ರಾಜಸ್ಥಾನ: ಬಿಜೆಪಿ ಸಂಸದ ಕಿರೋರಿ ಲಾಲ್ ಮೀನಾಗೆ 6 ತಿಂಗಳ ಶಿಕ್ಷೆ

ರೈಲು ಸಂಚಾರ ತಡೆ ಆರೋಪದಲ್ಲಿ ಪರಿಹಾರವಾಗಿ ಒಂದು ಲಕ್ಷ ರೂ.  ಪಾವತಿಸುವಂತೆ ಮೀನಾ ಅವರಿಗೆ ಆದೇಶಿಸಲಾಗಿದೆ.

Last Updated : Mar 15, 2019, 12:04 PM IST
ರಾಜಸ್ಥಾನ: ಬಿಜೆಪಿ ಸಂಸದ ಕಿರೋರಿ ಲಾಲ್ ಮೀನಾಗೆ 6 ತಿಂಗಳ ಶಿಕ್ಷೆ title=
File Image

ಗಂಗಾಪುರ ಸಿಟಿ: ಬಿಜೆಪಿ ಸಂಸದ ಡಾ.ಕಿರೋರಿ ಲಾಲ್ ಮೀನಾ ಅವರಿಗೆ ರಾಜಸ್ಥಾನ ನ್ಯಾಯಾಲಯ ಆರು ತಿಂಗಳು ಶಿಕ್ಷೆ ವಿಧಿಸಿದ್ದು, 2009-10ರಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ರೈಲ್ವೆಗೆ ಪರಿಹಾರವಾಗಿ ಒಂದು ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಿದೆ.

ಗಂಗಾಪುರ ಸಿಟಿ ನ್ಯಾಯಾಲಯದ ಮುನ್ಸಿಫ್ ಮ್ಯಾಜಿಸ್ಟ್ರೇಟ್ ಜಯ ಅಗರ್ವಾಲ್ ಪೀಠವು ಸೆಕ್ಷನ್ 144 (ಪ್ರದೇಶವೊಂದರಲ್ಲಿ ನಾಲ್ಕು ಕ್ಕಿಂತ ಹೆಚ್ಚು ವ್ಯಕ್ತಿಯ ಸಭೆಯನ್ನು ನಿಷೇಧಿಸುವಂತೆ) ಉಲ್ಲಂಘಿಸಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೀನಾ ಅವರನ್ನು ಅಪರಾಧಿ ಎಂದು ಘೋಷಿಸಿದೆ.

ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಮೀನಾ ವಿರುದ್ಧ ಪ್ರಕರಣ ದಾಖಲಾಗಿದ್ದು,  ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ದಂಡ ವಿಧಿಸಿದ್ದು, ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಕುಲ್ದೀಪ್ ಸಿಂಗ್ ಬರೋಲಿಯಾ ಗುರುವಾರ ಹೇಳಿದರು.

ಕಿರೋರಿ ಲಾಲ್ ಮೀನಾ, ಪಂಕ್ಹಾಲಾಲ್ ಮೀನಾ, ಅಮೃತ್ಲಾಲ್ ಮೀನಾ ಮತ್ತು ರಾಮ್ಕೇಶ್ ಮೀನಾರನ್ನು ಸೆಕ್ಷನ್ 188 ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ತೀರ್ಪಿನ ನಂತರ ಕಿರೋರಿ ಲಾಲ್ ಮೀನಾ ಮತ್ತು ಇತರರು ಜಾಮೀನು ಪಡೆದಿದ್ದಾರೆ. ಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಅವರಿಗೆ ಒಂದು ತಿಂಗಳ ಸಮಯಾವಕಾಶವಿದೆ.

ಏನಿದು ಪ್ರಕರಣ?
ಜನವರಿ 4, 2010 ರಂದು, ಡಾ. ಕಿರೋರಿ ಲಾಲ್ ಮೀನಾ ಪಂಚನಾ ಅಣೆಕಟ್ಟಿನ ನೀರನ್ನು ತೆರೆಯಲು ಪೀಲೋಡ ನಿಲ್ದಾಣದ ಸಮೀಪ ಸಭೆ ನಡೆಸಿದರು. ಈ ಅವಧಿಯಲ್ಲಿ ಆ ಪ್ರದೇಶದಲ್ಲಿ 144 ನೇ ವಿಧಿಯನ್ನು ವಿಧಿಸಲಾಗಿತ್ತು. ಇದರ ಹೊರತಾಗಿಯೂ, ಡಾ. ಕಿರೋರಿ ಲಾಲ್ ಮೀನಾ, ಅವರ ಇತರ ಬೆಂಬಲಿಗರೊಂದಿಗೆ ಪೀಲೋಡದಲ್ಲಿ ಪಾಂಚ್ನಾ ಅಣೆಕಟ್ಟಿನಿಂದ ನೀರನ್ನು ಹೊರಬಿಡುವಂತೆ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದರು.

ಅದೇ ಸಮಯದಲ್ಲಿ, ಪಿಲೋಡಾ ನಿಲ್ದಾಣದ ಬಳಿ ಸಭೆ ಮತ್ತು ಪ್ರತಿಭಟನೆ ಜನರ ರೈಲು ಸಂಚಾರದ ಮೇಲೂ ಪರಿಣಾಮ ಬೀರಿತ್ತು. 
 

Trending News