ನವದೆಹಲಿ: ಕೇಂದ್ರ ಸರ್ಕಾರವು 2025ರ ಹಣಕಾಸು ಕಾಯ್ದೆಯಡಿ ನಿವೃತ್ತ ಸರ್ಕಾರಿ ಉದ್ಯೋಗಿಗಳಿಗೆ ಡಿಎ (ಡಿಯರ್ನೆಸ್ ಅಲವೆನ್ಸ್) ಹೆಚ್ಚಳ ಮತ್ತು ಕೇಂದ್ರ ವೇತನ ಆಯೋಗದ (ಸಿಪಿಸಿ) ನಂತಹ ನಿವೃತ್ತಿ ನಂತರದ ಪ್ರಯೋಜನಗಳನ್ನು ಹಿಂತೆಗೆದುಕೊಂಡಿದೆ ಎಂಬ ಸಂದೇಶ ವಾಟ್ಸಾಪ್ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ, ಇದು ಸಂಪೂರ್ಣ ಸುಳ್ಳು ಎಂದು ಕೇಂದ್ರ ಸರ್ಕಾರದ ಅಧಿಕೃತ ಸತ್ಯಪರೀಕ್ಷಕ ಸಂಸ್ಥೆ ಪಿಐಬಿ ಫ್ಯಾಕ್ಟ್ಚೆಕ್ ಸ್ಪಷ್ಟಪಡಿಸಿದೆ.
ಪಿಐಬಿ ಫ್ಯಾಕ್ಟ್ಚೆಕ್ ತಂಡವು ನವೆಂಬರ್ 13, 2025 ರಂದು ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಪೋಸ್ಟ್ ಮಾಡಿ, 'ನಿವೃತ್ತ ಸರ್ಕಾರಿ ನೌಕರರು ಹಣಕಾಸು ಕಾಯ್ದೆ 2025ರ ಅಡಿಯಲ್ಲಿ ಡಿಎ ಹೆಚ್ಚಳ ಮತ್ತು ವೇತನ ಆಯೋಗದ ಪ್ರಯೋಜನಗಳನ್ನು ಪಡೆಯುವುದನ್ನು ನಿಲ್ಲಿಸುತ್ತಾರೆಯೇ? #WhatsAppನಲ್ಲಿ ಪ್ರಸಾರವಾಗುವ ಸಂದೇಶವೊಂದು ಕೇಂದ್ರ ಸರ್ಕಾರವು ನಿವೃತ್ತ ಉದ್ಯೋಗಿಗಳಿಗೆ ಡಿಎ ಹೆಚ್ಚಳ ಮತ್ತು ವೇತನ ಆಯೋಗದ ಪರಿಷ್ಕರಣೆಗಳಂತಹ ನಿವೃತ್ತಿ ನಂತರದ ಪ್ರಯೋಜನಗಳನ್ನು ಹಿಂತೆಗೆದುಕೊಂಡಿದೆ ಎಂದು ಹೇಳುತ್ತದೆ.ಆದರೆ ಇದು ಸುಳ್ಳು ಎಂದು ಘೋಷಿಸಿದೆ.
2025 ರ ಹಣಕಾಸು ಕಾಯ್ದೆಯಡಿ ನಿವೃತ್ತ ಸರ್ಕಾರಿ ನೌಕರರಿಗೆ ಯಾವುದೇ ಬದಲಾವಣೆಯೂ ಇಲ್ಲ.ದುಷ್ಕೃತ್ಯಕ್ಕಾಗಿ ವಜಾಗೊಳಿಸಲಾದವರನ್ನು ಹೊರತುಪಡಿಸಿ, ಡಿಎ ಹೆಚ್ಚಳ ಸೇರಿದಂತೆ ಎಲ್ಲ ನಿವೃತ್ತಿ ಪ್ರಯೋಜನಗಳು ಯಥಾವತ್ತಾಗಿ ಮುಂದುವರಿಯಲಿವೆ. ಆದರೆ, ದುಷ್ಕೃತ್ಯಕ್ಕಾಗಿ ಉದ್ಯೋಗಿಯನ್ನು ವಜಾಗೊಳಿಸಿದರೆ ಅವರ ನಿವೃತ್ತಿ ಪ್ರಯೋಜನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂಬ ನಿಯಮವನ್ನು ಸರ್ಕಾರ ಜಾರಿಗೊಳಿಸಿದೆ.
🚨 Will retired Govt employees stop getting DA hikes & Pay Commission benefits under the Finance Act 2025⁉️
A message circulating on #WhatsApp claims that the Central Government has withdrawn post-retirement benefits like DA hikes and Pay Commission revisions for retired… pic.twitter.com/E2mCRMPObO
— PIB Fact Check (@PIBFactCheck) November 13, 2025
ಇದನ್ನೂ ಓದಿ: ದೆಹಲಿ ಸ್ಪೋಟದ ನಂತರ ಪಾಕ್ ಗೆ ಹೆಚ್ಚಿದ 'ಆಪರೇಷನ್ ಸಿಂಧೂರ್' ಭೀತಿ, ಗಡಿಯಲ್ಲಿ ಭಾರಿ ಸೈನ್ಯ ನಿಯೋಜನೆ..!
ಪಿಐಬಿ ಫ್ಯಾಕ್ಟ್ಚೆಕ್ ಪ್ರಕಾರ, "ಸಿಸಿಎಸ್ (ಪಿಂಚಣಿ) ನಿಯಮಗಳು, 2021ರ ನಿಯಮ 37 ಅನ್ನು ತಿದ್ದುಪಡಿ ಮಾಡಲಾಗಿದೆ.ಇದರಲ್ಲಿ ವಿಲೀನಗೊಂಡ ಪಿಎಸ್ಯು (ಪಬ್ಲಿಕ್ ಸೆಕ್ಟರ್ ಅಂಡರ್ಟೇಕಿಂಗ್) ಉದ್ಯೋಗಿಯನ್ನು ದುಷ್ಕೃತ್ಯಕ್ಕಾಗಿ ವಜಾಗೊಳಿಸಿದರೆ, ಅವರ ನಿವೃತ್ತಿ ಪ್ರಯೋಜನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ."ಈ ವರ್ಷದ ಮೇ ತಿಂಗಳಲ್ಲಿ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ವೆಚ್ಚ ಇಲಾಖೆ, ಹಣಕಾಸು ಸಚಿವಾಲಯ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಕಾನೂನು ವ್ಯವಹಾರ ಇಲಾಖೆ, ಶಾಸಕಾಂಗ ಇಲಾಖೆ ಹಾಗೂ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರೊಂದಿಗೆ ಸಮಾಲೋಚನೆ ನಡೆಸಿ ಸಿಸಿಎಸ್ (ಪಿಂಚಣಿ) ನಿಯಮಗಳು, 2021ರ ನಿಯಮ 37 (9) (ಸಿ)ಯಲ್ಲಿ ತಿದ್ದುಪಡಿ ತಂದಿದೆ.ತಿದ್ದುಪಡಿ ಮಾಡಿದ ನಿಯಮ 37(29ಸಿ) ಈ ಕೆಳಗಿನಂತಿದೆ: "...ಯಾವುದೇ ನಂತರದ ದುಷ್ಕೃತ್ಯಕ್ಕಾಗಿ ಯಾವುದೇ ಉದ್ಯೋಗಿಯನ್ನು ಸಾರ್ವಜನಿಕ ವಲಯದ ಉದ್ಯಮದಲ್ಲಿ ಸೇರಿಸಿಕೊಂಡ ನಂತರ ವಜಾಗೊಳಿಸುವುದು ಅಥವಾ ಸೇವೆಯಿಂದ ತೆಗೆದುಹಾಕುವುದು ಸರ್ಕಾರದ ಅಡಿಯಲ್ಲಿ ಸಲ್ಲಿಸಿದ ಸೇವೆಗೆ ನಿವೃತ್ತಿ ಪ್ರಯೋಜನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾರಣವಾಗುತ್ತದೆ. ಅವನನ್ನು ತೆಗೆದುಹಾಕುವುದು ಅಥವಾ ವಜಾಗೊಳಿಸಿದರೆ, ಉದ್ಯಮದ ನಿರ್ಧಾರವು ಆಡಳಿತಾತ್ಮಕವಾಗಿ ಸಂಬಂಧಿಸಿದ ಸಚಿವಾಲಯದ ಪರಿಶೀಲನೆಗೆ ಒಳಪಟ್ಟಿರುತ್ತದೆ.""ಈ ನಿಯಮದ ಉದ್ದೇಶಕ್ಕಾಗಿ, ನಿಯಮ 7 ಮತ್ತು 8ರ ನಿಯಮ 41 ಮತ್ತು ನಿಯಮ 44(5)(ಎ) &(ಬಿ) ನೊಂದಿಗೆ ಓದಲಾದ ಸಂಬಂಧಿತ ನಿಬಂಧನೆಗಳು ಈ ನಿಯಮಗಳ ಅಡಿಯಲ್ಲಿ ಸರ್ಕಾರಿ ನೌಕರನಿಗೆ ಅನ್ವಯವಾಗುವಂತೆಯೇ ಅನ್ವಯವಾಗುತ್ತವೆ.
ಇದನ್ನೂ ಓದಿ: ದೆಹಲಿ ಸ್ಪೋಟದ ನಂತರ ಪಾಕ್ ಗೆ ಹೆಚ್ಚಿದ 'ಆಪರೇಷನ್ ಸಿಂಧೂರ್' ಭೀತಿ, ಗಡಿಯಲ್ಲಿ ಭಾರಿ ಸೈನ್ಯ ನಿಯೋಜನೆ..!
ಈ ತಿದ್ದುಪಡಿಯನ್ನು ಭಾರತದ ಸುಪ್ರೀಂ ಕೋರ್ಟ್ನ ಜನವರಿ 9, 2023ರ ಎಸ್ಎಲ್ಪಿ ಸಂಖ್ಯೆ 4817/2020ರಲ್ಲಿ ಸೂರಜ್ ಪ್ರತಾಪ್ ಸಿಂಗ್ ವರ್ಸಸ್ ಸಿಎಂಡಿ ಬಿಎಸ್ಎನ್ಎಲ್ & ಅದರ್ಸ್ ಎಂಬ ಪ್ರಕರಣದ ಆದೇಶದ ಬೆಳಕಿನಲ್ಲಿ ಕೈಗೊಳ್ಳಲಾಗಿದೆ.ನಿವೃತ್ತ ಉದ್ಯೋಗಿಗಳು ಮತ್ತು ಸಾರ್ವಜನಿಕರು ಅಧಿಕೃತ ಮೂಲಗಳಿಂದಲೇ ಮಾಹಿತಿ ಪಡೆಯುವಂತೆ ಪಿಐಬಿ ಕರೆ ನೀಡಿದೆ. ವಾಟ್ಸಾಪ್ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ನಕಲಿ ಸುದ್ದಿಗಳನ್ನು ನಂಬದಂತೆ ಎಚ್ಚರಿಕೆ ವಹಿಸಿಬೇಕು ಎಂದು ಮನವಿ ಮಾಡಿದೆ.









