ರಾಂಚಿ: ಜಾರ್ಖಂಡ್‍ನ ಗಿರಿಧ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‍ಕೌಂಟರ್‍ನಲ್ಲಿ ಮೂವರು ನಕ್ಸಲರು ಹತ್ಯೆಯಾಗಿದ್ದು,  ಓರ್ವ ಸಿಆರ್ಪಿಎಫ್ ಯೋಧ ಹುತಾತ್ಮರಾಗಿದ್ದಾರೆ. 


COMMERCIAL BREAK
SCROLL TO CONTINUE READING

ರಾಂಚಿ ಯಿಂದ 185 ಕಿ.ಮೀ. ದೂರದಲ್ಲಿರುವ ಬೆಲ್ಬಾ ಘಾಟ್ ಅರಣ್ಯ ಪ್ರದೇಶದಲ್ಲಿ ಸಿಆರ್ಪಿಎಫ್ ನ 7ನೇ  ಬೆಟಾಲಿಯನ್ ಇಂದು ಬೆಳಿಗ್ಗೆ 6:15ರ ವೇಳೆಗೆ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಎನ್‍ಕೌಂಟರ್ ನಡೆದಿದ್ದು ಸೇನಾ ಪಡೆಗಳು ಮೂವರು ನಕ್ಸಲರ ಮೃತ ದೇಹವನ್ನು ವಶಕ್ಕೆ ಪಡೆದಿದ್ದಾರೆ.  ಓರ್ವ ಸಿಆರ್ಪಿಎಫ್ ಯೋಧ ಮೃತಪಟ್ಟಿದ್ದಾರೆ.



ಪ್ರದೇಶದಲ್ಲಿ ಮೂವರು ನಕ್ಸಲರ ಮೃತ ದೇಹ ವಶಪಡಿಸಿಕೊಂಡಿರುವ ಭದ್ರತಾ ಪಡೆ, ಇದಲ್ಲದೆ ಮೃತ ನಕ್ಸಲರ ಬಳಿಯಿದ್ದ ಎಕೆ -47 ರೈಫಲ್, 3 ಮ್ಯಾಗಜಿನ್ ಮತ್ತು ಸ್ಫೋಟಕಗಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಪ್ರದೇಶದಲ್ಲಿ ಉಳಿದ ನಕ್ಸಲರಿಗಾಗಿ ಭದ್ರತಾ ಪಡೆ ತೀವ್ರ ಶೋಧ ನಡೆಸಿದೆ.