ಚೆನ್ನೈ: ಚೆನ್ನ್ನೈ ನ ಸೈದಾಪೆಟ್ ನಲ್ಲಿ ಸುದ್ದಿಗಾರರೊಂದಿಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷೆ ತಮಿಲಿಸೈ ಸುಂದರರಾಜನ್ ಮಾತನಾಡುತ್ತಿರುವ ಸಂದರ್ಭದಲ್ಲಿ ಅಟೋ ಡ್ರೈವರ್ ರೊಬ್ಬ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಅವರ ಮೇಲೆ ಬಿಜೆಪಿ ನಾಯಕರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
#WATCH Saidapet(Chennai): BJP leader V Kalidass pushes and hits an auto rickshaw driver who asked Tamil Nadu BJP Chief Tamilisai Soundararajan about petrol price hike (16.9.18) pic.twitter.com/5SRH60sb23
— ANI (@ANI) September 17, 2018
ಈಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ತದಂತರ ನ್ಯೂಸ್ ಮಿನಿಟ್ ಗೆ ಪ್ರತಿಕ್ರಿಯೆ ನೀಡಿರುವ ಅಟೋ ಡ್ರೈವರ್ " ನಾನು ರಿಕ್ಷಾ ಚಾಲಕ,ಪೆಟ್ರೋಲ್ ಬೆಲೆ ಏರಿಕೆ ನನ್ನ ಜೀವನಕ್ಕೆ ಬಾದಿಸಿದೆ.ಅವರು ಸರ್ಕಾರ ಮಾಡಿರುವ ಉತ್ತಮ ಕೆಲಸದ ಬಗ್ಗೆ ಮಾತನಾಡುತ್ತಿದ ಸಮಯದಲ್ಲಿ ನನಗೆ ಇದನ್ನು ಕೇಳಬೇಕು ಅನಿಸಿತು ಅದಕ್ಕೆ ನಾನು ಕೇಳಿದೆ.ಅವರು ವಿಐಪಿ ಆಗಿದ್ದರಿಂದ ನನಗೆ ಕಪಾಳಮೋಕ್ಷ ಮಾಡಿದರು