ನವದೆಹಲಿ: 2020-21ರ ಹಣಕಾಸು ವರ್ಷದ ಬಜೆಟ್ ಮಂಡನೆಯ ನಂತರದ ವಿವಿಧ ಸಚಿವಾಲಯಗಳಿಗೆ ಹಂಚಿಕೆಗಳನ್ನು ಪರಿಶೀಲಿಸಿದ ಸಂಸದೀಯ ಸ್ಥಾಯಿ ಸಮಿತಿಗಳ ಒಂದು ಸಭೆಯಲ್ಲೂ 95 ಸಂಸದರು ಭಾಗವಹಿಸಲಿಲ್ಲ ಎಂದು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಸೋಮವಾರ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಎರಡು ಡಜನ್ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗಳು, ಲೋಕಸಭೆ ಮತ್ತು ರಾಜ್ಯಸಭೆಯ 244 ಸಂಸದರನ್ನು ಹೊಂದಿದ್ದು, ಬಜೆಟ್ ಮಂಡನೆ ನಂತರ ಮೂರು ವಾರಗಳ ವಿರಾಮದಲ್ಲಿ ಎಲ್ಲಾ ಸಚಿವಾಲಯಗಳ ಅನುದಾನಕ್ಕಾಗಿ ಬೇಡಿಕೆಗಳನ್ನು ಪರಿಗಣಿಸಿದೆ. ಬಿಡುವಿನ ನಂತರ ಪ್ರಾರಂಭದ ದಿನದಂದು ಮಾತನಾಡಿದ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆ ಅಧ್ಯಕ್ಷರೂ ಆಗಿರುವ ವೆಂಕಯ್ಯ ನಾಯ್ಡು 'ಒಟ್ಟು 244 ರಲ್ಲಿ ಶೇಕಡಾ 39 ರಷ್ಟು ಅಂದರೆ 95 ಸದಸ್ಯರು, ಅನುದಾನದ ಬೇಡಿಕೆಗಳ ಕುರಿತು ಯಾವುದೇ ಸಭೆಯಲ್ಲಿ ಭಾಗವಹಿಸಲಿಲ್ಲ. ಕೇವಲ 28 ಸದಸ್ಯರು ಕಳೆದ ಬಾರಿ ಶೂನ್ಯ ಹಾಜರಾತಿಯನ್ನು ಹೊಂದಿದ್ದರು' ಎಂದು ಸದನದಲ್ಲಿ ತಿಳಿಸಿದರು.


ಈ ಸಮಿತಿಗಳಲ್ಲಿನ 78 ರಾಜ್ಯಸಭಾ ಸಂಸದರಲ್ಲಿ 23 ಅಥವಾ 29 ರಷ್ಟು ಯಾವುದೇ ಸಭೆಗೆ ಹಾಜರಾಗಿಲ್ಲ, ಜನರು ಡಿಸೆಂಬರ್‌ನಲ್ಲಿ ನಡೆದ ಕೊನೆಯ ಪರಿಶೀಲನೆಯಲ್ಲಿ ಶೇ.11 ರಷ್ಟು ಸದಸ್ಯರು ಯಾವುದೇ ಸಭೆಗೆ ಹಾಜರಾಗಿರಲಿಲ್ಲ.166 ಲೋಕಸಭಾ ಸಂಸದರಲ್ಲಿ 78 ಅಥವಾ 47 ರಷ್ಟು ಮಂದಿ ಈ ಸಮಿತಿಗಳ ಎಲ್ಲಾ ಸಭೆಗಳಲ್ಲಿ ಗೈರು ಹಾಜರಾಗಿದ್ದಾರೆ ಎಂದು ಅವರು ಹೇಳಿದರು. ಕಳೆದ ಭಾರಿಯ ಪರಿಶೀಲನೆಯಲ್ಲಿ 72 ಸಂಸದರು ಗೈರು ಹಾಜರಾಗಿದ್ದರು ಎಂದು ಅವರು ಹೇಳಿದರು.


1993 ರಲ್ಲಿ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗಳನ್ನು ಪರಿಚಯಿಸಿದಾಗಿನಿಂದ, ಎಲ್ಲಾ ಪಕ್ಷಗಳ ಸದಸ್ಯರನ್ನು ಹೊಂದಿರುವ ಮತ್ತು ಪಕ್ಷೇತರ ರೀತಿಯಲ್ಲಿ ಕೆಲಸ ಮಾಡುವ ಸಮತಿಗಳಿಂದ ಸಂಸತ್ತಿನ ಗಣನೀಯ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ನಾಯ್ಡು ಹೇಳಿದರು. ಈ ಸಮಿತಿ ಸಭೆಗಳು ಸಂಸತ್ತಿನ ಸುಮಾರು 30 ಸಭೆಗಳಿಗೆ ಸೇರುತ್ತವೆ ಮತ್ತು ಸಂಸತ್ತು ಸಭೆ ಸೇರಿದ ದಿನಗಳ ಸಂಖ್ಯೆಯಲ್ಲಿನ ಕುಸಿತದಿಂದ ಉಂಟಾದ ಅನೂರ್ಜಿತತೆಯನ್ನು ಇವು ತುಂಬುತ್ತದೆ.