ಮಹಾರಾಷ್ಟ್ರ ಚುನಾವಣೆ: ವರ್ಲಿ ಕ್ಷೇತ್ರದಿಂದ ಇಂದು ಆದಿತ್ಯ ಠಾಕ್ರೆ ನಾಮಪತ್ರ ಸಲ್ಲಿಕೆ, ಶಿವಸೇನೆಯಿಂದ ರೋಡ್ ಶೋ!

ಆದಿತ್ಯ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ತಂದೆ ಹಾಗೂ ಶಿವಸೇನೆ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಪಕ್ಷದ ಉನ್ನತ ನಾಯಕರು ಭಾಗವಹಿಸಲಿದ್ದಾರೆ. 

Last Updated : Oct 3, 2019, 02:28 PM IST
ಮಹಾರಾಷ್ಟ್ರ ಚುನಾವಣೆ: ವರ್ಲಿ ಕ್ಷೇತ್ರದಿಂದ ಇಂದು ಆದಿತ್ಯ ಠಾಕ್ರೆ ನಾಮಪತ್ರ ಸಲ್ಲಿಕೆ, ಶಿವಸೇನೆಯಿಂದ ರೋಡ್ ಶೋ! title=

ಮುಂಬೈ: ಮಹಾರಾಷ್ಟ್ರದ ಪ್ರತಿಷ್ಟಿತ ವಿಧಾನಸಭಾ ಕ್ಷೇತ್ರವಾದ ವರ್ಲಿ ಸ್ಥಾನಕ್ಕೆ ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಮೂಲಗಳ ಪ್ರಕಾರ, ಆದಿತ್ಯ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ತಂದೆ ಹಾಗೂ ಶಿವಸೇನೆ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಪಕ್ಷದ ಉನ್ನತ ನಾಯಕರು ಭಾಗವಹಿಸಲಿದ್ದಾರೆ. ಇದೇ ವೇಳೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಹಾಜರಾಗಲಿದ್ದಾರೆ ಎನ್ನಲಾಗಿದೆ.

ಇದೇ ವೇಳೆ, ನಾಮಪತ್ರ ಸಲ್ಲಿಕೆಗೂ ಮುನ್ನ, ಶಿವಸೇನೆಯು ಮುಂಬೈನಲ್ಲಿ ರೋಡ್ ಶೋ ನಡೆಸಲಿದೆ. ಮೂಲಗಳ ಪ್ರಕಾರ ರೋಡ್ ಶೋ, ಗಣಪತ್ರಾವ್ ಕದಮ್ ಮಾರ್ಗ -ಶ್ರೀ ರಾಮ್ ಮಿಲ್ - ಬಿಡಿಡಿ ಟ್ರಿಕ್ - ಶಿವರಾಮ್ ಅಮೃತವಾರ್ ಮಾರ್ಗ - ಬನ್ಸೋಡ್ ರಸ್ತೆ - ಭಗೋಜಿ ವಾಘಮರೆ ಮಾರ್ಗ - ದೇವರೂಕರ್ ಮಾರ್ಗ - ಬಿಡಿಡಿ ಚಾಲ್ ನಂ. 61 ಮತ್ತು 40 - ಭೋಸಲೆ ರಸ್ತೆ - ವರ್ಲಿ ನಾಕಾ ಮತ್ತು ಡಾ ಇ ಮೋಸೆಸ್ ಮಾರ್ಗ ಬಿಎಂಸಿ ಎಂಜಿನಿಯರಿಂಗ್ ಹಬ್ ತಲುಪಲಿದೆ.

2010ರಲ್ಲಿ ಯುವಸೇನಾ ಅಧ್ಯಕ್ಷರಾಗಿ ನೇಮಕವಾಗಿದ್ದ ಆದಿತ್ಯ ಠಾಕ್ರೆ ಅವರನ್ನು 2018ರಲ್ಲಿ ಶಿವಸೇನೆಯ ನಾಯಕ ಎಂದು ಹೆಸರಿಸಲಾಯಿತು. ಫಿಟ್‌ನೆಸ್ ಮತ್ತು ಕ್ರೀಡಾ ಉತ್ಸಾಹಿ ಆಗಿರುವ ಆದಿತ್ಯ ಅವರು ಮುಂಬೈ ಜಿಲ್ಲಾ ಫುಟ್‌ಬಾಲ್ ಸಂಘದ ಅಧ್ಯಕ್ಷರೂ ಆಗಿದ್ದಾರೆ.

Trending News