ಮದುವೆಗೆ ಒಪ್ಪದ ಪ್ರೇಯಸಿಯ ತಾಯಿ, ಎದೆ ಮೇಲೆ ಕುಳಿತು ಕತ್ತು ಹಿಸುಕಿ ಕೊಲೆ ಯತ್ನ..! ಭಗ್ನ ಪ್ರೇಮಿಯ ಭಯಾನಕ ವಿಡಿಯೋ ವೈರಲ್ 

ಯುವಕನೊಬ್ಬ ತನ್ನ ಗೆಳತಿಯ ತಾಯಿಯ ಮೇಲೆ ಕುಳಿತು ಆಕೆಯ ಕತ್ತನ್ನು ಹಿಸುಕಿ ಕೊಲೆ ಮಾಡಲು ಯತ್ನಿಸಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಘಟನೆ ತೆಲಂಗಾಣದಲ್ಲಿ ನಡೆದದ್ದು ಸಂಚಲನ ಮೂಡಿಸುತ್ತಿದೆ..  

Written by - Krishna N K | Last Updated : Mar 2, 2025, 09:50 PM IST
    • ಅನೇಕ ಯುವಕರು ಪ್ರೀತಿ- ಪ್ರೇಮ ಅಂತ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.
    • ಯಾವಾಗ ಪೋಷಕರು ತಮ್ಮ ಪ್ರೇಮ ವಿವಾಹಕ್ಕೆ ಒಪ್ಪಿಕೊಳ್ಳುವುದಿಲ್ಲವೋ ಆಗ ಕ್ರೌರ್ಯತೆ ಮೆರೆಯುತ್ತಿದ್ದಾರೆ..
    • ಅದೇ ರೀತಿ ತೆಲಂಗಾಣದಲ್ಲಿ ನಡೆದ ಘಟನೆಯೊಂದರ ವಿಡಿಯೋ ವೈರಲ್‌ ಆಗುತ್ತಿದೆ...
ಮದುವೆಗೆ ಒಪ್ಪದ ಪ್ರೇಯಸಿಯ ತಾಯಿ, ಎದೆ ಮೇಲೆ ಕುಳಿತು ಕತ್ತು ಹಿಸುಕಿ ಕೊಲೆ ಯತ್ನ..! ಭಗ್ನ ಪ್ರೇಮಿಯ ಭಯಾನಕ ವಿಡಿಯೋ ವೈರಲ್ 

ತೆಲಂಗಾಣ : ಇಂದಿನ ಅನೇಕ ಯುವಕರು ಪ್ರೀತಿ- ಪ್ರೇಮ ಅಂತ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಲವ್‌ ಮ್ಯಾರೇಜ್‌ನಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಯಾವಾಗ ಪೋಷಕರು ತಮ್ಮ ಪ್ರೇಮ ವಿವಾಹಕ್ಕೆ ಒಪ್ಪಿಕೊಳ್ಳುವುದಿಲ್ಲವೋ ಆಗ ಕ್ರೌರ್ಯತೆ ಮೆರೆಯುತ್ತಿದ್ದಾರೆ.. ಅದೇ ರೀತಿ ತೆಲಂಗಾಣದಲ್ಲಿ ನಡೆದ ಘಟನೆಯೊಂದರ ವಿಡಿಯೋ ವೈರಲ್‌ ಆಗುತ್ತಿದೆ... 

Add Zee News as a Preferred Source

ಪ್ರೀತಿ.. ಈ ವಿಚಾರದಲ್ಲಿ ಕೆಲವರು ವಿವಾಹವಾಗಿ ಸುಖ ಜೀವನ ನಡೆಸುತ್ತಿದ್ದಾರೆ.. ಇನ್ನೂ ಕೆಲವರು ತಮ್ಮ ಕೆಲಸ ಮುಗಿಯುತ್ತಿದ್ದಂತೆ ನಿಜ ಬಣ್ಣ ತೋರಿಸುತ್ತಿದ್ದಾರೆ. ಪ್ರೀತಿಗೀತ ಅಂತ ಜೀವನ ಹಾಳು ಮಾಡಿಕೊಂಡವರೇ ಇಂದಿನ ಯುವಗದಲ್ಲಿ ಹೆಚ್ಚು.. ಎಲ್ಲೋ ಒಂದು ಕಡೆ ಪೋಷಕರು ಒಪ್ಪಿ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಡ್ತಾರೆ.. ಅದು ಹುಡುಗ ಶ್ರೀಮಂತನಿದ್ದರೆ.. ಇಲ್ಲವೇ ಸರ್ಕಾರಿ ನೌಕರಿ ಹೊಂದಿದ್ದರೆ..

ಇದನ್ನೂ ಓದಿ:ರಾಹುಲ್ ಗಾಂಧಿ ಜೊತೆ ಗುರುತಿಸಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕಾರಿಣಿಯ ಶವ ಸೂಟ್‌ಕೇಸ್‌ನಲ್ಲಿ ಪತ್ತೆ..! 

ಈ ಪ್ರೇಮಿಗಳು ಸಹ ತಾವು ಪ್ರೀತಿಸುವ ಹುಡುಗಿ/ಹುಡುಗನಿಗಿಂತ ಉತ್ತಮ ವ್ಯಕ್ತಿಯನ್ನು ಕಂಡಾಗ ಎಷ್ಟೋ ವರ್ಷದ ಲವ್‌ ಆಗಿದ್ದರೂ ಬಿಟ್ಟು ಹೋಗುತ್ತಾರೆ. ಈ ಪ್ರಕ್ರಿಯೆಯಲ್ಲಿ ಮಾನಸಿಕವಾಗಿ ಕುಗ್ಗಿಹೋಗಿ ಕೆಲವರು ಆತ್ಮಹತ್ಯೆ ಮಾಡಿಕೊಂಡರೆ ಇನ್ನೂ ಕೆಲವರು ಕೊಲೆ ಮಾಡಲು ಹಿಂಜರಿಯುವುದಿಲ್ಲ..

ಅದೇ ರೀತಿ ರಾಮದುಗು ಮಂಡಲದ ವನ್ನಾರಂ ಮೂಲದ ರಾಜ್ ಕುಮಾರ್, ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದರು. ಇವರಿಬ್ಬರ ನಡುವೆ ಕೆಲವು ತಿಂಗಳುಗಳಿಂದ ಪ್ರೇಮ ಸಂಬಂಧವಿತ್ತು. ಆದರೆ ಯುವತಿಯ ತಾಯಿ ಚಾಮಂತಿಗೆ ಈ ಮದುವೆ ಇಷ್ಟವಿಲ್ಲ. ಅವಳು ತನ್ನ ಮಗಳಿಗೆ ಬೇರೆ ಸಂಬಂಧ ಹುಡುಕಲು ಮುಂದಾದಳು.. ಮಾರ್ಚ್ ನಲ್ಲಿ ಬೇರೊಬ್ಬರಿಗೆ ಮಗಳನ್ನು ಕೊಡಲು ಸಿದ್ಧತೆ ನಡೆಸುತ್ತಿದ್ದರು ಎಂದು ವರದಿಯಾಗಿದೆ. 

ಇದನ್ನೂ ಓದಿ:ಕೇಂದ್ರ ಸಚಿವರ ಮಗಳ ಮೇಲೆ ಲೈಂಗಿಕ ಕಿರುಕುಳ..! ಶಿವ ದೇವಸ್ಥಾನಕ್ಕೆ ಹೋಗಿದ್ದಾಗ ಘಟನೆ.. 

ಇದು ಆತನಿಗೆ ತನ್ನ ಪ್ರೇಯಸಿಯ ತಾಯಿಯ ಮೇಲೆ ದ್ವೇಷ ಬೆಳೆಯಲು ಕಾರಣವಾಯಿತು. ಇಂದು, ಇದ್ದಕ್ಕಿದ್ದಂತೆ ಲವರ್‌ ತಾಯಿ ಮೇಲೆ ಯುವಕ ದಾಳಿ ಮಾಡಿದ್ದಾನೆ. ಕತ್ತು ಹಿಸುಕಿ ಕೊಲ್ಲಲು ಪ್ರಯತ್ನಿಸಿದ್ದಾನೆ. ಬಾಯಿಯಿಂದ ರಕ್ತ ಬಂದರೂ ಬಿಡಲಿಲ್ಲ.. ಅವರ ಕಿರುಚಾಟ ಕೇಳಿ ಸುತ್ತಮುತ್ತಲಿನ ಜನರು ಬಂದು ಯುವಕನನ್ನು ಬಿಡಿಸಿದರು. ಈ ಘಟನೆಯ ನಂತರ, ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರು ರಾಜ್ ಕುಮಾರ್ ಅವರನ್ನು ಬಂಧಿಸಿದರು. ಈ ಘಟನೆಯ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News