ನವದೆಹಲಿ: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಕಠುವಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಕಲಾಕೃತಿ ಬಿಡಿಸಿದ್ದಕ್ಕೆ ಚಿತ್ರ ಕಲಾವಿದೆ  ದುರ್ಗಾ ಮಾಲತಿಯವರ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.ಇದರಿಂದಾಗಿ ಅವರ ಮನೆ ಮುಂದಿರುವ ವಾಹನವು ಕೂಡಾ ಜಖಂಗೊಂಡಿದೆ. 


COMMERCIAL BREAK
SCROLL TO CONTINUE READING

ಈಗಾಗಲೇ ಸ್ಥಳೀಯ ಪೊಲೀಸರು ಅಪರಾಧಿಗಳು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ದುರ್ಗಾ ಮಾಲತಿ ಅವರ ಮನೆಗೆ ಭದ್ರತೆ ಬಿಗಿಗೊಳಿಸಿದ್ದಾರೆ.


ಮಾಲತಿಯವರು ಒಬ್ಬ ಕಲಾವಿದರಾಗಿದ್ದು ಕತುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ಪ್ರತಿಭಟಿಸಿ ಕೆಲವು ದಿನಗಳ ಹಿಂದೆ ದೇವರ ವಿಗ್ರಹಗಳೊಂದಿಗೆ ಪುರುಷ ಜನನಾಂಗಗಳನ್ನು ಚಿತ್ರಿಸಿರುವ ಎರಡುವರ್ಣಚಿತ್ರಗಳನ್ನು ಬಿಡಿಸಿದ್ದಾರೆ. ಇದಕ್ಕೆ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಯ ಕರೆಗಳು ಬರುತ್ತಿವೆ.