Murali Nayak: ಪಾಪಿ ಪಾಕ್ನ ಕೃತ್ಯಕ್ಕೆ ಸಿಲುಕಿ ಭಾರತದ ಯೋಧ ಮುರಳಿ ನಾಯಕ್ ಸಾವನ್ನಪ್ಪಿದ್ದಾರೆ. ಇದೀಗ ಅವರ ತವರಿನಲ್ಲಿ ಅಂತ್ಯ ಸಂಸ್ಕ್ರಿಯೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Murali Nayak: ಪಾಕಿಸ್ತಾನ ಗಡಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾರತದ ವೀರ ಯೋಧ, ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕಲ್ಲಿಕೊಂಡ್ಲ ಗ್ರಾಮದ ಯೋಧ ಹುತಾತ್ಮರಾಗಿದ್ದಾರೆ. ಗೋರಂಟ್ಲ ಮಂಡಲದ ಪುದಗುಂಡ್ಲಪಲ್ಲಿ ತಾಂಡಾದಲ್ಲಿ ಅಳಲಿನ ಛಾಯೆ ಮುಟ್ಟಿದೆ. ಭಾರತಕ್ಕಾಗಿ ಹೋರಡುತ್ತಾ ಪ್ರಾಣ ಕಳೆದುಕೊಂಡ ಮುರಳಿ ನಾಯಕ್ ಅವರ ಹಗಲಿಕೆಯ ನೋವು ಕುಟುಂಬದಲ್ಲಿ ನೋವನ್ನುಂಟು ಮಾಡಿದೆ, ಒಂದು ಕಡೆ ದೇಶಕ್ಕಾಗಿ ಮಗ ಪ್ರಾಣ ಬಿಟ್ಟರೆ, ಮತ್ತೊಂದು ಕಡೆ ಹೆಗಲುದ್ದ ಬೆಳೆಗು ನಿಂತ ಮಗನ ಹಗಲಿಕೆಯಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಹೌದು ಪ್ರಾಣ ತ್ಯಾಗ ಮಾಡಿದ ಯೋಧನ ವಯಸ್ಸು ಕೇವಲ 25 ವರ್ಷ ದೇಶದ ಸೇವೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಆಂಧ್ರ ಪ್ರದೇಶದ ಸತ್ಯಸಾಯಿ ಜಿಲ್ಲಾ ಗೊರಂಟ್ಲಾ ಮಂಡಲದ ಕಲ್ಲಿ ಕೊಂಡದಲ್ಲಿ ಗ್ರಾಮದಲ್ಲಿ ಜನಿಸಿದ ಯೋಧ ಮುರಳಿ ನಾಯಕ್ ಅವರಿಗೆ ದೇಶಕ್ಕಾಗಿ ಕೆಲಸ ಮಾಡುವುದೆಂದರೆ ದೊಡ್ಡ ಕನಸ್ಸಾಗಿತ್ತು, ಮೆನೆಯವರ ವಿರೋಧದ ನಡುವೆಯೂ ಮುರಳಿ ನಾಯಕ್ ಸೇನೆಯನ್ನು ಸೇರಿದ್ದರು, ದೇಶಕ್ಕಾಗಿ ನನ್ನ ಪ್ರಾಣ ಹೋದರು ಪರವಾಗಿಲ್ಲ ಎಂದು ಹೇಳಿ ಹೋಗಿದ್ದ ಮುರಳಿ ನಾಯಕ್ ಇದೀಗ, ದೇಶಕ್ಕಾಗಿ ಹೋರಾಡುತ್ತಾ ವೀರ ಮರಣ ಹೊಂದಿದ್ದಾರೆ.
ಮುರಳಿ ನಾಯಕ್ ಬಡ ಕುಟುಂಬದಲ್ಲಿ ಜನಿಸಿ ವೀರ ಯೋಧ. ದಿನಗೂಲಿ ಕಾರ್ಮಿಕರಾದ ಶ್ರೀರಾಮುಲು ನಾಯಕ್ ಮತ್ತು ಜ್ಯೋತಿಬಾಯಿ ದಂಪತಿಗಳ ಏಕೈಕ ಪುತ್ರ. ಮಗನು ಕೂಲಿ ನಾಲಿ ಮಾಡಿಕೊಂಡು ಕಣ್ಣು ಮುಂದೆ ಇರಲಿ ಎಂಬುವುದು ಮನೆಯವರ ಆಸೆಯಾಗಿತ್ತು, ಆದರೆ ಬಡತನದಲ್ಲಿ ಬೆಳೆದರೂ ಲಕ್ಷ ಲಕ್ಷ ಸಂಪಾದನೆ ಮಾಡುವ ಕನಸು ಕಟ್ಟಿಕೊಳ್ಳದೆ, ಕೂಲಿ ನಾಲಿ ಮಾಡುವುದಕ್ಕೆ ಒಪ್ಪದೆ, ಮುರಳಿ ನಾಯಕ್ ದೇಶ ಸೇವೆ ಮಾಡುವ ಆಯ್ಕೆ ಮಾಡಿಕೊಂಡಿದ್ದರು. ಇವರ ಈ ನಿರ್ಧಾರಕ್ಕೆ ಕುಟುಂಬದವರ ವಿರೋಧವಿತ್ತಾದರೂ, ಮುರಳಿ ನಾಯಕ್ ಸೇನೆಯಲ್ಲಿ ದೇಶಕ್ಕಾಗಿ ಕೆಲಸ ಮಾಡುವುದನ್ನೇ ಆಯ್ದುಕೊಂಡಿದ್ದರು.
ಹುತಾತ್ಮ ಯೋಧನ ಪಾರ್ಥಿವ ಶರೀರವು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿತು. ತದನಂತರ, ಸಾವಿರಾರು ಜನರು ರಾಷ್ಟ್ರಧ್ವಜದೊಂದಿಗೆ ಸಿದ್ಧರಾಗಿ ಹೂವಿನ ಸುರಿಮಳೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು. ದೇಶಕ್ಕಾಗಿ ಹೋರಾಡುತ್ತಾ, ಪಾಪಿ ಪಾಕ್ನ ಕೃತ್ಯಕ್ಕೆ ಮುರಳಿ ನಾಯಕ್ ಇದೀಗ ಸಾವನ್ನಪ್ಪಿದ್ದಾರೆ. ದೇಶದ ಜನರನ್ನು ಉಳಿಸುವ ಕಾರ್ಯದಲ್ಲಿ ಮುರಳಿ ನಾಯಕ್ ತಮ್ಮ ಪ್ರಾಣವನ್ನೇ ಅರ್ಪಿಸಿದ್ದು, ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿದ್ದಾರೆ.
ಆಂಧ್ರ ಪ್ರದೇಶದ ಸಮಾಜ ಕಲ್ಯಾಣ ಸಚಿವೆ ಸುಮಿತ್ರಮ್ಮ ಕುಟುಂಬದ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ್ರು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದೂರವಾಣಿಯಲ್ಲಿ ಕುಟುಂಬದೊಂದಿಗೆ ಮಾತನಾಡಿ ಸಂತೈಸಿದ್ರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ