)
ಹುಬ್ಬಳ್ಳಿ: ನಗರದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, “ಅತ್ಯಂತ ಮಹತ್ವದ ಬಿಲ್ಗಳು ಇದ್ದರೂ ಕಾಂಗ್ರೆಸ್ ಕಾರಣವಿಲ್ಲದೆ ಅಧಿವೇಶನ ನಡೆಯಲು ಬಿಡಲಿಲ್ಲ” ಎಂದು ಆರೋಪಿಸಿದರು.
ʼಕೆಲವು ಬಿಲ್ಗಳನ್ನು ಸಾರ್ವಜನಿಕ ಚರ್ಚೆಗೆ ಬಿಡಲಾಗಿತ್ತು. ಆದಾಯ ತೆರಿಗೆ ಇಲಾಖೆಯ ಹೊಸ ಬಿಲ್ ಸೇರಿ ಹಲವು ಬಿಲ್ಗಳು ಪಾಸ್ ಆಗಿವೆ. ಆದರೆ ಸುಳ್ಳು ಕಾರಣ ಹೇಳಿ ಕಾಂಗ್ರೆಸ್ ಚರ್ಚೆಗೆ ಅವಕಾಶ ನೀಡಲಿಲ್ಲʼ ಎಂದು ಅವರು ಹೇಳಿದರು.
ಕೇಂದ್ರ ಸಚಿವರು ಮುಂದುವರೆದು, ʼಪ್ರಜಾಪ್ರಭುತ್ವದಲ್ಲಿ ಕಾಂಗ್ರೆಸ್ಗೆ ವಿಶ್ವಾಸವಿಲ್ಲ. ಆಪರೇಷನ್ ಸಿಂಧೂರ ಕುರಿತು ಚರ್ಚೆ ಮಾಡಲು ನಾವು ಅವಕಾಶ ನೀಡಿದ್ದರೂ, ಪೆಹಾಲ್ಗಮ್ ವಿಚಾರದ ಬಗ್ಗೆ ಮಾತ್ರ ಮಾತನಾಡುವುದಾಗಿ ಹೇಳಿದರು. ಭಯೋತ್ಪಾದಕರನ್ನು ಹಾಗೂ ಅವರನ್ನು ಬೆಂಬಲಿಸುವ ದೇಶಗಳ ವಿರುದ್ಧ ಕಾಂಗ್ರೆಸ್ ಹೇಗೆ ವರ್ತಿಸಿದೆ ಎಂಬುದು ಎಲ್ಲರಿಗೂ ಗೊತ್ತಿದೆʼ ಎಂದು ಹೇಳಿದರು.
ʼಕಾಂಗ್ರೆಸ್ ಸಂಪೂರ್ಣವಾಗಿ ಎಕ್ಸ್ಪೋಸ್ ಆಗಿರುವುದರಿಂದ ಹತಾಶೆಯಿಂದ ಅಧಿವೇಶನಕ್ಕೆ ಅಡ್ಡಿಪಡಿಸಿದೆ. ಮತಪಟ್ಟಿಯಲ್ಲಿ ಸಣ್ಣಪುಟ್ಟ ದೋಷಗಳನ್ನು ನೆಪವಿಟ್ಟು ಗದ್ದಲ ಎಬ್ಬಿಸಿದೆ. ಎರಡೂ ಸದನಗಳಲ್ಲಿ 13 ಬಿಲ್ಗಳನ್ನು ಪಾಸ್ ಮಾಡಲಾಗಿದೆ. ಆದರೆ ಕಾಂಗ್ರೆಸ್ ದೇಶದ ಜನಾದೇಶಕ್ಕೆ ಅಪಮಾನ ಮಾಡಿದೆʼ ಎಂದು ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮುಂದುವರೆದು, ʼಅಪರಾಧ ಹಿನ್ನೆಲೆ, ಶಿಕ್ಷೆ ಹಾಗೂ ಗಂಭೀರ ಆರೋಪ ಹೊತ್ತು ಜೈಲಿಗೆ ಹೋದವರ ಮೇಲೆ ಕ್ರಮ ಕೈಗೊಳ್ಳುವ ಬಿಲ್ಗೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಪ್ರಜಾಪ್ರಭುತ್ವ ವೇದಿಕೆಯನ್ನು ಕಾಂಗ್ರೆಸ್ ದುರುಪಯೋಗ ಮಾಡಿಕೊಂಡಿದ್ದು, ಹತಾಶೆಯಿಂದ ವರ್ತಿಸುತ್ತಿದೆʼ ಎಂದರು.