ಜೆಎನ್‌ಯು: 300% ಶುಲ್ಕ ಹೆಚ್ಚಳಕ್ಕೆ ಯಾವುದೇ ಅರ್ಥವಿಲ್ಲ ಎಂದ ಗುಲಾಮ್ ನಬಿ ಆಜಾದ್

ಶುಲ್ಕ ಏರಿಕೆ ವಿರುದ್ಧ ಜೆಎನ್‌ಯು ವಿದ್ಯಾರ್ಥಿಗಳು ಸೋಮವಾರ ಕಾಲ್ನಡಿಗೆಯಲ್ಲಿ ಸಂಸತ್ ಗೆ ಮಾರ್ಚ್ ಕೈಗೊಂಡಿದ್ದಾರೆ.

Last Updated : Nov 18, 2019, 01:58 PM IST
ಜೆಎನ್‌ಯು: 300% ಶುಲ್ಕ ಹೆಚ್ಚಳಕ್ಕೆ ಯಾವುದೇ ಅರ್ಥವಿಲ್ಲ ಎಂದ ಗುಲಾಮ್ ನಬಿ ಆಜಾದ್ title=
File Image

ನವದೆಹಲಿ: ಶುಲ್ಕ ಹೆಚ್ಚಳದ ವಿರುದ್ಧ ಆಂದೋಲನ ನಡೆಸುತ್ತಿರುವ ಜೆಎನ್‌ಯು(JNU) ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ (Ghulam Nabi Azad) ಬೆಂಬಲ ನೀಡಿದ್ದಾರೆ. ಶುಲ್ಕವನ್ನು ಶೇಕಡಾ 300 ರಷ್ಟು ಹೆಚ್ಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಆಜಾದ್ ಹೇಳಿದ್ದಾರೆ.

ಈ ಸಂಪೂರ್ಣ ವಿವಾದವನ್ನು ಬಗೆಹರಿಸಲು ಎಚ್ಆರ್‌ಡಿ ಸಚಿವಾಲಯವು ಸಮಿತಿ ರಚಿಸಿರುವ ವಿರುದ್ಧ ವಾಗ್ಧಾಳಿ ನಡೆಸಿದ ಗುಲಾಮ್ ನಬಿ ಆಜಾದ್, ಅಂತಹ ಸಮಿತಿಗೆ ಯಾವುದೇ ಅರ್ಥವಿಲ್ಲ ಎಂದರು.

ಮಾಜಿ ಯುಜಿಸಿ ಅಧ್ಯಕ್ಷ ವಿ.ಎಸ್. ಚೌಹಾನ್ ಅವರ ಅಧ್ಯಕ್ಷತೆಯಲ್ಲಿ ಮಾನವ ಸಂಪನ್ಮೂಲ ಸಚಿವಾಲಯವು ಸಮಿತಿಯನ್ನು ರಚಿಸಿದೆ. ಈ ಸಮಿತಿ ವಿದ್ಯಾರ್ಥಿಗಳು ಮತ್ತು ಜೆಎನ್‌ಯು ಆಡಳಿತ ಮಂಡಳಿಯೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ.

ಶುಲ್ಕ ಹೆಚ್ಚಳದ ವಿರುದ್ಧ ಜೆಎನ್‌ಯು ವಿದ್ಯಾರ್ಥಿಗಳು ಸೋಮವಾರದವರೆಗೆ ಕಾಲ್ನಡಿಗೆಯಲ್ಲಿ ಸಂಸತ್ ಗೆ ಮೆರವಣಿಗೆ ಕೈಗೊಂಡಿದ್ದಾರೆ. ವಿದ್ಯಾರ್ಥಿಗಳ ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಕಠಿಣ ಭದ್ರತಾ ವ್ಯವಸ್ಥೆ ಮಾಡಿದ್ದಾರೆ.

Trending News