ಜೀರಿಗೆಯು ಅನೇಕ ರೀತಿಯ ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುತ್ತದೆ.
ಹೆಚ್ಚಾಗಿ ಜೀರಿಗೆ ಸೇವಿಸಿದರೆ ಕೆಲವು ಅಡ್ಡಪರಿಣಾಮಗಳು ಉಂಟಾಗುತ್ತವೆ.
ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಹೀಗಾಗಿ ಮಧುಮೇಹ ಇರುವವರು ಅತಿಯಾಗಿ ಜೀರಿಗೆ ಸೇವಿಸಬಾರದು.
ದೀರ್ಘಕಾಲದವರೆಗೆ ಜೀರಿಗೆಯನ್ನು ಸೇವಿಸಿದರೆ ಅದರಲ್ಲಿರುವ ಅಂಶ ಲಿವರ್ ಮತ್ತು ಕಿಡ್ನಿಯ ಸಮಸ್ಯೆಗೆ ಕಾರಣವಾಗುತ್ತದೆ.
ಅತಿಯಾದ ಜೀರಿಗೆ ಸೇವನೆ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಸಮಸ್ಯೆಯನ್ನುಂಟುಮಾಡುತ್ತದೆ ಜೊತೆಗೆ ಅತಿಯಾದ ರಕ್ತಸ್ರಾವವಾಗುತ್ತದೆ.
ಜೀರಿಗೆ ಅನಿಲ ನಿವಾರಕವಾಗಿದ್ದು, ಹೆಚ್ಚು ಅನಿಲ ಹೊರಹಾಕುವಾಗ ಇದರಿಂದ ಜಠರದಲ್ಲಿ ಕಿರಿಕಿರಿಯುಂಟಾಗುತ್ತದೆ.
ಜೀರಿಗೆಯು ಜಠರಗರುಳಿನ ತೊಂದರೆಗೆ ಸಹಾಯ ಮಾಡುತ್ತದೆ. ಆದರೆ ಅದು ನಿಮಗೆ ಎದೆಯುರಿ ಉಂಟುಮಾಡಬಹುದು!