ಕಳೆದಿರುವ 10 ಲಕ್ಷ ರೂ ಹಿಂತಿರುಗದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವೆ-ಎಸ್ಪಿ ಶಾಸಕ

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಎಸ್ಪಿ ಶಾಸಕರು ತಮ್ಮ 10 ಲಕ್ಷ ರೂಪಾಯಿ ಕಳ್ಳತನವಾಗಿದೆ. ಒಂದು ವೇಳೆ ಈ ಹಣ ವಾಪಸ್ ಬರೆದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ.

Last Updated : Feb 18, 2019, 06:40 PM IST
ಕಳೆದಿರುವ 10 ಲಕ್ಷ ರೂ ಹಿಂತಿರುಗದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವೆ-ಎಸ್ಪಿ ಶಾಸಕ  title=
ಸಾಂದರ್ಭಿಕ ಚಿತ್ರ

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಎಸ್ಪಿ ಶಾಸಕರು ತಮ್ಮ 10 ಲಕ್ಷ ರೂಪಾಯಿ ಕಳ್ಳತನವಾಗಿದೆ. ಒಂದು ವೇಳೆ ಈ ಹಣ ವಾಪಸ್ ಬರೆದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ.

ಅಜಂಗಡ್ ನಲ್ಲಿರುವ ಮೆಹನಗರ್ ದ ಕ್ಷೇತ್ರದ ಎಸ್ಪಿ ಶಾಸಕರಾಗಿರುವ ಕಲ್ಪನಾಥ್ ಪಾಸ್ವಾನ್, ಈ ಘಟನೆಯ ವಿಚಾರವಾಗಿ ಇದುವರೆಗೆ ಯಾವುದೇ ದೂರನ್ನು ದಾಖಲಿಸಿಕೊಂಡಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

"ನಾನು ಕೈ ಮುಗಿದು ಈ ಸದನಕ್ಕೆ ಬೇಡಿಕೆ ಕೊಳ್ಳುತ್ತೇನೆ. ಇಲ್ಲಿ ನ್ಯಾಯ ಸಿಗದಿದ್ದರೆ ಎಲ್ಲಿಗೆ ಹೋಗಲಿ, ನಾನು ಸತ್ತು ಹೋಗುತ್ತೇನೆ, ನಾನು ಬಡವನಾಗಿದ್ದು...ಒಂದು ವೇಳೆ ನನ್ನ ಹಣ ಸಿಗದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ " ಎಂದು ಶೂನ್ಯ ವೇಳೆ ಸಂದರ್ಭದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ "ಈ  ಕುರಿತಾಗಿ ವರದಿಯನ್ನು ತರಿಸಿ ನ್ಯಾಯವನ್ನು ಒದಗಿಸುವ ಭರವಸೆ ನೀಡಿದರು. ಅಜಂಗಡ್ ಹೋಟೆಲ್ ನಲ್ಲಿ ತಂಗಿದ್ದ ವೇಳೆ ಈ ಹಣ ಕಳ್ಳತನವಾಗಿದೆ.ಆದರೆ ದೂರನ್ನು ದಾಖಲಿಸಿಕೊಂಡಿಲ್ಲ ಎಂದು ಶಾಸಕರು ತಿಳಿಸಿದರು.

 

Trending News