ಬೋಗಿಗಳನ್ನು ಬಿಟ್ಟು 10 ಕಿ.ಮೀ ಮುಂದೆ ಸಾಗಿದ ರೈಲಿನ ಎಂಜಿನ್!

ಭುವನೇಶ್ವರದಿಂದ ಸಿಕಂದರಾಬಾದ್‌ಗೆ ಬರುವ ವಿಶಾಖಾ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಬೋಗಿಗಳನ್ನು ಬಿಟ್ಟು ಸುಮಾರು 10 ಕಿ.ಮೀ ದೂರ ಪ್ರಯಾಣಿಸಿರುವ ಘಟನೆ ನಡೆದಿದೆ.

Last Updated : Aug 20, 2019, 10:58 AM IST
ಬೋಗಿಗಳನ್ನು ಬಿಟ್ಟು 10 ಕಿ.ಮೀ ಮುಂದೆ ಸಾಗಿದ ರೈಲಿನ ಎಂಜಿನ್! title=
Photo Courtesy: ANI

ಹೈದರಾಬಾದ್: ಆಂಧ್ರಪ್ರದೇಶದಲ್ಲಿ ರೈಲು ಎಂಜಿನ್ ಬೋಗಿಯನ್ನು ಬಿಟ್ಟು ಸುಮಾರು 10 ಕಿ.ಮೀ. ಮುಂದೆ ಸಾಗಿದಾಗ ಘಟನೆ ನಡೆದಿದೆ. ಅದೃಷ್ಟವಶಾತ್, ರೈಲಿನ ಪ್ರಯಾಣಿಕರು ಸರಿಯಾದ ಸಮಯದಲ್ಲಿ ಅದರ ಬಗ್ಗೆ ರೈಲ್ವೆಗೆ ಮಾಹಿತಿ ತಿಳಿಸಿದರು. 

ವಾಸ್ತವವಾಗಿ, ಸೋಮವಾರ (ಆಗಸ್ಟ್ 19) ಸಂಜೆ 6 ಗಂಟೆ ಸುಮಾರಿಗೆ ಭುವನೇಶ್ವರದಿಂದ ಸಿಕಂದರಾಬಾದ್‌ಗೆ ಬರುವ ವಿಶಾಖಾ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಇದ್ದಕ್ಕಿದ್ದಂತೆ ತನ್ನ ಬೋಗಿಗಳನ್ನು ಬಿಟ್ಟು ನರಸಿಂಹಪಟ್ಟಣಂ ರೈಲ್ವೆ ನಿಲ್ದಾಣ ಮತ್ತು ಟುನಿ ರೈಲ್ವೆ ನಿಲ್ದಾಣದ ನಡುವೆ ರೈಲು ಬೋಗಿಗಳು ಮತ್ತು ಎಂಜಿನ್ ನಡುವಿನ ಲಿಂಕ್ ರಾಡ್‌ಗಳು ಮುರಿದು ಸುಮಾರು 10 ಕಿ.ಮೀ. ಸಾಗಿದೆ.

ಸ್ವಲ್ಪ ಸಮಯದ ನಂತರ, ಪ್ರಯಾಣಿಕರು ತಮ್ಮ ರೈಲು ಬೋಗಿಗಳೊಂದಿಗೆ ಎಂಜಿನ್ ಇಲ್ಲ ಎಂದು ತಿಳಿದು, ಎಲ್ಲರೂ ಆಶ್ಚರ್ಯಚಕಿತರಾದರು. ಪ್ರಯಾಣಿಕರು ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸ್ವಲ್ಪ ಸಮಯದ ನಂತರ, ತನ್ನ ಎಂಜಿನ್‌ನ ಹಿಂದೆ ರೈಲು ಬೋಗಿಗಳಿಲ್ಲ ಎಂದು ಚಾಲಕನಿಗೆ ತಿಳಿದುಬಂದಿದೆ. ನಂತರ, ಚಾಲಕನು ಎಂಜಿನ್‌ನೊಂದಿಗೆ ರೈಲಿನ ಕೋಚ್ (ಬೋಗಿಗಳು) ಉಳಿದಿದ್ದ ಸ್ಥಳಕ್ಕೆ ಮರಳಿದನು. ತಂತ್ರಜ್ಞರ ಸಹಾಯದಿಂದ ಬೋಗಿಗಳನ್ನು ಎಂಜಿನ್‌ನೊಂದಿಗೆ ಮತ್ತೆ ಜೋಡಿಸಲಾಯಿತು. ಸ್ವಲ್ಪ ಸಮಯದ ನಂತರ ರೈಲು ತನ್ನ ಗಮ್ಯಸ್ಥಾನಕ್ಕೆ ಹೊರಟಿತು.

ವಿಶಾಖಾ ಎಕ್ಸ್‌ಪ್ರೆಸ್ ಭುವನೇಶ್ವರದಿಂದ ಸಿಕಂದರಾಬಾದ್ ನಡುವೆ ಚಲಿಸುತ್ತದೆ. ಸೋಮವಾರ ಸಂಜೆ 04.30 ರ ಸುಮಾರಿಗೆ ರೈಲು ವಿಶಾಖಪಟ್ಟಣಂನಿಂದ ಹೊರಟಿತು. ಆದರೆ ಸಂಜೆ 6 ಗಂಟೆಗೆ ನರಸಿಂಹಪಟ್ಟಣಂ ನಿಲ್ದಾಣದ ಬಳಿ ರೈಲಿನ ಕೋಚ್ ಎಂಜಿನ್‌ನಿಂದ ಮುರಿದು ಬಿದ್ದಿದೆ. ಈ ಅಪಘಾತದ ಬಗ್ಗೆ ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ. ಈ ಅಪಘಾತದಿಂದಾಗಿ, ಈ ಮಾರ್ಗದಲ್ಲಿ ಚಲಿಸುವ ರೈಲುಗಳ ಮಾರ್ಗ ಬದಲಿಸಬೇಕಾಯಿತು.

Trending News