೆಯಿಂದ ರಕ್ತದಲ್ಲಿರುವ ಅಧಿಕ ಮಟ್ಟದ ಸಕ್ಕರೆಯ ಪ್ರಮಾಣ ತಗ್ಗಲು ಸಾಧ್ಯವಾಗುತ್ತದೆ. ಇನ್ಸುಲಿನ್ ಸಂವೇದನೆ ಹೆಚ್ಚಿಸಿ ಮಧುಮೇಹ ನಿಯಂತ್ರಿಸಲು ನೆರವಾಗುತ್ತದೆ.
ಹಲವಾರು ಕಾಯಿಲೆಗಳಿಗೆ ಔಷಧಿಯಾಗಿರುವ ಬೇವಿನಲ್ಲಿ ಮಧುಮೇಹ ನಿಯಂತ್ರಿಸುವ ಗುಣವಿದೆ.