ಈ ದಾಳಿಗೆ ಭಾರತ ಸರ್ಕಾರದ ವೈಫಲ್ಯವೇ ಕಾರಣ.. ಸೈನಿಕರು ಎಲ್ಲಿದ್ದರು..! ಮಾಜಿ ಕ್ರಿಕೆಟಿಗನ ಹೇಳಿಕೆ ವೈರಲ್‌

Pahalgam Attack updates : ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಭಾರತ ಸರ್ಕಾರ ಪಾಕಿಸ್ತಾನವನ್ನು ದೂಷಿಸುತ್ತಿದ್ದರೆ, ಮಾಜಿ ಕ್ರಿಕೆಟಿಗರೊಬ್ಬರು, ಭಾರತ ಭದ್ರತಾ ವೈಫಲ್ಯ ಎಂದು ಆರೋಪಿಸಿದ್ದಾರೆ. ಇದೀಗ ಭಾರೀ ವಿರೋಧಕ್ಕೆ ಕಾರಣವಾಗಿದೆ.

Written by - Krishna N K | Last Updated : Apr 26, 2025, 03:02 PM IST
    • ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಾರೆ.
    • ಈ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿದೆ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.
    • ಪಾಕಿಸ್ತಾನ ದಾಳಿಯನ್ನು ಒಪ್ಪಿಕೊಳ್ಳುವ ಬದಲು ಭಾರತವನ್ನು ದೂಷಿಸಿದ್ದಾನೆ ಈ ಕ್ರಿಕೆಟಿಗ.
ಈ ದಾಳಿಗೆ ಭಾರತ ಸರ್ಕಾರದ ವೈಫಲ್ಯವೇ ಕಾರಣ.. ಸೈನಿಕರು ಎಲ್ಲಿದ್ದರು..! ಮಾಜಿ ಕ್ರಿಕೆಟಿಗನ ಹೇಳಿಕೆ ವೈರಲ್‌

Pahalgam terror attack : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಗೆ ಪ್ರಪಂಚವೇ ಮರುಗುತ್ತಿದೆ.. ಉಗ್ರರ ಅಟ್ಟಾಹಾಸಕ್ಕೆ 26 ಅಮಾಯಕರ ಜೀವಗಳನ್ನು ಬಲಿಯಾಗಿವೆ.. ಈ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿದೆ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ. ಇಡೀ ಜಗತ್ತು ಈ ಕ್ರೌರ್ಯವನ್ನು ಖಂಡಿಸುತ್ತಿದೆ. ಆದರೆ ಭಯೋತ್ಪಾದಕರಿಗೆ ಆಶ್ರಯ ನೀಡುವ ಪಾಕಿಸ್ತಾನ ದಾಳಿಯನ್ನು ಒಪ್ಪಿಕೊಳ್ಳುವ ಬದಲು ಭಾರತವನ್ನು ದೂಷಿಸಿದ್ದಾನೆ ಈ ಕ್ರಿಕೆಟಿಗ. 

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತದ ಜನರಲ್ಲಿ ಪಾಕಿಸ್ತಾನದ ವಿರುದ್ಧ ತೀವ್ರ ಕೋಪವಿದೆ. ಈ ದಾಳಿಯಲ್ಲಿ ಮಡಿದವರಿಗೆ ಪ್ರಪಂಚದಾದ್ಯಂತ ಜನರು ಸಂತಾಪ ಸೂಚಿಸುತ್ತಿದ್ದಾರೆ. ಆದರೆ, ಪ್ರತಿ ಬಾರಿಯಂತೆ, ಪಾಕಿಸ್ತಾನದ ರಾಜಕೀಯ ಪಕ್ಷಗಳು ಈ ದಾಳಿಗೆ ಭಾರತ ಸರ್ಕಾರವನ್ನು ದೂಷಿಸುತ್ತಿವೆ. 

ಇದನ್ನೂ ಓದಿ:ಬನ್ನಿ ಭಾರತೀಯರೇ "ನಾವು ಸಿದ್ಧರಿದ್ದೇವೆ".. ನಮಗೂ ಸಾಮರ್ಥ್ಯವಿದೆ..! ಪಾಕಿಸ್ತಾನ ಪ್ರಧಾನಿ ಘೋಷಣೆ

ಅದೇ ಸಮಯದಲ್ಲಿ, ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ರೆಹಮಾನ್ ಕೂಡ ಈ ವಿಷಯಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ದಾಳಿಗೆ ಭಾರತ ಸರ್ಕಾರದ ವೈಫಲ್ಯವೇ ಕಾರಣ ಎಂದು ಅವರು ಆರೋಪಿಸಿದರು. ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು, 'ನೋಡಿ, ವಿಷಯ ಏನೆಂದರೆ ದಾಳಿ ನಡೆದಿದ್ದು ಕಾಶ್ಮೀರದ ಪಹಲ್ಗಾಮ್‌ನಲ್ಲಿ. ಭಾರತದಲ್ಲಿ 9 ಲಕ್ಷ ಸೈನಿಕರಿದ್ದಾರೆ. ಈ ದಾಳಿ 900,000 ಸೈನಿಕರ ಸಮ್ಮುಖದಲ್ಲಿ ನಡೆಯಿತು. ಭಾರತೀಯ ಪಡೆಗಳು ಮೊದಲು ಪ್ರತಿಕ್ರಿಯಿಸಬೇಕು. ಇದು ಭದ್ರತಾ ವೈಫಲ್ಯ, ಇದಕ್ಕೆ ಪಾಕಿಸ್ತಾನವನ್ನು ಹೇಗೆ ದೂಷಿಸಲು ಸಾಧ್ಯ? ಅಲ್ಲಿ ನಿಮ್ಮ ಸುರಕ್ಷತೆಯನ್ನು ನೀವು ನೋಡಿಕೊಳ್ಳಬೇಕು. ಭಾರತವು ಬಹಳ ದೊಡ್ಡ ದೇಶ, ಇದನ್ನು ಹೆಚ್ಚಾಗಿ ಸೂಪರ್ ಪವರ್ ಎಂದು ಕರೆಯಲಾಗುತ್ತದೆ. ಆದರೆ, ಅವರು ಯಾವುದೇ ಪುರಾವೆಗಳಿಲ್ಲದೆ ಎಲ್ಲದಕ್ಕೂ ಪಾಕಿಸ್ತಾನವನ್ನು ದೂಷಿಸುತ್ತಿದ್ದಾರೆ" ಎಂದಿದ್ದಾನೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 26 ಪ್ರವಾಸಿಗರಿಗೆ ಶೋಯೆಬ್ ರೆಹಮಾನ್ ಯಾವುದೇ ಸಹಾನುಭೂತಿ ವ್ಯಕ್ತಪಡಿಸಲಿಲ್ಲ ಎಂಬುದು ಗಮನಾರ್ಹ. ಅಲ್ಲದೆ, ಭಾರತ ಮತ್ತು ಸೇನೆಯ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದೇ ಭಯೋತ್ಪಾದಕರನ್ನು ಬೆಂಬಲಿಸಿದಂತಿವೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News