ಚಂದೌಲಿ: ಉತ್ತರ ಪ್ರದೇಶದ ಬಿಜೆಪಿ ಶಾಸಕಿ ಸಾಧನಾ ಸಿಂಗ್ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಚಂದೌಲಿಯಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಮಾಯಾವತಿ ಮಹಿಳೆ ಮತ್ತು ಪುರುಷ ಎರಡು ಅಲ್ಲ ಎನ್ನುವ ವಿವಾದ ಮೂಲಕ ಈಗ ಕೆಂಗಣ್ಣಿಗೆ ಗುರಿಯಾಗಿದ್ದಾರೆ." ನನಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಇತ್ತ  ಮಹಿಳೆ ಮತ್ತು ಪುರುಷ ಎನಿಸುವುದಿಲ್ಲ,ಅವರಿಗೆ ಸ್ವಾಭಿಮಾನದ ಪರಿಕಲ್ಪನೆಯ ಅರ್ಥವಾಗುವುದಿಲ್ಲ,ಅವರು ಅಧಿಕಾರಕ್ಕಾಗಿ ಸ್ವಾಭಿಮಾನವನ್ನು ಸೇರಿ ಎಲ್ಲವನ್ನು ಮಾರಿಕೊಂಡಿದ್ದಾರೆ"ಎಂದು ಹೇಳಿದರು.



ಇನ್ನು ಮುಂದುವರೆದು"ಈ ಅವಕಾಶವನ್ನು ನಾನು ಮಾಯವತಿಯವರನ್ನು ಖಂಡಿಸುವುದಕ್ಕಾಗಿ ಬಳಸಿಕೊಳ್ಳುತ್ತೇನೆ, ಅವರು ಇಡೀ ಹೆಣ್ಣುತನಕ್ಕೆ ಅವಮಾನ,ಬಿಜೆಪಿ ನಾಯಕರು ಅವರ ಸ್ವಾಭಿಮಾನವನ್ನು ರಕ್ಷಿಸಿದರು,ಆದರೆ ತನ್ನ ಅನೂಕೂಲ ಮತ್ತು ಅಧಿಕಾರಕ್ಕಾಗಿ ಅವರು ಎಲ್ಲವನ್ನು ಮಾರಿಕೊಂಡರು.ಆದ್ದರಿಂದ ಇಡೀ ದೇಶವು ಅವರನ್ನು ಖಂಡಿಸಬೇಕೆಂದು ಹೇಳಿದರು.




ಇನ್ನೊಂದೆಡೆ ಬಿಜೆಪಿ ಶಾಸಕಿಯ ಹೇಳಿಕೆಗೆ  ದೇಶದಲ್ಲೆಡೆಭಾರಿ ವಿರೋಧ ವ್ಯಕ್ತವಾಗಿದೆ.