Pakistan Hindu in India: ಕೆಲವು ಸಮಯದ ಹಿಂದೆ ಕಾಶ್ಮೀರದ ಟ್ರಾಲ್ನಲ್ಲಿ ಸೇನೆಯು ಭಯೋತ್ಪಾದಕನ ಮನೆಯನ್ನು ಸ್ಫೋಟಿಸಿತು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪಿತೂರಿಯಲ್ಲಿ ಆತ ಭಾಗಿಯಾಗಿದ್ದ. ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಈ ಘಟನೆಯ ನಂತರ ಇಡೀ ಭಾರತ ಒಗ್ಗಟ್ಟಾಗಿದ್ದು, ಭಯೋತ್ಪಾದಕರ ಮೇಲೆ ಬಲವಾದ ದಾಳಿ ನಡೆಸಬೇಕೆಂದು ಒತ್ತಾಯಿಸುತ್ತಿದೆ. ಈ ಮಧ್ಯೆ, ರಾಜಸ್ಥಾನದಲ್ಲಿ ವಾಸಿಸುವ ಪಾಕಿಸ್ತಾನಿ ಹಿಂದೂ ಮಹಿಳೆ ರಾಧಾ ಭಿಲ್ ಭಾವುಕರಾಗಿದ್ದಾರೆ. ಜೈಸಲ್ಮೇರ್ ಬಳಿ ವಾಸಿಸುವ ಈ 27 ವರ್ಷದ ಪಾಕಿಸ್ತಾನಿ ಪ್ರಜೆ ತನ್ನ ಮಗನಿಂದ ಬೇರ್ಪಡಬೇಕಾಗಬಹುದು ಎನ್ನುವ ಆತಂಕದಲ್ಲಿ ಇದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರವು ಪಾಕಿಸ್ತಾನಿ ವೀಸಾಗಳನ್ನು ರದ್ದುಗೊಳಿಸಿರುವುದೇ ಈ ಮಹಿಳೆಯ ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ 27 ರೊಳಗೆ ಎಲ್ಲಾ ಪಾಕಿಸ್ತಾನಿ ನಾಗರಿಕರು ತಮ್ಮ ದೇಶಕ್ಕೆ ಮರಳಬೇಕೆಂದು ಸರ್ಕಾರ ಆದೇಶಿಸಿದೆ. ಈ ಆದೇಶದಿಂದ ರಾಜಸ್ಥಾನದಲ್ಲಿ ವಾಸಿಸುವ ಅನೇಕ ಪಾಕಿಸ್ತಾನಿ ಹಿಂದೂ ಕುಟುಂಬಗಳು ಆತಂಕದಲ್ಲಿವೆ.
ಇದನ್ನೂ ಓದಿ : Pahalgam Attack: 1960ರ ಸಿಂಧೂ ಜಲ ಒಪ್ಪಂದ ಸ್ಥಗಿತವನ್ನು ಯುದ್ಧ ಘೋಷಣೆ ಎಂದ ಪಾಕಿಸ್ತಾನಕ್ಕೆ ಭಾರತದ ತಿರುಗೇಟು
1200 ಪಾಕಿಸ್ತಾನಿಗಳಲ್ಲಿ ಆವರಿಸಿದ ದುಃಖ :
ವರದಿಯ ಪ್ರಕಾರ, ಜೈಸಲ್ಮೇರ್ನಲ್ಲಿ ರಾಧಾ ಒಬ್ಬಳೇ ಈ ರೀತಿ ಇಲ್ಲ. ಅಲ್ಪಾವಧಿಯ ವೀಸಾದಲ್ಲಿ ವಾಸಿಸುತ್ತಿರುವ 1200ಕ್ಕೂ ಹೆಚ್ಚು ಪಾಕಿಸ್ತಾನಿ ನಾಗರಿಕರು ಈ ಸಮಯದಲ್ಲಿ ದುಃಖಿತರಾಗಿದ್ದಾರೆ. ವಿದೇಶಿ ಪ್ರಾದೇಶಿಕ ನೋಂದಣಿ ಅಧಿಕಾರಿ ನರಪತ್ ಸಿಂಗ್ ಅವರು ತಮ್ಮ ಕಚೇರಿ ಗೃಹ ಸಚಿವಾಲಯದ ಆದೇಶಕ್ಕಾಗಿ ಕಾಯುತ್ತಿದ್ದು, ದೀರ್ಘಾವಧಿಯ ವೀಸಾ ಹೊಂದಿರುವವರು ಚಿಂತಿಸಬೇಕಾಗಿಲ್ಲ ಎಂದು ಭರವಸೆ ನೀಡಿದರು. ರಾಧಾ ದೀರ್ಘಾವಧಿಯ ವೀಸಾದ ಮೇಲೆ ಭಾರತದಲ್ಲಿದ್ದಾರೆ.
ಎರಡು ವರ್ಷಗಳ ನಂತರ ಮಗುವನ್ನು ಭೇಟಿಯಾದ ತಾಯಿ :
ರಾಧಾ ಅವರ ಪತಿ ರಾಜು ರಾಮ್ (30), 8 ಮತ್ತು 7 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳು ಫೆಬ್ರವರಿ 2023ರಲ್ಲಿ ದೀರ್ಘಾವಧಿಯ ವೀಸಾ (LTV) ಮೇಲೆ ಭಾರತಕ್ಕೆ ಬಂದರು. ಆದರೆ,ಎರಡು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗ ಘನಶ್ಯಾಮ್ಗೆ ಆಗ ವೀಸಾ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಗು ತನ್ನ ಅಜ್ಜ-ಅಜ್ಜಿಯರೊಂದಿಗೆ ಪಾಕಿಸ್ತಾನದಲ್ಲಿಯೇ ಇರಬೇಕಾಯಿತು. ಘನಶ್ಯಾಮ್ ಮತ್ತು ಅವನ ಅಜ್ಜ-ಅಜ್ಜಿ ಅಲ್ಪಾವಧಿಯ ವೀಸಾ (STV) ಮೇಲೆ ಭಾರತಕ್ಕೆ ಬರಲು ಎರಡು ವರ್ಷಗಳವರೆಗೆ ಕಾಯಬೇಕಾಯಿತು. ಇದೀಗ ಏಪ್ರಿಲ್ 6 ರಂದು ಪುಟ್ಟ ಕಂದಮ್ಮ ಘನಶ್ಯಾಂ ತನ್ನ ತಾಯಿ ಮಡಿಲು ಸೇರಿದ್ದ. ತನ್ನ ಮಗುವನ್ನು ನನ್ನ ಎದೆಗಪ್ಪಿಕೊಳ್ಳಲು ಈ ತಾಯಿ ಎರಡು ವರ್ಷಗಳ ಕಾಲ ಕಾದು ಕುಳಿತಿದ್ದರು. ಆದರೆ ಪೆಹಲ್ಗಾಮ್ ಘಟನೆಯಿಂದ ಮತ್ತೆ ತಾಯಿ ಮಗು ದೂರವಾಗುವ ಆತಂಕ ಎದುರಾಗಿದೆ.
ಇದನ್ನೂ ಓದಿ : ಪಹಲ್ಗಾಮ್ ಭಯೋತ್ಪಾದಕ ದಾಳಿ: ಭದ್ರತಾ ವೈಫಲ್ಯವನ್ನು ಒಪ್ಪಿಕೊಂಡ ಮೋದಿ ಸರ್ಕಾರ
ಈ ಪಾಕಿಸ್ತಾನಿ ಹಿಂದೂಗಳಿಗೆ ಪರಿಹಾರ :
ಪಾಕಿಸ್ತಾನಿ ನಾಗರಿಕರಿಗೆ ವೀಸಾ ಸೇವೆಗಳನ್ನು ಭಾರತ ಸರ್ಕಾರ ಸ್ಥಗಿತಗೊಳಿಸಿದೆ. ಆದರೆ, ಈ ನಿರ್ಧಾರವು ಈಗಾಗಲೇ ನೀಡಲಾದ ದೀರ್ಘಾವಧಿಯ ವೀಸಾಗಳಿಗೆ ಅನ್ವಯಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಹೌದು, ಪಾಕಿಸ್ತಾನಿ ಹಿಂದೂ ಪ್ರಜೆಗಳಿಗೆ ಈಗಾಗಲೇ ನೀಡಲಾದ LTV ವೀಸಾಗಳು ಮಾನ್ಯ ಮತ್ತು ಪರಿಣಾಮಕಾರಿಯಾಗಿ ಉಳಿಯುತ್ತವೆ. ಈ ವೀಸಾಗಳನ್ನು ರದ್ದುಗೊಳಿಸಲು ಯಾವುದೇ ಆದೇಶವನ್ನು ನೀಡಲಾಗಿಲ್ಲ. ಪಾಕಿಸ್ತಾನದಲ್ಲಿ ವರ್ಷಗಳಿಂದ ಧಾರ್ಮಿಕ ಕಿರುಕುಳವನ್ನು ಎದುರಿಸುತ್ತಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಭಾರತದಲ್ಲಿ ಆಶ್ರಯ ನೀಡುವ ನೀತಿಯ ಭಾಗವಾಗಿರುವ ಮಾನವೀಯ ಆಧಾರದ ಮೇಲೆ ಸರ್ಕಾರ ಈ ನಿಲುವನ್ನು ಅಳವಡಿಸಿಕೊಂಡಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.