ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೃದಯ ಸಂಬಂಧಿತ ಕಾಯಿಲೆಗಳು ಜೀವನದ ಗುಣಮಟ್ಟದ ಮೇಲೂ ತೀವ್ರ ಪರಿಣಾಮ ಬೀರುತ್ತವೆ.
ಹಾರ್ಟ್ ಟ್ಯಾಕ್ ಸಾಮಾನ್ಯ ಸಮಸ್ಯೆಯಂತೆ ಬಹುತೇಕ ಮಂದಿಯನ್ನು ಕಾಡುತ್ತಿದೆ. ಹಾರ್ಟ್ ಅಟ್ಯಾಕ್ ಆಗುವುದಕ್ಕೆ ಮುನ್ನ ದೇಹ ಕೆಲವೊಂದು ಸೂಚನೆಗಳನ್ನು ನೀಡುತ್ತದೆ.
ಹೃದಯಕ್ಕೆ ರಕ್ತ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಪರಿಧಮನಿ ಕಾಯಿಲೆಯ ಚಿಕಿತ್ಸೆಯಲ್ಲಿ ಆಂಜಿಯೋಪ್ಲ್ಯಾಸ್ಟಿಯನ್ನು ವಿಶೇಷವಾಗಿ ಬಳಸಲಾಗುತ್ತದೆ. ಇದು ಅಪಧಮನಿಯನ್ನು ತೆರೆಯಲು ಬಳಸುವ ಒಂದು ಸಣ್ಣ ಶಸ್ತ್ರಚಿಕಿತ್ಸೆ.
ಅಪಧಮನಿಯಲ್ಲಿನ ಅಡಚಣೆಯಿಂದಾಗಿ ರಕ್ತವು ಹೃದಯವನ್ನು ಸರಿಯಾಗಿ ತಲುಪಲು ಸಾಧ್ಯವಾಗದಿದ್ದಾಗ ಆಂಜಿಯೋಪ್ಲ್ಯಾಸ್ಟಿ ಮಾಡಲಾಗುತ್ತದೆ. ಅದರ ಅಗತ್ಯವನ್ನು ಕಂಡುಹಿಡಿಯಲು, ಆಂಜಿಯೋಗ್ರಾಮ್, ಒತ್ತಡ ಪರೀಕ್ಷೆ ಮತ್ತು ಇಸಿಜಿಯಂತಹ ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತದೆ.
ಎದೆಯಲ್ಲಿ ಪದೇ ಪದೇ ಸುಡುವ ಅನುಭವ ಅಥವಾ ಒತ್ತಡ ಬಿದ್ದ ಹಾಗೆ ಆಗುತ್ತಿದ್ದರೆ ಅದು ಹೃದಯ ಅಪಧಮನಿಗಳಲ್ಲಿ ಅಡಚಣೆಯ ಸಂಕೇತವಾಗಿರಬಹುದು. ಅಂತಹ ಸಂದರ್ಭಗಳಲ್ಲಿ, ಆಂಜಿಯೋಪ್ಲ್ಯಾಸ್ಟಿ ಮಾಡಲಾಗುತ್ತದೆ.
ಹೃದಯ ಕಾಯಿಲೆಯ ಪರಿಣಾಮಗಳು ಕಾಲುಗಳನ್ನೂ ತಲುಪಬಹುದು. ನಡೆಯುವಾಗ ಅಥವಾ ಸೈಕ್ಲಿಂಗ್ ಮಾಡುವಾಗ ಸ್ನಾಯು ಸೆಳೆತ ಮತ್ತು ನೋವು ಉಂಟಾಗಬಹುದು. ಇದು ಬಾಹ್ಯ ಅಪಧಮನಿ ಕಾಯಿಲೆಯ ಸಂಕೇತವಾಗಿದೆ.
ಸದಾ ದಣಿಯುತ್ತಿದ್ದರೆ ವಿಶೇಷವಾಗಿ ಸ್ವಲ್ಪ ಕೆಲಸದ ನಂತರ ಅಥವಾ ಮೆಟ್ಟಿಲುಗಳನ್ನು ಹತ್ತಿದ ನಂತರ ವಿಪರೀತ ಸುಸ್ತಾಗುತ್ತಿದ್ದರೆ ಇದು ಹೃದ್ರೋಗದ ಲಕ್ಷಣವಾಗಿರಬಹುದು.
ನಿರಂತರ ಅಧಿಕ ರಕ್ತದೊತ್ತಡವು ಹೃದಯದ ಅಪಧಮನಿಗಳನ್ನು ಗಟ್ಟಿಯಾಗಿ ಮತ್ತು ದಪ್ಪವಾಗಿಸುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.
ವಸಡಿನ ಕಾಯಿಲೆಗೂ ಹೃದಯ ಕಾಯಿಲೆಗೂ ಸಂಬಂಧವಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಒಸಡುಗಳು ಊದಿಕೊಂಡರೆ ಅಥವಾ ಪದೇ ಪದೇ ರಕ್ತಸ್ರಾವವಾಗುತ್ತಿದ್ದರೆ, ಹೃದಯದ ಆರೋಗ್ಯದ ಬಗ್ಗೆ ಎಚ್ಚರಿಕೆಯಾಗಿರಬಹುದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.