ಇದು ಸೈನಿಕರ ದೇವಾಲಯ !ಇಲ್ಲಿರುವ ಯೋಧನ ಆತ್ಮವೇ ನಮ್ಮ ಸೈನಿಕರಿಗೆ ಶ್ರೀ ರಕ್ಷೆ! ಭಾರತ-ಪಾಕ್ ಗಾಡಿಯಲ್ಲಿ ಭಾರತೀಯ ಸೇನೆಗೆ ಕಾವಲು ಈ ದೇವಾಲಯದ ಬಾಬಾ

O P Baba Temple In Siachen:ಭಾರತ ಪಾಕಿಸ್ತಾನ ಯುದ್ದ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಭಾರತ ಪಾಕ್ ಗಡಿಯಲ್ಲಿ ಭಾರತೀಯ ಯೋಧರನ್ನು ಕಾಯುತ್ತಿರುವ ಈ ದೇವಾಲಯ ಮತ್ತು ದೇವಾಲಯದ ಬಾಬಾ ಬಗ್ಗೆ ಮಾಹಿತಿ ಇಲ್ಲಿದೆ. 

Written by - Ranjitha R K | Last Updated : Apr 28, 2025, 02:38 PM IST
  • ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ತೊಮ್ಮೆ ತೀವ್ರ ಉದ್ವಿಗ್ನತೆ ಉಂಟಾಗಿದೆ.
  • ಎರಡೂ ದೇಶಗಳ ಮಧ್ಯೆ ನಿರ್ಣಾಯಕ ಯುದ್ಧ ನಡೆಯುವ ಬಗ್ಗೆ ಚರ್ಚೆ ನಡೆಯುತ್ತಿದೆ.
  • ಭಾರತದ ವಿರುದ್ಧ ಯುದ್ಧ ಮಾಡಲು ಪಾಕಿಸ್ತಾನ ಇತರ ದೇಶಗಳ ನೆರವು ಕೋರಿದೆ.
ಇದು ಸೈನಿಕರ ದೇವಾಲಯ !ಇಲ್ಲಿರುವ ಯೋಧನ ಆತ್ಮವೇ  ನಮ್ಮ ಸೈನಿಕರಿಗೆ ಶ್ರೀ ರಕ್ಷೆ! ಭಾರತ-ಪಾಕ್ ಗಾಡಿಯಲ್ಲಿ ಭಾರತೀಯ ಸೇನೆಗೆ ಕಾವಲು ಈ ದೇವಾಲಯದ ಬಾಬಾ

O P Baba Temple In Siachen : ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ತೊಮ್ಮೆ ತೀವ್ರ ಉದ್ವಿಗ್ನತೆ ಉಂಟಾಗಿದೆ. ಎರಡೂ ದೇಶಗಳ ಮಧ್ಯೆ ನಿರ್ಣಾಯಕ ಯುದ್ಧ ನಡೆಯುವ ಬಗ್ಗೆ ಚರ್ಚೆ ನಡೆಯುತ್ತಿದೆ. ಭಾರತದ ವಿರುದ್ಧ ಯುದ್ಧ ಮಾಡಲು ಪಾಕಿಸ್ತಾನ ಇತರ ದೇಶಗಳ ನೆರವು ಕೋರಿದೆ. ಪಾಕಿಸ್ತಾನದಿಂದ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ಬಗ್ಗೆ ಭಾರತ ಬಹಿರಂಗವಾಗಿ ಮಾತನಾಡುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೈನಿಕರು ಘರ್ಜಿಸಿದ ರೀತಿಗೆ ಇಡೀ ಪಾಕಿಸ್ತಾನ ನಡುಗಿದೆ. ಈ ಸಂದರ್ಭದಲ್ಲಿ, ಭಾರತದ ಸೈನಿಕರನ್ನು ರಕ್ಷಿಸುವ ಸೈನಿಕರ ದೇವಾಲಯದ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ. ಆ ದೇವಾಲಯದ ಹೆಸರು ಒ.ಪಿ. ದೇವಾಲಯ. ಈ ದೇವಾಲಯವು ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್‌ನಲ್ಲಿದೆ.ಗಡಿಯಲ್ಲಿನ ಕಠಿಣ ಚಳಿ ಮತ್ತು ವಿವಿಧ ಸವಾಲುಗಲಿಂಡಾ ಒ.ಪಿ. ಬಾಬಾ ಸೈನಿಕರನ್ನು ರಕ್ಷಿಸುತ್ತಾರೆ ಎನ್ನುವ ನಂಬಿಕೆಯಿದೆ. ಹಾಗಿದ್ದರೆ ಈ ದೇವಾಲಯದಲ್ಲಿ ಸೈನಿಕರಿಂದ ಪೂಜೆ ತೆಗೆದುಕೊಳ್ಳುವ ಓ.ಪಿ. ಬಾಬಾ ಯಾರು ನೋಡೋಣ. 

Add Zee News as a Preferred Source

ಸಿಯಾಚಿನ್‌ನಲ್ಲಿ ಸೈನಿಕರ ಕಮಾಂಡರ್ ಒಪಿ ಬಾಬಾ?:
ಭಯೋತ್ಪಾದಕರನ್ನು ಈ ಬಾರಿ ನಿರ್ನಾಮ ಮಾಡುವುದು ಖಂಡಿತಾ ಎಂದು  ಭಾರತ ಪಾಕಿಸ್ತಾನಕ್ಕೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದೆ. ಭಾರತ ಈ ಬಾರಿ ತೆಗೆದುಕೊಂಡ ನಿಲುವಿನಿಂದಾಗಿ ಪಾಕಿಸ್ತಾನದಲ್ಲಿ ಅವ್ಯವಸ್ಥೆ ನೆಲೆಯಾಗಿದೆ.  ಎಲ್ಲಾ ಕ್ಷೇತ್ರಗಳಲ್ಲಿ ಸಿದ್ಧತೆಗಳು ಆರಂಭವಾಗಿವೆ. ಈಗ ವಿಶ್ವದ ಅತಿ ಎತ್ತರದ ಮತ್ತು ಅಪಾಯಕಾರಿ ಯುದ್ಧಭೂಮಿ ಸಿಯಾಚಿನ್‌ನಲ್ಲಿರುವ 'ಒ.ಪಿ. ಬಾಬಾ ದೇವಾಲಯ' ಮತ್ತೊಮ್ಮೆ ಸುದ್ದಿಯಾಗಿದೆ. ಓ.ಪಿ. ಬಾಬಾನನ್ನು ಸಿಯಾಚಿನ್ ರಕ್ಷಕ ಎಂದೇ ಕರೆಯಲಾಗುತ್ತದೆ. ಭಾರತೀಯ ಸೇನಾ ಸೈನಿಕರು ಅವರನ್ನು ತಮ್ಮ ಶ್ರೇಷ್ಠ ಕಮಾಂಡರ್ ಎಂದು ಪರಿಗಣಿಸುತ್ತಾರೆ. ಪ್ರತಿ ಕಾರ್ಯಾಚರಣೆಯ ಮೊದಲು ಮತ್ತು ನಂತರ ಭಾರತೀಯ ಸೈನಿಕರು ಈ ದೇವಾಲಯದಲ್ಲಿ ಗೌರವ  ಸಲ್ಲಿಸುತ್ತಾರೆ.

ಇದನ್ನೂ ಓದಿ : ಪತಂಜಲಿಯ ಗುಲಾಬ್ ಶರ್ಬತ್: ಲಾಭಕ್ಕಿಂತ ಜನರ ಆರೋಗ್ಯ ಕಾಳಜಿಯ ಗುರಿ ಹೊಂದಿದ ಬಾಬಾ!

ಓ ಪಿ ಬಾಬಾ ಯಾರು? : 
ಮಾಧ್ಯಮ ವರದಿಗಳ ಪ್ರಕಾರ, ಒ.ಪಿ. ಬಾಬಾ ಅವರ ಪೂರ್ಣ ಹೆಸರು ಓಂ ಪ್ರಕಾಶ್. ಅವರು ಭಾರತೀಯ ಸೇನೆಯ ಸೈನಿಕರಾಗಿದ್ದರು, 1980ರ ದಶಕದಲ್ಲಿ ಸಿಯಾಚಿನ್‌ನ ಮಲೌನ್ ಪೋಸ್ಟ್‌ನಲ್ಲಿ ನಿಯೋಜನೆಗೊಂಡಿದ್ದರು. ಅವನು ಒಬ್ಬಂಟಿಯಾಗಿ ಶತ್ರುಗಳ ದಾಳಿಯನ್ನು ವಿಫಲಗೊಳಿಸಿದ್ದರು ಎಂದು ಹೇಳಲಾಗುತ್ತದೆ.ಅವರು ಹುತಾತ್ಮರಾದ ನಂತರ ಒ.ಪಿ. ಬಾಬಾ ಆತ್ಮವೇ ಸಿಯಾಚಿನ್‌ನಲ್ಲಿ ನಿಯೋಜಿಸಲಾದ ಸೈನಿಕರನ್ನು ರಕ್ಷಿಸುತ್ತದೆ ಎನ್ನುವುದು ನಂಬಿಕೆ. ಒಪಿ ಬಾಬಾ ದೇವಾಲಯವು ಸಿಯಾಚಿನ್‌ನಲ್ಲಿರುವ ಭಾರತೀಯ ಸೇನಾ ನೆಲೆ ಶಿಬಿರದ ಬಳಿ ಇದೆ. ಪ್ರತಿಯೊಬ್ಬ ಸೈನಿಕನು ಮೊದಲು ಅಲ್ಲಿಗೆಭೇಟಿ ನೀಡಿಯೇ ನೀಡುತ್ತಾನೆ. 

ಒಪಿ ಬಾಬಾ ಹೇಗೆ ರಕ್ಷಿಸುತ್ತಾರೆ? : 
ಕೊರೆಯುವ ಚಳಿ ಮತ್ತು ಹಿಮನದಿಯ ಅಪಾಯಗಳಿಂದ ಒ.ಪಿ. ಬಾಬಾ  ರಕ್ಷಿಸುತ್ತಾರೆ ಎನ್ನುವುದು ಭಾರತೀಯ ಸೈನಿಕರ ನಂಬಿಕೆ. ಒಬ್ಬ ಸೈನಿಕ ದಾರಿ ತಪ್ಪಿದರೆ ಅಥವಾ ಹಿಮಪಾತ ಬರಲಿದೆ ಎನ್ನುವ ಮುನ್ನೆಚ್ಚರಿಕೆಯನ್ನು ಇಲ್ಲಿ  ಓ.ಪಿ. ಬಾಬಾ ಅವರ ಕನಸಿನಲ್ಲಿ ನೀಡುತ್ತಾರೆಯಂತೆ.  ಓ.ಪಿ. ಬಾಬಾ ಸೈನಿಕರಿಗೆ ಕನಸಿನಲ್ಲಿ ಅಪಾಯದ ಬಗ್ಗೆ ಎಚ್ಚರಿಕೆ ನೀಡಿ ಅವರ ಜೀವಗಳನ್ನು ಉಳಿಸಿದ ಬಗ್ಗೆ ಅನೇಕ ಕಥೆಗಳಿವೆ.

ಇದನ್ನೂ ಓದಿ : ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕವನ್ನು ಒಮ್ಮೆಗಿಂತ ಹೆಚ್ಚು ಬದಲಾಯಿಸಬಹುದೇ?

ಸಿಯಾಚಿನ್‌ನ ಅಪಾಯಕಾರಿ ಪರಿಸರ : 
ಸಿಯಾಚಿನ್ ವಿಶ್ವದ ಅತಿ ಎತ್ತರದ ಯುದ್ಧ ವಲಯವಾಗಿದ್ದು, ಅಲ್ಲಿ ಹಿಮವು 12 ತಿಂಗಳುಗಳ ಕಾಲವೂ ಹೆಪ್ಪುಗಟ್ಟಿರುತ್ತದೆ. ಇಲ್ಲಿ ಹಗಲಿನಲ್ಲಿ ತಾಪಮಾನವು -30 ರಿಂದ -55 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಈ ಹಿಮನದಿ ಮೂರು ಕಡೆ ಪಾಕಿಸ್ತಾನ ಮತ್ತು ಚೀನಾದಿಂದ ಸುತ್ತುವರೆದಿದೆ. ಈ ಕಾರಣದಿಂದಾಗಿ ಭಾರತೀಯ ಸೈನಿಕರು ಪ್ರತಿ ಕ್ಷಣವೂ ಜಾಗರೂಕರಾಗಿರುತ್ತಾರೆ. ಇಲ್ಲಿ ಭಾರತೀಯ ಸೈನಿಕನು ಆಮ್ಲಜನಕದ ಕೊರತೆ ಮತ್ತು ಹಿಮಪಾತದ ನಡುವೆಯೂ ದೇಶವನ್ನು ರಕ್ಷಿಸುತ್ತಾನೆ.

2003 ರಲ್ಲಿ ನಿರ್ಮಾಣವಾದ ಒ.ಪಿ. ಬಾಬಾ ದೇವಾಲಯ :
೧೯೯೬ ರಲ್ಲಿ, ಒ.ಪಿ. ಬಾಬಾ ಅವರ ದೇವಾಲಯವು ಒಂದು ಸಣ್ಣ ಗುಡಿಸಲಿನಲ್ಲಿತ್ತು. ಆದರೆ 2003 ರಲ್ಲಿ ಭಾರತ-ಪಾಕಿಸ್ತಾನ ಒಪ್ಪಂದದ ನಂತರ, ಇದನ್ನು ಶಾಶ್ವತ ದೇವಾಲಯವನ್ನಾಗಿ ಮಾಡಲಾಯಿತು. ಇಲ್ಲಿ ಸೈನಿಕರು ಪೂಜೆ ಸಲ್ಲಿಸುವುದಲ್ಲದೆ, ಕಾರ್ಯಾಚರಣೆಯ ಆರಂಭದಲ್ಲಿ ಮತ್ತು ಕೊನೆಯಲ್ಲಿ ಔಪಚಾರಿಕ ವರದಿಗಳನ್ನು ಸಹ ನೀಡುತ್ತಾರೆ. ಈ ದೇವಾಲಯದ ಬಗ್ಗೆ ಹಲವು ಕಥೆಗಳಿವೆ. ಅವುಗಳಲ್ಲಿ ಮುಖ್ಯವಾದವು ಎಂದರೆ 2016 ರಲ್ಲಿ, ಸಿಯಾಚಿನ್‌ನಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಅವರನ್ನು 6 ದಿನಗಳ ನಂತರ ರಕ್ಷಿಸಿರುವುದು. 

ಓ ಪಿ ಬಾಬಾರ ಪವಾಡ :
ಈ ಪವಾಡ ಓ.ಪಿ. ಬಾಬಾ ಅವರ ಕೃಪೆಯಿಂದ ಮಾತ್ರ ಸಂಭವಿಸಿದೆ ಎಂದು ಸೈನಿಕರು ನಂಬಿದ್ದರು. ಹನುಮಂತಪ್ಪ  ನಂತರ ನಿಧನರಾದರೂ, ಈ ಘಟನೆಯು ಒ.ಪಿ. ಬಾಬಾ ಅವರ ಮೇಲಿನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಿಯಾಚಿನ್ ಸೈನಿಕರಿಗೆ ಓ.ಪಿ. ಬಾಬಾ ಅವರ ಕಥೆ ಧೈರ್ಯ ಮತ್ತು ನಂಬಿಕೆಯ ಸಂಕೇತವಾಗಿದೆ. ಹಿಮಪಾತದ ಸಮಯದಲ್ಲೂ ಸೈನಿಕರಿಗೆ ದೇಶವನ್ನು ರಕ್ಷಿಸಲು ಶಕ್ತಿ ನೀಡುವ ಮಹಾನ್ ಶಕ್ತಿ ಇದು.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News