Pahalgam Attack: 1960ರ ಸಿಂಧೂ ಜಲ ಒಪ್ಪಂದ ಸ್ಥಗಿತವನ್ನು ಯುದ್ಧ ಘೋಷಣೆ ಎಂದ ಪಾಕಿಸ್ತಾನಕ್ಕೆ ಭಾರತದ ತಿರುಗೇಟು

Indus Waters Treaty: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಇಡೀ ದೇಶದ ಜನರ ಆಕ್ರೋಶವನ್ನು ಹೆಚ್ಚಿಸಿದೆ. ಈ ಮಧ್ಯೆ ದಿಟ್ಟ ಪಾಕಿಸ್ತಾನದ ವಿರುದ್ಧ ನಿರ್ಧಾರ ಕೈಗೊಂಡಿರುವ ಮೋದಿ ಸರ್ಕಾರ 6 ದಶಕಗಳ ಹಿಂದಿನ ಸಿಂಧೂ ಜಲ ಒಪ್ಪಂದವನ್ನು ಕೊನೆಗೊಳಿಸಿದೆ. ಮಾತ್ರವಲ್ಲ, ಭಾರತದ ಈ ನಿಲುವನ್ನು 'ಯುದ್ಧ ಘೋಷಣೆ' ಎಂದಿರುವ ಪಾಕಿಸ್ತಾನಕ್ಕೆ ದಿಟ್ಟ ಉತ್ತರವನ್ನೂ ನೀಡಿದೆ. 

Written by - Yashaswini V | Last Updated : Apr 25, 2025, 11:08 AM IST
  • 1960ರ ಸಿಂಧೂ ಜಲ ಒಪ್ಪಂದ ಸ್ಥಗಿತ
  • ಏನಿದು ಸಿಂಧೂ ಜಲ ಒಪ್ಪಂದ
  • ಸಿಂಧೂ ಜಲ ಒಪ್ಪಂದ ಸ್ಥಗಿತಗೊಳ್ಳಲು ಪ್ರಮುಖ ಕಾರಣಗಳು...
Pahalgam Attack: 1960ರ ಸಿಂಧೂ ಜಲ ಒಪ್ಪಂದ ಸ್ಥಗಿತವನ್ನು ಯುದ್ಧ ಘೋಷಣೆ ಎಂದ ಪಾಕಿಸ್ತಾನಕ್ಕೆ ಭಾರತದ ತಿರುಗೇಟು

India Pakistan Indus Waters Treaty: ಭಾರತದ ಕಿರೀಟದಂತಿರುವ ಕಣಿವೆಗಳ ನಾಡು ಜಮ್ಮು-ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯಾನಕ ಭಯೋತ್ಪಾದಕ ದಾಳಿ ಬಳಿಕ ಬದ್ಧ ವೈರಿಗಳು ಎಂತಲೇ ಕರೆಯಲ್ಪಡುವ ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಮಾರಕ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ದಾಳಿ ನಡೆಸಿರುವ ಭಾರತ ಸರ್ಕಾರ 65ವರ್ಷಗಳ ಹಳೆಯ ಸಿಂಧೂ ನದಿ ನೀರಿನ ಒಪ್ಪಂದವನ್ನು ರದ್ದುಗೊಳಿಸಿದೆ. ಮೋದಿ ಸರ್ಕಾರದ ಈ ನಿರ್ಧಾರವನ್ನು ಪಾಕಿಸ್ತಾನ "ಯುದ್ಧ ಘೋಷಣೆ" ಎಂದು ಕರೆದಿದೆ.  ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿರುವ ಬಗ್ಗೆ ಪಾಕಿಸ್ತಾನಕ್ಕೆ ಔಪಚಾರಿಕವಾಗಿ ಪತ್ರ ಬರೆದಿರುವ ಭಾರತ ಸರ್ಕಾರ ಹೇಳಿದ್ದೇನು.... ಇಲ್ಲಿದೆ ಸಂಪೂರ್ಣ ಮಾಹಿತಿ... 

1960ರ ಸಿಂಧೂ ಜಲ ಒಪ್ಪಂದ ಸ್ಥಗಿತ: 
ಬುಧವಾರ(ಏಪ್ರಿಲ್ 23, 2025) ನಡೆದ ಕ್ಯಾಬಿನೆಟ್ ಸಭೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ 65ವರ್ಷಗಳ ಹಿಂದಿನ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದ ಮೋದಿ ಸರ್ಕಾರ, ನಿನ್ನೆ (ಏಪ್ರಿಲ್ 24, 2025, ಗುರುವಾರ) ಪಾಕಿಸ್ತಾನಕ್ಕೆ ಔಪಚಾರಿಕವಾಗಿ ಪತ್ರ ರವಾನಿಸಿದೆ. 

ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬಶ್ರೀ ಮುಖರ್ಜಿ ಅವರು ಪಾಕಿಸ್ತಾನದ ಜಲಸಂಪನ್ಮೂಲ ಸಚಿವಾಲಯ ಕಾರ್ಯದರ್ಶಿ ಸೈಯದ್ ಅಲಿ ಮುರ್ತಾಜಾ ಅವರಿಗೆ ಪತ್ರ ಬರೆದಿದ್ದು, "1960 ರ ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಭಾರತ ಸರ್ಕಾರ ನಿರ್ಧರಿಸಿದೆ" ಎಂದು ತಿಳಿಸಿದ್ದಾರೆ. ಅಲ್ಲದೆ, ಇಸ್ಲಾಮಾಬಾದ್ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. 

ಇದನ್ನೂ ಓದಿ- Explainer: ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಸಾಮರ್ಥ್ಯದ ಬಲಾಬಲ: ಯಾರು ಹೆಚ್ಚು ಬಲಶಾಲಿ?

ಏನಿದು ಸಿಂಧೂ ಜಲ ಒಪ್ಪಂದ? 
1960ರ ಸೆಪ್ಟೆಂಬರ್ 19ರಂದು ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಅಂದಿನ ಪಾಕಿಸ್ತಾನಿ ಅಧ್ಯಕ್ಷ ಮಾರ್ಷಲ್ ಅಯೂಬ್ ಖಾನ್ ನಡುವೆ 'ಸಿಂಧೂ ನದಿ ನೀರು ಒಪ್ಪಂದ'ಕ್ಕೆ ಕರಾಚಿಯಲ್ಲಿ ಸಹಿ ಹಾಕಲಾಯಿತು. ವಿಶ್ವಬ್ಯಾಂಕ್ ಸಮ್ಮುಖದಲ್ಲಿ ಉಭಯ ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆರೂವರೆ ದಶಕಗಳ ಹಿಂದೆ ಸಹಿ ಹಾಕಲಾದ ಈ ಸಿಂಧೂ ಜಲ ಒಪ್ಪಂದದ ಪ್ರಕಾರ, ಪೂರ್ವದ ನದಿಗಳಾದ ಸಟ್ಲೆಜ್, ಬಿಯಾಸ್ ಮತ್ತು ರಾವಿಗಳನ್ನು ಭಾರತಕ್ಕೆ ಮತ್ತು ಪಶ್ಚಿಮದ ನದಿಗಳಾದ ಸಿಂಧೂ, ಝೀಲಂ ಮತ್ತು ಚೆನಾಬ್‌ಗಳನ್ನು ಪಾಕಿಸ್ತಾನಕ್ಕೆ ಹಂಚಲಾಯಿತು. ಆದರೆ, ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಮುಂದುವರಿಸಿರುವ ಭಯೋತ್ಪಾದಕ ದಾಳಿಯು ಸಿಂಧೂ ನದಿ ಜಲ ಒಪ್ಪಂದದಡಿಯಲ್ಲಿ ಭಾರತದ ಹಕ್ಕುಗಳಿಗೆ ಅಡ್ಡಿಯಾಗುತ್ತದೆ ಎಂದು ಭಾರತ ಹೇಳಿದೆ. ಈ ಹಿನ್ನಲೆಯಲ್ಲಿ ಹಲವು ಕಠಿಣ ಕ್ರಮಗಳನ್ನು ಸಹ ತೆಗೆದುಕೊಂಡಿದೆ. 

ಸಿಂಧೂ ಜಲ ಒಪ್ಪಂದ ಸ್ಥಗಿತಗೊಳ್ಳಲು ಪ್ರಮುಖ ಕಾರಣಗಳು: 
ಯಾವುದೇ ಒಪ್ಪಂದದ ಮೂಲಭೂತ ಆಧಾರ ಉಭಯತ್ವರರು ಒಪ್ಪಂದಕ್ಕೆ ಪ್ರಾಮಾಣಿಕವಾದ ಗೌರವ ತೋರುವುದು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿರುವ ಪಾಕಿಸ್ತಾನವು ಭಾರತದ ಗಡಿಯಾಚೆ ಭಾರತೀಯ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರವನ್ನು ಗುರಿಯಾಗಿಸಿ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳು. ಇದು ಭದ್ರತಾ ಅನಿಶ್ಚಿತತೆ ಒಪ್ಪಂದದ ಅಡಿಯಲ್ಲಿ ಭಾರತದ ಹಕ್ಕುಗಳ ಮೇಲೆ ನೇರವಾಗಿ ಅಡ್ಡಿಯಾಗಿದೆ. ಅಲ್ಲದೆ, ಒಪ್ಪಂದದ ಅಡಿಯಲ್ಲಿ ಯಾವುದೇ ನಿರ್ದಿಷ್ಟ ಮಾತುಕತೆಗೆ ಭಾರತ ಹಲವು ಬಾರಿ ವಿನಂತಿ ಸಲ್ಲಿಸಿದ್ದರೂ, ಇವ್ಯಾವುದಕ್ಕೂ ಪಾಕಿಸ್ತಾನದ ಬೆಂಬಲ ಸಹಕಾರ ಲಭ್ಯವಾಗಿಲ್ಲ. ಇದು ಸ್ಪಷ್ಟವಾಗಿ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಭಾರತ ಬರೆದಿರುವ ಪಾತ್ರದಲ್ಲಿ ತಿಳಿಸಲಾಗಿದೆ. 

ಪಾಕಿಸ್ತಾನಕ್ಕೆ ಭಾರತ ಬರೆದಿರುವ ಪತ್ರದ ಪ್ರಮುಖಾಂಶಗಳು: 
65ವರ್ಷಗಳ ಹಳೆಯದಾದ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿರುವುದರ ಹಿಂದಿನ ಅಗತ್ಯತೆಗಳನ್ನು ಉಲ್ಲೇಖಿಸಿರುವ ಭಾರತ, 
ಪಾಕಿಸ್ತಾನಕ್ಕೆ  ನೀಡಿರುವ ನೋಟಿಸ್‌ನಲ್ಲಿ 1960 ರ ಸಿಂಧೂ ಜಲ ಒಪ್ಪಂದಕ್ಕೆ ಒಪ್ಪಂದದ XII (3) ನೇ ವಿಧಿಯ ಅಡಿಯಲ್ಲಿ ತಿದ್ದುಪಡಿಯನ್ನು ಕೋರಿದೆ. ಮೋದಿ ಸರ್ಕಾರವು ಈ ಪತ್ರದಲ್ಲಿ ಸಿಂಧೂ ಜಲ ಒಪ್ಪಂದದಲ್ಲಿ ಮರುಪರಿಶೀಲಿಸಬೇಕಾದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಾಗಿದೆ. 

ಇದನ್ನೂ ಓದಿ- "ಭಾರತೀಯರೇ 48 ಗಂಟೆಗಳಲ್ಲಿ ಸಿದ್ಧರಾಗಿರಿ".. 5 ಪ್ರಮುಖ ನಿರ್ಧಾರ ಘೋಷಿಸಿದ ಪಾಕಿಸ್ತಾನ..!

ಸಿಂಧೂ ಜಲ ಒಪ್ಪಂದ ಸ್ಥಗಿತವನ್ನು ಯುದ್ದ ಘೋಷಣೆ ಎಂದಿರುವ ಪಾಕ್: 
ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಗೆ ತಿರುಗೇಟು ನೀಡಿರುವ ಭಾರತದ ತಂತ್ರಕ್ಕೆ ಪಾಕಿಸ್ತಾನ ಸರ್ಕಾರ ಪ್ರತ್ಯುತ್ತರವನ್ನು ನೀಡಿದೆ. ಏಪ್ರಿಲ್ 24 ರಂದು ಇಸ್ಲಾಮಾಬಾದ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿಯ (ಎನ್‌ಸಿಎಸ್) ಸಭೆ ಬಳಿಕ ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದನ್ನು ಯುದ್ಧದ ಕೃತ್ಯ ಏನೆಡು ಬಣ್ಣಿಸಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News