PM Narendra Modi live news: ಇದು ಕೇವಲ ವಿರಾಮ.. ನಾವು ಪಾಕಿಸ್ತಾನದ ಮೇಲೆ ಕಣ್ಣಿಟ್ಟಿದ್ದೇವೆ

PM Narendra Modi address nation live : ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೇಡು ತೀರಿಸಿಕೊಂಡ ನಂತರ "ಆಪರೇಷನ್‌ ಸಿಂಧೂರ್‌" ಹಾಗೂ ಕದನ ವಿರಾಮದ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ಮೊದಲಬಾರಿಗೆ ಮಾತನಾಡಲಿದ್ದಾರೆ. ಮೋದಿ ದೇಶವಾಸಿಗಳಿಗೆ ಏನು ಹೇಳುತ್ತಾರೆ..? ಪಾಕಿಸ್ತಾನಕ್ಕೆ ಯಾವ ಎಚ್ಚರಿಕೆ ನೀಡುತ್ತಾರೆ..? ಎನ್ನುವುದನ್ನು ತಿಳಿಯಲು ದೇಶದ ಜನರು ಕುತೂಹಲರಾಗಿದ್ದಾರೆ. ಭಯೋತ್ಪಾದನೆಯನ್ನು ಕೊನೆಗೊಳಿಸಲು ಆಪರೇಷನ್ ಸಿಂಧೂರ್ ಮೂಲಕ ತೆಗೆದುಕೊಂಡ ಕ್ರಮಗಳನ್ನು ಪ್ರಧಾನಿ ಮೋದಿ ಜನರಿಗೆ ವಿವರಿಸಲಿದ್ದಾರೆ. ಇದರ ಮಧ್ಯ ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರನ್ನು ಹತ್ತಿಕ್ಕುವುದಾಗಿ ಮತ್ತು ಯಾರೂ ನಿರೀಕ್ಷಿಸದ ರೀತಿಯಲ್ಲಿ ಭಯೋತ್ಪಾದಕರನ್ನು ಶಿಕ್ಷಿಸುವುದಾಗಿ ಮೋದಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

Written by - Krishna N K | Last Updated : May 12, 2025, 09:05 PM IST
PM Narendra Modi live news: ಇದು ಕೇವಲ ವಿರಾಮ.. ನಾವು ಪಾಕಿಸ್ತಾನದ ಮೇಲೆ ಕಣ್ಣಿಟ್ಟಿದ್ದೇವೆ
Live Blog

PM Narendra Modi Live news updates : ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೇಡು ತೀರಿಸಿಕೊಂಡ ನಂತರ "ಆಪರೇಷನ್‌ ಸಿಂಧೂರ್‌" ಹಾಗೂ ಕದನ ವಿರಾಮದ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ಮೊದಲಬಾರಿಗೆ ಮಾತನಾಡಲಿದ್ದಾರೆ. ಮೋದಿ ದೇಶವಾಸಿಗಳಿಗೆ ಏನು ಹೇಳುತ್ತಾರೆ..? ಪಾಕಿಸ್ತಾನಕ್ಕೆ ಯಾವ ಎಚ್ಚರಿಕೆ ನೀಡುತ್ತಾರೆ..? ಎನ್ನುವುದನ್ನು ತಿಳಿಯಲು ದೇಶದ ಜನರು ಕುತೂಹಲರಾಗಿದ್ದಾರೆ. ಭಯೋತ್ಪಾದನೆಯನ್ನು ಕೊನೆಗೊಳಿಸಲು ಆಪರೇಷನ್ ಸಿಂಧೂರ್ ಮೂಲಕ ತೆಗೆದುಕೊಂಡ ಕ್ರಮಗಳನ್ನು ಪ್ರಧಾನಿ ಮೋದಿ ಜನರಿಗೆ ವಿವರಿಸಲಿದ್ದಾರೆ. ಇದರ ಮಧ್ಯ ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರನ್ನು ಹತ್ತಿಕ್ಕುವುದಾಗಿ ಮತ್ತು ಯಾರೂ ನಿರೀಕ್ಷಿಸದ ರೀತಿಯಲ್ಲಿ ಭಯೋತ್ಪಾದಕರನ್ನು ಶಿಕ್ಷಿಸುವುದಾಗಿ ಮೋದಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಪಾಕಿಸ್ತಾನದ ಮೇಲೆ ಸೇಡು ತೀರಿಸಿಕೊಂಡಿತು. ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಲಾಯಿತು. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ 9 ಪ್ರಮುಖ ಭಯೋತ್ಪಾದಕ ಶಿಬಿರಗಳನ್ನು ಭಾರತೀಯ ಸೇನೆ ನಾಶಪಡಿಸಿತು. ಈ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದರು. ನಂತರ, ಎರಡೂ ದೇಶಗಳ ನಡುವೆ ಉದ್ವಿಗ್ನತೆ ಉಂಟಾಯಿತು. ಈ ಸಂದರ್ಭದಲ್ಲಿ ಪಾಕಿಸ್ತಾನ ಮಧ್ಯಪ್ರವೇಶಿಸಿ ಎರಡೂ ದೇಶಗಳ ನಡುವೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಇಂದು ಬೆಳಿಗ್ಗೆ ಪ್ರಧಾನ ಮಂತ್ರಿಯವರ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸಿಡಿಎಸ್ ಅನಿಲ್ ಚೌಹಾಣ್ ಮತ್ತು ಮೂರೂ ಪಡೆಗಳ ಮುಖ್ಯಸ್ಥರು ಭಾಗವಹಿಸಿದ್ದರು. ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒ ಅಧಿಕಾರಿಗಳ ನಡುವಿನ ಮಾತುಕತೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ನಿವಾಸದಲ್ಲಿ ಪ್ರಮುಖ ಸಭೆ ನಡೆಯಿತು.. ಇದೀಗ ಇಂದು ರಾತ್ರಿ 8 ಗಂಟೆಗೆ ಈ ಎಲ್ಲಾ ಬೆಳವಣಿಗೆ ಕುರಿತು ಪ್ರಧಾನಿ ಮೋದಿ ಮಾತನಾಡಲಿದ್ದಾರೆ.. ಈ ಹಿನ್ನೆಲೆಯಲ್ಲಿ ಕ್ಷಣ ಕ್ಷಣದ ಸಂಪೂರ್ಣ ನಿಖರ ಮಾಹಿತಿಗಾಗಿ Zee Kannada News ಲೈವ್‌ ಪುಟವನ್ನು ನೋಡುತ್ತೀರಿ..

12 May, 2025

  • 12 May, 2025 20:54 PM

    PM Narendra Modi address nation live : ಭಾರತದಲ್ಲಿ ತಯಾರಾದ ರಕ್ಷಣಾ ಉಪಕರಣಗಳ ಶಕ್ತಿ ಸಾಬೀತಾಗಿದೆ. 

    ಭಾರತದಲ್ಲಿ ತಯಾರಾದ ರಕ್ಷಣಾ ಉಪಕರಣಗಳ ಶಕ್ತಿ ಸಾಬೀತಾಗಿದೆ. ಇದು ಯುದ್ಧದ ಯುಗವಲ್ಲ... ಭಯೋತ್ಪಾದನೆಯ ಯುಗವೂ ಅಲ್ಲ. ಭಯೋತ್ಪಾದನೆಯನ್ನು ಬೆಂಬಲಿಸುವ ಪಾಕಿಸ್ತಾನ ಕೂಡ ಅಪಾಯಕಾರಿ. ಭಯೋತ್ಪಾದನೆ ಮತ್ತು ವ್ಯಾಪಾರ ಒಂದೇ ಸ್ಥಳದಲ್ಲಿ ಇರುವುದಿಲ್ಲ ಮತ್ತು ನೀರು ಮತ್ತು ರಕ್ತ ಒಂದೇ ಸ್ಥಳದಲ್ಲಿ ಹರಿಯುವುದಿಲ್ಲ ಎಂದು ಹೇಳಲಾಗುತ್ತದೆ. ಇಂದು ಬುದ್ಧ ಪೂರ್ಣಿಮೆ.. ಬುದ್ಧನು ಶಾಂತಿಯನ್ನು ಬೋಧಿಸಿದನು, ಭಾರತ ಶಕ್ತಿಶಾಲಿಯಾಗಬೇಕು ಮತ್ತು ಅಗತ್ಯವಿದ್ದಾಗ ಈ ಶಕ್ತಿಯನ್ನು ಬಳಸುವುದು ಸಹ ಅತ್ಯಗತ್ಯ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದರು.
     

  • 12 May, 2025 20:51 PM

    PM Narendra Modi address nation live : ಪ್ರಧಾನಿ ಭಾಷಣದ ಮುಖ್ಯಾಂಶಗಳು

    • ಪ್ರಧಾನಿಯವರು ಆಪರೇಷನ್ ಸಿಂಧೂರ್‌ನ ಯಶಸ್ಸನ್ನು ಭಾರತದ ನಾರಿ ಶಕ್ತಿಗೆ ಅರ್ಪಿಸುತ್ತಾರೆ! ಇದು ಗಮನಾರ್ಹ ಏಕೆಂದರೆ ಹಲವಾರು ಮಹಿಳೆಯರು ಮತ್ತು ಮಕ್ಕಳು ಭಯೋತ್ಪಾದಕರು ತಮ್ಮ ಕುಟುಂಬ ಸದಸ್ಯರನ್ನು ಅತ್ಯಂತ ಕ್ರೂರ ರೀತಿಯಲ್ಲಿ ಕೊಂದದ್ದನ್ನು ನೋಡಿದ್ದಾರೆ.
    • ಪ್ರಧಾನಿಯವರು ಪಾಕಿಸ್ತಾನದ ಸಂಪೂರ್ಣ ಭಯೋತ್ಪಾದನಾ ವ್ಯವಸ್ಥೆಯನ್ನು ಸಾರ್ವಜನಿಕವಾಗಿ ಕರೆದಿದ್ದಾರೆ, ಬಹಾವಲ್ಪುರ್ ಮತ್ತು ಮುರಿಯ್ಕೆಯನ್ನು ಭಯೋತ್ಪಾದನೆಯ ವಿಶ್ವವಿದ್ಯಾಲಯಗಳು ಎಂದು ಕರೆದಿದ್ದಾರೆ!
    • ಪಾಕಿಸ್ತಾನವು ನಮ್ಮ ಮಹಿಳೆಯರ ಸಿಂಧೂರ್ ಅನ್ನು ತೆಗೆದುಹಾಕಲು ಪ್ರಯತ್ನಿಸಿದೆ, ನಾವು ಅವರ ಭಯೋತ್ಪಾದನೆಯ ವಿಶ್ವವಿದ್ಯಾಲಯಗಳನ್ನು ಕಿತ್ತುಹಾಕಿದ್ದೇವೆ ಎಂದು ಪ್ರಧಾನಿ ಹೇಳುತ್ತಾರೆ.
    • ಭಾರತೀಯ ಸಶಸ್ತ್ರ ಪಡೆಗಳ ಗುರಿಗಳು ಒಂದು ಶತಮಾನವನ್ನು ದಾಟಿವೆ ಎಂದು ಪ್ರಧಾನಿ ದೃಢಪಡಿಸಿದ್ದಾರೆ! ಸ್ಪಷ್ಟವಾಗಿ, ಪಾಕಿಸ್ತಾನಕ್ಕೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಮರುಪಾವತಿ ಮಾಡಲಾಗಿದೆ.
    • ಪಾಕಿಸ್ತಾನದ ಸೇನೆಯ ಟೊಳ್ಳನ್ನು ಪ್ರಧಾನಿ ಬಹಿರಂಗಪಡಿಸುತ್ತಾರೆ, ಇದು ಭಾರತೀಯ ಸಶಸ್ತ್ರ ಪಡೆಗಳಿಗೆ ಹೋಲಿಸಿದರೆ ಏನೂ ಅಲ್ಲ!
    • ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮೇಲೆ ಮುಂದಿನ ಕ್ರಮವನ್ನು ಪ್ರಧಾನಿ ತಳ್ಳಿಹಾಕುವುದಿಲ್ಲ, ಈಗಲೂ ಸಹ, ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಪ್ರತಿಯೊಂದು ಇಂಚು ಭೂಮಿಯೂ ನಮ್ಮ ಸಶಸ್ತ್ರ ಪಡೆಗಳ ವ್ಯಾಪ್ತಿಯಲ್ಲಿದೆ ಎಂದು ಸ್ಪಷ್ಟಪಡಿಸುತ್ತಾರೆ.
    • ಶಾಂತಿಗಾಗಿ ಬೇಡಿಕೊಂಡದ್ದು ಪಾಕಿಸ್ತಾನವೇ ಎಂದು ಪ್ರಧಾನಿಯವರು ಸ್ಪಷ್ಟಪಡಿಸುತ್ತಾರೆ! ಭಾರತದ ದಾಳಿಯ ಭಾರವನ್ನು ಪಾಕಿಸ್ತಾನವೇ ಹೊತ್ತುಕೊಂಡಿತ್ತು, ಮತ್ತು ಅದರ ಡಿಜಿಎಂಒ ಭಾರತದಲ್ಲಿನ ತಮ್ಮ ಪ್ರತಿರೂಪವನ್ನು ತಲುಪುವಂತೆ ಒತ್ತಾಯಿಸಿತು.
    • ಆಪರೇಷನ್ ಸಿಂಧೂರ್ ಮುಗಿದಿಲ್ಲ ಎಂದು ಪ್ರಧಾನಿ ಸ್ಪಷ್ಟವಾಗಿ ಹೇಳುತ್ತಾರೆ! ಭಯೋತ್ಪಾದನೆ ಮತ್ತು ಅದರ ಬೆಂಬಲಿಗರಿಗೆ ಭಾರತ ಅರ್ಥವಾಗುವ ಭಾಷೆಯಲ್ಲಿ ಪ್ರತಿದಾಳಿ ಮಾಡುತ್ತದೆ.
    • ಪ್ರಧಾನಿ ಈಗ ಹೊಸ ಸಾಮಾನ್ಯತೆಯನ್ನು ಸ್ಪಷ್ಟವಾಗಿ ಹೇಳುತ್ತಾರೆ- ಭಾರತ ಪ್ರತಿದಾಳಿ ನಡೆಸುತ್ತದೆ, ಪರಮಾಣು ಬ್ಲ್ಯಾಕ್‌ಮೇಲ್ ಕೆಲಸ ಮಾಡುವುದಿಲ್ಲ, ಭಯೋತ್ಪಾದಕರು ಮತ್ತು ಅವರನ್ನು ಪೋಷಿಸುವವರ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಅವರು ಎಲ್ಲಿದ್ದರೂ.
  • 12 May, 2025 20:41 PM

    PM Narendra Modi address nation live : ಭಾರತ ಪರಮಾಣು ಬೆದರಿಕೆಯನ್ನು ಸಹಿಸುವುದಿಲ್ಲ 

    PM Modi India-Pakistan ceasefire LIVE: ಮತ್ತೊಂದು ದಾಳಿ ನಡೆದರೆ, ನಾವು ನಮ್ಮದೇ ಆದ ರೀತಿಯಲ್ಲಿ, ನಮ್ಮದೇ ಆದ ದಾರಿಯಲ್ಲಿ ಪ್ರತಿಕ್ರಿಯಿಸುತ್ತೇವೆ ಎಂದ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆಯ ಬೇರುಗಳು ಎಲ್ಲೆಲ್ಲಿ ಹೊರಹೊಮ್ಮುತ್ತವೆಯೋ ಅಲ್ಲೆಲ್ಲಾ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ, ಭಾರತ ಯಾವುದೇ ಪರಮಾಣು ಬೆದರಿಕೆಗಳನ್ನು ಸಹಿಸುವುದಿಲ್ಲ ಎಂದರು
     

  • 12 May, 2025 20:38 PM

    PM Narendra Modi address nation live :  ಇದು ಕೇವಲ ವಿರಾಮ.. ನಾವು ಪಾಕಿಸ್ತಾನದ ಮೇಲೆ ಕಣ್ಣಿಟ್ಟಿದ್ದೇವೆ 

    PM Modi India-Pakistan ceasefire LIVE: ಭಾರತ ಈಗ ಸ್ವಲ್ಪ ವಿರಾಮ ನೀಡಿದೆ, ಆದರೆ ಪಾಕಿಸ್ತಾನದ ದುಷ್ಕೃತ್ಯಗಳ ಮೇಲೆ ಕಣ್ಣಿಟ್ಟಿದೆ ಎಂದು ಮೋದಿ ಹೇಳಿದರು. ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ ದೌರ್ಜನ್ಯವನ್ನು ಇಡೀ ಜಗತ್ತು ನೋಡಿದೆ. ಇದು ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಗೆ ಸಾಕ್ಷಿ ಎಂದು ಬಹಿರಂಗವಾಯಿತು. ಉಗ್ರರ ವಿರುದ್ಧ ಆಪರೇಷನ್ ಸಿಂಧೂರ್ ಎಂಬ ಹೊಸ ಅಧ್ಯಾಯವನ್ನು ಭಾರತ ಬರೆದಿದೆ. ಹೊಸ ಯುದ್ಧ ತಂತ್ರದಲ್ಲಿ ನಾವು ನಮ್ಮ ಶಕ್ತಿಯನ್ನು ತೋರಿಸುತ್ತೇವೆ ಎಂದು ಮೋದಿ ಹೇಳಿದರು.

  • 12 May, 2025 20:34 PM

    PM Narendra Modi address nation live : ನೂರಕ್ಕೂ ಹೆಚ್ಚು ಭಯೋತ್ಪಾದಕರ ಬಲಿ ಪಡೆದಿದ್ದೇವೆ 

    PM Modi India-Pakistan ceasefire LIVE: ಮೇ 6 ರ ರಾತ್ರಿ ಮತ್ತು ಮೇ 7 ರ ಬೆಳಿಗ್ಗೆ ಭಯೋತ್ಪಾದನೆಗೆ ಪ್ರತಿಕ್ರಿಯೆಯನ್ನು ದೇಶ ಕಂಡಿತು. ನಾವು ಭಯೋತ್ಪಾದಕ ಕೇಂದ್ರಗಳು ಮತ್ತು ತರಬೇತಿ ಶಿಬಿರಗಳ ಮೇಲೆ ದಾಳಿ ಮಾಡಿದೆವು. ಭಾರತೀಯ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದವು. ನಮ್ಮ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ ನೂರಕ್ಕೂ ಹೆಚ್ಚು ಭಯೋತ್ಪಾದಕರನ್ನು ನಿರ್ನಾಮ ಮಾಡಿದ್ದೇವೆ ಎಂದು ಪ್ರಧಾನಿ ತಿಳಿಸಿದರು
     

  • 12 May, 2025 20:24 PM

    PM Narendra Modi address nation live : ಪಾಕಿಸ್ತಾನಿ ವಾಯುನೆಲೆಗಳ ಮೇಲೆ ಬಾಂಬ್‌ಗಳ ಸುರಿ ಮಳೆ 

    PM Modi India-Pakistan ceasefire LIVE: ಭಾರತೀಯ ಸೇನೆ ಪಾಕ್‌ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಧ್ವಂಸ ಮಾಡಿದವು. ಪಾಕ್‌ ವಾಯುನೆಲೆಗಳ ಮೇಲೆ ಬಾಂಬ್‌ಗಳ ಮಳೆ ಸುರಿಸಲಾಯಿತು. ಈ ದಾಳಿಗಳಿಂದ ಗಾಬರಿಗೊಂಡ ಪಾಕಿಸ್ತಾನ, ಭಾರತದ ಡಿಜಿಎಂಒ ಅವರನ್ನು ಸಂಪರ್ಕಿಸಿತು. ಪಾಕಿಸ್ತಾನ ಹಾರಿಸಿದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಭಾರತೀಯ ವಾಯುಪ್ರದೇಶದಲ್ಲಿ ಹೊಡೆದುರುಳಿಸಿ ನಾಶಪಡಿಸಲಾಗಿದೆ. ಭವಿಷ್ಯದಲ್ಲಿ ಇಂತಹ ದುಸ್ಸಾಹಸ ಮತ್ತೆ ನಡೆಯದಂತೆ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು. ಪ್ರಸ್ತುತ, ಪಾಕಿಸ್ತಾನದೊಂದಿಗೆ ತಾತ್ಕಾಲಿಕ ಕದನ ವಿರಾಮವನ್ನು ಜಾರಿಗೆ ತರಲಾಗಿದೆ ಎಂದು ಭಾಷಣದಲ್ಲಿ ಮೋದಿ ಹೇಳಿದರು.
     

  • 12 May, 2025 20:19 PM

    PM Narendra Modi address nation live : ಅದಕ್ಕಾಗಿಯೇ ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು "ಆಪರೇಷನ್ ಸಿಂಧೂರ್" ಎಂದು ಹೆಸರಿಸಲಾಯಿತು

    ಪಹಲ್ಗಾಮ್‌ ದಾಳಿ ನಂತರ ದೇಶದ ಪ್ರತಿಯೊಬ್ಬರೂ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಮ್ಮ ದೇಶದ ಮಹಿಳೆಯರ ಹಣೆಯ ಮೇಲಿನ ಸಿಂಧೂರವನ್ನು ಅಳಿಸಿದರೆ ಫಲಿತಾಂಶ ಏನೆಂದು ತೋರಿಸಲು ನಿರ್ಧರಿಸಿದ್ದೇವು. ಅದಕ್ಕಾಗಿಯೇ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಟ ಪ್ರಾರಂಭಿಸಲಾಯಿತು ಎಂದು ಪ್ರಧಾನಿ ತಿಳಿಸಿದರು.
     

  • 12 May, 2025 20:13 PM

    PM Narendra Modi address nation live : ನಮ್ಮ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದರೆ ಏನಾಗುತ್ತೆ ಅಂತ ಭಯೋತ್ಪಾದಕರಿಗೆ ಈಗ ಗೊತ್ತಾಗಿದೆ

    PM Modi India-Pakistan ceasefire LIVE: ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, "ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ನಾವು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಇಂದು ಪ್ರತಿಯೊಬ್ಬ ಭಯೋತ್ಪಾದಕ, ಪ್ರತಿಯೊಂದು ಭಯೋತ್ಪಾದಕ ಸಂಘಟನೆಗೂ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರ ಅಳಿಸುವುದರಿಂದ ಆಗುವ ಪರಿಣಾಮವೇನೆಂದು ತಿಳಿದಿದೆ" ಎಂದು ಹೇಳಿದರು.

     

     

  • 12 May, 2025 20:10 PM

    PM Narendra Modi address nation live : ಸೈನಿಕರಿಗೆ ವಂದನೆ ಸಲ್ಲಿಸಿ ಮಾತು ಪ್ರಾರಂಭಿಸಿದ ಪ್ರಧಾನಿ ಮೋದಿ

    PM Modi India-Pakistan ceasefire LIVE: "ಆಪರೇಷನ್ ಸಿಂಧೂರ್" ನಲ್ಲಿ ಶೌರ್ಯ ಪ್ರದರ್ಶಿಸಿದ ಸೈನಿಕರಿಗೆ ನಮನ ಸಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಕುಟುಂಬ ಸದಸ್ಯರು ಮತ್ತು ಮಕ್ಕಳ ಸಮ್ಮುಖದಲ್ಲಿಯೇ ಅಮಾಯಕ ಜನರನ್ನು ಗುಂಡಿಕ್ಕಿ ಕೊಲ್ಲಲಾಯಿತು.. ಅವರು ದೇಶದ ಸಮಗ್ರತೆಯನ್ನು ಅಡ್ಡಿಪಡಿಸಲು ಪ್ರಯತ್ನಿಸಿದರು.. ಎಲ್ಲರೂ ಈ ದೌರ್ಜನ್ಯವನ್ನು ಗಟ್ಟಿಯಾದ ಧ್ವನಿಯಲ್ಲಿ ಖಂಡಿಸಿದರು... ಅದರ ವಿರುದ್ಧ ನಿಂತರು.. ಆಪರೇಷನ್ ಸಿಂಧೂರ್ ಕೇವಲ ಹೆಸರಲ್ಲ... ಅದು ಲಕ್ಷಾಂತರ ಜನರ ಭಾವನೆಗಳ ಪ್ರತಿಬಿಂಬ.. ಎಂದು ಮಾತು ಪ್ರಾರಂಭಿಸಿದ ಪ್ರಧಾನಿ
     

  • 12 May, 2025 20:06 PM

    PM Narendra Modi address nation live : ಪ್ರಧಾನಿ ಮೋದಿ ಭಾಷಣ

    "ಆಪರೇಷನ್ ಸಿಂಧೂರ್" ಪಾಕಿಸ್ತಾನ-ಭಾರತ ಉದ್ವಿಗ್ನತೆ, ಯುದ್ಧ ವಿರಾಮ ನಂತರ ಪ್ರಧಾನಿ ಮೋದಿ ಮೊದಲ ಬಾರಿಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.
     

  • 12 May, 2025 19:37 PM

    PM Narendra Modi address nation live : ಪ್ರಧಾನ ಮಂತ್ರಿ ಮೋದಿ ಮೊದಲ ಭಾಷಣ

    India-Pakistan ceasefire LIVE: "ಆಪರೇಷನ್ ಸಿಂಧೂರ್" ಆರಂಭವಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೊದಲ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದರೊಂದಿಗೆ ಎಲ್ಲರ ಕಣ್ಣುಗಳು ಮೋದಿ ಭಾಷಣದ ಮೇಲೆ ನೆಟ್ಟಿವೆ. ನಮೋ ಏನು ಹೇಳುತ್ತಾರೆಂದು ದೇಶದ ಜನರು ಕಾತರದಿಂದ ಎದುರು ನೋಡುತ್ತಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೇಡು ತೀರಿಸಿಕೊಂಡ ನಂತರ ಮೋದಿ ಇದೇ ಮೊದಲ ಬಾರಿಗೆ ಮಾತನಾಡಲಿದ್ದಾರೆ.

  • 12 May, 2025 19:29 PM

    PM Narendra Modi address nation live : ಕೆಲವೇ ಕ್ಷಣಗಳಲ್ಲಿ ರಾಷ್ಟ್ರವನ್ನುದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾತನಾಡಲಿದ್ದಾರೆ.

     

     

  • 12 May, 2025 18:52 PM

    PM Narendra Modi address nation live : ಮೇ 13 ರಿಂದ 23 ರವರೆಗೆ ದೇಶಾದ್ಯಂತ ಬಿಜೆಪಿ ತಿರಂಗ ಯಾತ್ರೆ  

    ಮೇ 13 ರಿಂದ ಮೇ 23 ರವರೆಗೆ 10 ದಿನಗಳ ಕಾಲ ಬಿಜೆಪಿ ದೇಶಾದ್ಯಂತ ತಿರಂಗ ಯಾತ್ರೆ ನಡೆಸಲಿದೆ. ಪಕ್ಷವು ಪ್ರತಿಯೊಬ್ಬ ನಾಗರಿಕರನ್ನು ತಲುಪಿ ಆಪರೇಷನ್ ಸಿಂಧೂರ್‌ನ ಸಾಧನೆಗಳ ಬಗ್ಗೆ ತಿಳಿಸುತ್ತದೆ. ಸಂಬಿತ್ ಪಾತ್ರ, ವಿನೋದ್ ತಾವ್ಡೆ, ತರುಣ್ ಚುಗ್ ಮತ್ತು ಇತರ ಹಿರಿಯ ನಾಯಕರು ಅಭಿಯಾನವನ್ನು ಸಂಘಟಿಸಲಿದ್ದಾರೆ. ಹಿರಿಯ ಬಿಜೆಪಿ ನಾಯಕರು/ಸಚಿವರು ಯಾತ್ರೆಗಳ ನೇತೃತ್ವ ವಹಿಸಲಿದ್ದಾರೆ.

  • 12 May, 2025 18:27 PM

    PM Narendra Modi address nation live : ಭಾರತ-ಪಾಕ್ ಡಿಜಿಎಂಒ ಮಾತುಕತೆ ಇಂದು ಮುಕ್ತಾಯಗೊಂಡಿದೆ.

    ಇಂದಿನ ಭಾರತ-ಪಾಕಿಸ್ತಾನ ಡಿಜಿಎಂಒ ಮಾತುಕತೆಗಳು ಮುಕ್ತಾಯಗೊಂಡಿವೆ.
    ರಾತ್ರಿ 8 ಗಂಟೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ
    ಆಪರೇಷನ್‌ ಸಿಂಧೂರ್‌ ಬಳಿಕೆ ಮೊದಲ ಭಾರಿಗೆ ಮಾತನಾಡುತ್ತಿರುವ ಮೋದಿ
    ಪ್ರಧಾನಿ ಭಾಷಣ ಕೇಳಲು ರಾಷ್ಟ್ರದ ಜನತೆ ಉತ್ಸುಕರಾಗಿದ್ದಾರೆ.

     

     

     

     

  • 12 May, 2025 18:24 PM

    India-Pakistan ceasefire LIVE: ಭಾರತದ ದಾಳಿಗೆ ಪಾಕ್‌ ತತ್ತರ, ಅಮೆರಿಕ ಮಧ್ಯಸ್ಥಿಕೆ, ಯುದ್ಧ ವಿರಾಮ ಘೋಷಣೆ

    PM Narendra Modi address nation live : ಭಾರತದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನ ತತ್ತರಿಸಿತು. ಪಾಕಿಸ್ತಾನ ಕೂಡ ಭಾರತದ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು, ಆದರೆ ಭಾರತ ಆ ದಾಳಿಯನ್ನು ಹಿಮ್ಮೆಟ್ಟಿಸಿತು. ನಂತರದ ಭಾರತೀಯ ದಾಳಿಯಲ್ಲಿ ಪಾಕಿಸ್ತಾನವು ಭಾರೀ ನಷ್ಟವನ್ನು ಅನುಭವಿಸಿತು. ಪಾಕಿಸ್ತಾನದ ಅನೇಕ ವಾಯುನೆಲೆಗಳು ನಾಶವಾದವು. ಇದರಿಂದ ಮುಂದಾಗುವ ವಿಧ್ವಂಸತೆಯನ್ನು ಅರಿತ ಪಾಕ್‌ ಅಮೆರಿಕದ ಮೊರೆ ಹೊಗಿ ಭಾರತಕ್ಕೆ ಯುದ್ಧ ವಿರಾಮ ಘೋಷಿಸಲು ಮಧ್ಯಸ್ಥಿಕೆ ವಹಿಸುವಂತೆ ಕಾಲಿಡಿಯಿತು. ನಂತರ ಯುದ್ಧ ವಿರಾಮ ಘೋಷಣೆ ಮಾಡಲಾಯಿತು. ಇದರ ನಂತರವೂ ಪಾಕ್‌ ತನ್ನ ಚಾಳಿ ಮುಂದುವರೆಸಲು ಪ್ರಯತ್ನಿಸಿ ವಿಫಲವಾಯಿತು.. ಈ ಎಲ್ಲಾ ಬೆಳವಣಿಗೆಗಳ ಕುರಿತು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯುವರು ಮಹತ್ವದ ಭಾಷಣ ಮಾಡಲಿದ್ದಾರೆ.
     

  • 12 May, 2025 18:02 PM

    India-Pakistan ceasefire LIVE: ಪಾಕ್‌ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ

    PM Narendra Modi address nation live : ಭಾರತೀಯ ಸೇನೆ "ಆಪರೇಷನ್‌ ಸಿಂಧೂರ್‌" ಮೂಲಕ ಕೇವಲ ಭಯೋತ್ಪಾದಕರನ್ನು ಮತ್ತು ಅವರ ಶಿಭಿರಗಳನ್ನು ಗುರಿಯಾಗಿಸಿಕೊಂಡು ಮಾಡಿದ್ದ ದಾಳಿಯಾಗಿತ್ತು. ಆದರೆ, ತಾನು ಸಾಕಿದ್ದ ಉಗ್ರರ ಸಾವು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಯಿತು. ಇದರಿಂದ ಗಡಿಯಲ್ಲಿ ಪಾಕ್‌ ಜನವಸತಿ ಪ್ರದೇಶ ಮತ್ತು ಮಿಲಿಟರಿ ತಾಣಗಳ ಮೇಲೆ ನೇರವಾಗಿ ದಾಳಿ ಮಾಡಲು ಪ್ರಾರಂಭಿಸಿತು. ಭಾರತ ಸೇನೆಯ ಶಕ್ತಿ ತಿಳಿಯದೇ ಪಾಕ್‌ ಮಾಡಿದ ದಾಳಿಗೆ ನಮ್ಮ ಹೆಮ್ಮೆಯ ಸೈನಿಕರು ತಕ್ಕ ಉತ್ತರ ನೀಡಿದರು.

    ಅಲ್ಲದೆ, ಕರಾಚಿ, ಲಾಹೋರ್‌ ಸೇರಿದಂತೆ ಪಾಕ್‌ನ ವಾಯುನೆಲೆ ಮೇಲೆ ಭಾರತೀಯ ಸೇನೆ ದಾಳಿ ನಡೆಸಿತು. ಇದರಿಂದ ಪಾಕಿಸ್ತಾನಕ್ಕೆ ಭಾರೀ ಆಘಾತ ಉಂಟಾಯಿತು. ಬಹುಷಃ ಇಂತಹ ಭೀಕರ ದಾಳಿಯನ್ನು ಶತ್ರು ದೇಶ ಊಹಿಸಿರಲಿಲ್ಲ ಅನಿಸುತ್ತದೆ..

  • 12 May, 2025 17:52 PM

    Operation Sindoor PM Modi live updates : ಪಹಲ್ಗಾಮ್‌ ಪ್ರತೀಕಾರ ಆಪರೇಷನ್‌ ಸಿಂದೂರ್‌, 100 ಕ್ಕೂ ಹೆಚ್ಚು ಉಗ್ರರ ಬಲಿ

    ಸ್ಥಳ : ಪಾಕಿಸ್ತಾನ, ಪಾಕ್‌ ಆಕ್ರಮೀತ ಪ್ರದೇಶ
    ಆಪರೇಷನ್‌ ಸಿಂಧೂರ
    100 ಕ್ಕೂ ಹೆಚ್ಚು ಉಗ್ರರ ಬಲಿ

    Operation Sindoor : ಪಹಲ್ಗಾಮ್‌ ದಾಳಿಯಲ್ಲಿ ಬಲಿಯಾದ 26 ಅಮಾಯಕ ಜೀವಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ, ಭಾರತ ತ್ರಿ-ಸೇನೆ ಭಯೋತ್ಪಾದಕರ ವಿರುದ್ಧ ಮೇ 7 2025 ರಂದು ಆಪರೇಷನ್‌ ಸಿಂದೂರ್‌ ಮೂಲಕ ಸಮರ ಸಾರಿತು. ರಾತ್ರೋರಾತ್ರಿ ದಾಳಿ ನಡೆಸಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮೀತ ಪ್ರದೇಶದಲ್ಲಿದ್ದ 9 ಭಯೋತ್ಪಾದಕರ ಶಿಬಿರ, ಅಡಗುತಾಣಗಳನ್ನು ನಾಶಪಡಿಸಿತು. ಈ ದಾಳಿಯಲ್ಲಿ 100 ಕ್ಕೂ ಹೆಚ್ಚು ಉಗ್ರರು ನರಕ ಸೇರಿದರು.
     

  • 12 May, 2025 17:38 PM

    Operation Sindoor Live Updates: ಪಹಲ್ಗಾಮ್‌ ಮೇಲೆ ಭಯೋತ್ಪಾದಕ ದಾಳಿ, 26 ಅಮಾಯಕರು ಬಲಿ

    ಸ್ಥಳ : ಪಹಲ್ಗಾಮ್‌ 
    ಭಯೋತ್ಪಾದಕರ ದಾಳಿ
    26 ಬಲಿ

    Pahalgam Attack : ಜಮ್ಮು-ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಜನಪ್ರಿಯ ಪ್ರವಾಸಿತಾಣ ಪಹಲ್ಗಾಮ್‌ನಲ್ಲಿ 22 ಏಪ್ರಿಲ್ 2025ರ ಮಂಗಳವಾರ ಭಯೋತ್ಪಾದಕರು ಪ್ರವಾಸಿಗರ ಮೇಲೆ ಏಕಾಏಕಿ ದಾಳಿ ನಡೆಸಿದರು. ಈ ಭೀಕರ ಘಟನೆಯಲ್ಲಿ ಇಬ್ಬರು ಕನ್ನಡಿಗರು, ಇಬ್ಬರು ವಿದೇಶಿಯರು ಸೇರಿದಂತೆ 26 ಮಂದಿ ಬಲಿಯಾಗಿದ್ದರು.

    ಪುಲ್ವಾಮಾ ದಾಳಿಯ ನಂತರ ಇದೇ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಅಮಾಯಕ ಪ್ರವಾಸಿಗರನ್ನು ಭಯೋತ್ಪಾದಕರು ಟಾರ್ಗೆಟ್‌ ಮಾಡಿದ್ದರು. ಅದರಲ್ಲೂ ಪುರುಷನ್ನೇ ಗುರಿಯಾಗಿಸಿಕೊಂಡು, ಹಿಂದೂಗಳೆಂದು ಖಚಿತಪಡಿಸಿಕೊಂಡು ಕೊಲ್ಲಲಾಯಿತು.. ಇದು ದೇಶದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ, ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವವ ಶಪಥವನ್ನು ಭಾರತ ಮಾಡಿತ್ತು..

Trending News