ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ನಂತರ ಆಕ್ಸಿಸ್ ಮೈ ಇಂಡಿಯಾದ ಪ್ರದೀಪ್ ಕುಮಾರ್ ನಡೆಸಿದ ಚುನಾವಣೋತ್ತರ ಸಮೀಕ್ಷೆ ಫಲಿತಾಂಶದ ಪ್ರಕಾರ ಬಿಹಾರದ ಜನರು ಸಿಎಂ ಸ್ಥಾನಕ್ಕೆ ಜೆಡಿಯು ನ ನಾಯಕ ನಿತೀಶ್ ಕುಮಾರ್ ಗಿಂತಲೂ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರೇ ಫೇವರಿಟ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ದೆಹಲಿ ಸ್ಪೋಟದ ನಂತರ ಪಾಕ್ ಗೆ ಹೆಚ್ಚಿದ 'ಆಪರೇಷನ್ ಸಿಂಧೂರ್' ಭೀತಿ, ಗಡಿಯಲ್ಲಿ ಭಾರಿ ಸೈನ್ಯ ನಿಯೋಜನೆ..!
ಒಂದೆಡೆ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದರೂ ಸಹಿತ ಜನಪ್ರಿಯತೆ ವಿಷಯದಲ್ಲಿ ತೇಜಸ್ವಿಯಾದವ್ ನಿತೀಶ್ ಕುಮಾರ್ ಗಿಂತಲೂ ಹೆಚ್ಚಿನ ಮುನ್ನಡೆಯನ್ನು ಸಾಧಿಸಿದ್ದಾರೆ. ಸಮೀಕ್ಷೆಯ ಪ್ರಕಾರ, ತೇಜಸ್ವಿ ಯಾದವ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಶೇ. 34 ರಷ್ಟು ಜನರು ಬೆಂಬಲಿಸಿದ್ದರೆ, ಜೆಡಿಯು ನಾಯಕ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಶೇ. 22 ರಷ್ಟು ಜನರು ಬೆಂಬಲಿಸಿದ್ದಾರೆ.ಇನ್ನು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರಿಗೆ ಶೇ. 5 ರಷ್ಟು ಜನರು ಸಿಎಂ ಹುದ್ದೆಗೆ ಸೂಕ್ತ ಎಂದು ಹೇಳಿದ್ದಾರೆ.ಇನ್ನೊಂದೆಡೆಗೆ ಬಿಜೆಪಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ವೈಯಕ್ತಿಕವಾಗಿ ಶೇ. 2 ರಷ್ಟು ಬೆಂಬಲವನ್ನು ಮಾತ್ರ ಪಡೆದಿದ್ದಾರೆ.
RJD ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಶೇಕಡಾ 2 ರಷ್ಟು, ಕಾಂಗ್ರೆಸ್ ನಾಯಕರು ಶೇಕಡಾ 3 ರಷ್ಟು ಮತ್ತು ಇತರ RJD ನಾಯಕರು ಶೇಕಡಾ 2 ರಷ್ಟು ಬೆಂಬಲವನ್ನು ಪಡೆದಿದ್ದಾರೆ. ಏತನ್ಮಧ್ಯೆ, ಜನಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಶೇಕಡಾ 4 ರಷ್ಟು ಜನರು ಬೆಂಬಲಿಸಿದ್ದಾರೆ. ಉಳಿದ ಶೇಕಡಾ 12 ರಷ್ಟು ಮತದಾರರು ಇತರ ನಾಯಕರನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: ಇರಾನ್ ನಲ್ಲಿ ಭೀಕರ ಬರಗಾಲ, ಪಾಕ್ ಪಕ್ಕದಲ್ಲೇ ರಾಜಧಾನಿ ಆರಂಭಿಸಲು ಸಿದ್ದತೆ...!
ಒಟ್ಟಾರೆಯಾಗಿ, ಈ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಬಿಹಾರ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಅಲೆಯನ್ನು ಸೂಚಿಸುತ್ತವೆ. ಈ ಬಾರಿ ನಿತೀಶ್ ಕುಮಾರ್ ಅವರ ಜನಪ್ರಿಯತೆ ಸ್ಪಷ್ಟವಾಗಿ ಕುಸಿಯುತ್ತಿದೆ, ಆದರೆ ಸಾರ್ವಜನಿಕರು ಈಗ ತೇಜಸ್ವಿ ಯಾದವ್ ಅವರನ್ನು ಹೊಸ ಚಿಂತನೆ ಮತ್ತು ಹೊಸ ಶಕ್ತಿ ಹೊಂದಿರುವ ನಾಯಕಿಯಾಗಿ ನೋಡಲು ಬಯಸುತ್ತಾರೆ ಎನ್ನುವುದು ಸ್ಪಷ್ಟವಾಗಿದೆ. ನವೆಂಬರ್ 14 ರಂದು ಪ್ರಕಟವಾಗುವ ಅಂತಿಮ ಫಲಿತಾಂಶದಲ್ಲಿ ತೇಜಸ್ವಿ ಯಾದವ್ ಎಷ್ಟರ ಮಟ್ಟಿಗೆ ಮ್ಯಾಜಿಕ್ ಮಾಡಲಿದ್ದಾರೆ ಎನ್ನುವುದಕ್ಕೆ ನಾವು ನಾಳೆಯವರೆಗೆ ಕಾಯಬೇಕಾಗಿದೆ.









