ಆತನಿಗೆ ಬ್ಯಾಟ್ ಹಿಡಿಯುವುದು ಗೊತ್ತಿಲ್ಲ, ಸ್ಕೋರ್‌ ಬಗ್ಗೆ ತಿಳಿದೇ ಇಲ್ಲ.. ಆದರೂ! ಸಂಚಲನ ಸೃಷ್ಟಿಸಿತು ರಾಗಾ ಹೇಳಿಕೆ

ಬಿಹಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಮತ್ತು ರಾಯ್ ಬರೇಲಿಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಅಮಿತ್ ಶಾ ಅವರ ಪುತ್ರ ಜಯ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Written by - Krishna N K | Last Updated : Nov 8, 2025, 06:18 PM IST
    • ಅಮಿತ್ ಶಾ ಪುತ್ರ ಜಯ್ ಶಾ ವಿರುದ್ಧ ರಾಗಾ ತೀವ್ರ ವಾಗ್ದಾಳಿ
    • ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಮತ್ತು ರಾಯ್ ಬರೇಲಿಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ
    • ಬಿಹಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ರಾಹುಲ್‌ ಗಾಂಧಿ ಹೇಳಿಕೆ
ಆತನಿಗೆ ಬ್ಯಾಟ್ ಹಿಡಿಯುವುದು ಗೊತ್ತಿಲ್ಲ, ಸ್ಕೋರ್‌ ಬಗ್ಗೆ ತಿಳಿದೇ ಇಲ್ಲ.. ಆದರೂ! ಸಂಚಲನ ಸೃಷ್ಟಿಸಿತು ರಾಗಾ ಹೇಳಿಕೆ

Rahul Gandhi on Jai Shah : ದೇಶದಲ್ಲಿ ಕೇವಲ 50-60 ಜನರು ಮಾತ್ರ ಕನಸು ಕಾಣಬಲ್ಲರು. ಇದು ಅಂಬಾನಿಯ ಮಗ, ಅದಾನಿಯ ಮಗ, ಅಮಿತ್ ಶಾ ಮಗನಿಗೆ ಮಾತ್ರ ಸಾಧ್ಯ. ಜಯ್ ಶಾ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ರಾಹುಲ್, ಅಮಿತ್ ಶಾ ಅವರ ಮಗನಿಗೆ ಬ್ಯಾಟ್ ಹಿಡಿಯುವುದೂ ಗೊತ್ತಿಲ್ಲ, ರನ್ ಗಳಿಸುವುದಂತೂ ತಿಳಿದಿಲ್ಲ, ಆದರೂ ಕ್ರಿಕೆಟ್ ಅಧ್ಯಕ್ಷರು, ಅವರು ಇಡೀ ಕ್ರಿಕೆಟ್ ಸಂಸ್ಥೆಯನ್ನು ನಿಯಂತ್ರಿಸುತ್ತಾರೆ. ಇದೆಲ್ಲವೂ ಹಣದ ಬಗ್ಗೆ ಎಂದು ರಾಗಾ ಹೇಳಿದರು.

Add Zee News as a Preferred Source

ಇನ್ನು ಎನ್‌ಡಿಎ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ರಾಹುಲ್ ಗಾಂಧಿ, ರೈತರು, ಕಾರ್ಮಿಕರು ಮತ್ತು ಸಣ್ಣ ಪ್ರಮಾಣದ ವ್ಯಾಪಾರಿಗಳನ್ನು ನಾಶಮಾಡಲು ಮೋದಿ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ತಂದಿದೆ ಎಂದು ಕಿರಿಕಾರಿದರು.

ಇದನ್ನೂ ಓದಿ:ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ 

ಅಲ್ಲದೆ, ಎನ್‌ಡಿಎ ಸರ್ಕಾರ ಬಡವರ ಭೂಮಿಯನ್ನು ಕಸಿದುಕೊಂಡು ಅಂಬಾನಿ ಮತ್ತು ಅದಾನಿಗಳಂತಹ ಕೈಗಾರಿಕೋದ್ಯಮಿಗಳಿಗೆ ಉಡುಗೊರೆಯಾಗಿ ನೀಡುತ್ತದೆ ಎಂದು ಅವರು ಆರೋಪಿಸಿದರು. ಬಿಹಾರ ವಿಧಾನಸಭೆಯ 243 ಸ್ಥಾನಗಳಲ್ಲಿ ಒಟ್ಟು 122 ಸ್ಥಾನಗಳಿಗೆ ನವೆಂಬರ್ 11 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ.

ಅಂದಹಾಗೆ, ಜಯ್ ಶಾ ಆಗಸ್ಟ್ 27, 2024 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದರು. ಈ ಹಿಂದೆ ಅವರು ಏಷ್ಯಾದ ಕ್ರಿಕೆಟ್ ವ್ಯವಹಾರಗಳನ್ನು ನಿಯಂತ್ರಿಸುವ ಪ್ರಮುಖ ಸಂಸ್ಥೆಯಾದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ನ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು. ಅವರು 2021 ರಿಂದ 2024 ರವರೆಗೆ ಅಧಿಕಾರದಲ್ಲಿದ್ದರು.

ಇದನ್ನೂ ಓದಿ:ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಿ- ಸುಪ್ರೀಂ ಆದೇಶ

ಅದಕ್ಕೂ ಮೊದಲು, ಅವರು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ 2019 ರಿಂದ 2021 ರವರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News