ಪಹಲ್ಗಾಮ್ ದಾಳಿ, ಗಡಿಯುದ್ದಕ್ಕೂ ಹೈ ಅಲರ್ಟ್‌ : ಕಾಶ್ಮೀರ ಕಣಿವೆಯಲ್ಲಿ ಬೃಹತ್ ಕಾರ್ಯಾಚರಣೆ

Pahalgam Terror Attack : ಕುಲ್ಗಾಮ್ ತಂಗ್ಮಾರಾಗ್ ಪ್ರದೇಶದಲ್ಲಿ ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ನಿನ್ನೆ ರಾತ್ರಿ ನಡೆದ ಗುಂಡಿನ ಚಕಮಕಿ ನಡೆಯಿತು. ಈಗ ಮತ್ತೆ ಶೋಧ ಕಾರ್ಯ ಆರಂಭವಾಗಿದೆ. ಟಿಆರ್ಎಫ್ ನ 2-3 ಭಯೋತ್ಪಾದಕರು ಈ ಪ್ರದೇಶದಲ್ಲಿದ್ದಾರೆ ಎಂಬ ಮಾಹಿತಿ ಇದೆ.

Written by - Krishna N K | Last Updated : Apr 24, 2025, 10:23 AM IST
    • ಕುಲ್ಗಾಮ್ ತಂಗ್ಮಾರಾಗ್ ಪ್ರದೇಶದಲ್ಲಿ ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆ
    • ಟಿಆರ್ಎಫ್ ನ 2-3 ಭಯೋತ್ಪಾದಕರು ಈ ಪ್ರದೇಶದಲ್ಲಿದ್ದಾರೆ ಎಂಬ ಮಾಹಿತಿ ಇದೆ.
    • ಜಮ್ಮು ಕಾಶ್ಮೀರ ಪೊಲೀಸರೊಂದಿಗೆ ಸೇನೆಯು ಕಾರ್ಯಾಚರಣೆಯ ಜವಾಬ್ದಾರಿ
ಪಹಲ್ಗಾಮ್ ದಾಳಿ, ಗಡಿಯುದ್ದಕ್ಕೂ ಹೈ ಅಲರ್ಟ್‌ : ಕಾಶ್ಮೀರ ಕಣಿವೆಯಲ್ಲಿ ಬೃಹತ್ ಕಾರ್ಯಾಚರಣೆ

Pahalgam attack update : ಪಹಲ್ಗಾಮ್ ಬೈಸಾರನ್ ಮೇಲ್ಭಾಗದಲ್ಲಿ ಭಯೋತ್ಪಾದಕರನ್ನು ಬಂಧಿಸಲು ಕಣ್ಗಾವಲು ಉಪಕರಣಗಳು, ಡ್ರೋನ್‌ಗಳು ಮತ್ತು ಯುಎವಿಗಳೊಂದಿಗೆ ಶೋಧ ಹಾಗೂ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದೆ, ಜಮ್ಮು ಕಾಶ್ಮೀರ ಪೊಲೀಸರೊಂದಿಗೆ ಸೇನೆಯು ಕಾರ್ಯಾಚರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಮತ್ತು ಬೈಸಾರನ್‌ಗೆ ತೆರಳುವ ಎಲ್ಲಾ ವಾಹನಗಳಲ್ಲಿ ಶೋಧ ನಡೆಸಲಾಗುತ್ತಿದೆ.

ಕಾಶ್ಮೀರ ಕಣಿವೆಯಾದ್ಯಂತ 1500 ಕ್ಕೂ ಹೆಚ್ಚು ಒಜಿಡಬ್ಲ್ಯೂ ಮತ್ತು ಉಗ್ರಗಾಮಿತ್ವದೊಂದಿಗೆ ಸಂಬಂಧ ಹೊಂದಿರುವ ಜನರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ. ಎನ್ಐಎ, ಐಬಿ, ಸಿಐಡಿ ಮತ್ತು ಸೇನಾ ಐಡಬ್ಲ್ಯೂ ಈ ಎಲ್ಲಾ ಗುಪ್ತಚರ ವಿಭಾಗಗಳು ಬೈಸಾರನ್ ದಾಳಿಯನ್ನು ಡಿಕೋಡ್ ಮಾಡಲು ಮತ್ತು ಭಯೋತ್ಪಾದಕರನ್ನು ಗುರುತಿಸಲು ಪುರಾವೆಗಳನ್ನು ಸಂಗ್ರಹಿಸುತ್ತಿವೆ. 

ಇದನ್ನೂ ಓದಿ:"ಭಯೋತ್ಪಾದನೆ ಎಂದಿಗೂ ಗೆಲ್ಲುವುದಿಲ್ಲ.. ನಾವು ನಿಮ್ಮೊಂದಿಗಿದ್ದೇವೆ" : ಉಗ್ರರ ದಾಳಿ ಖಂಡಿಸಿದ ಯುಕೆ

ಇಲ್ಲಿಯವರೆಗೆ ಹೇಳಲಾಗುತ್ತಿರುವಂತೆ, 6 ಜನ ಭಯೋತ್ಪಾದಕರು ಹೊರಗೆ ಇದ್ದು ಗುಂಡು ಹಾರಿಸುತ್ತಲೇ ಇದ್ದರು. 5 ಜನ ಬೈಸರನ್ ಪ್ರದೇಶಕ್ಕೆ ನುಗ್ಗಿ ಪ್ರವಾಸಿಗರನ್ನು ಪಾಯಿಂಟ್ ಬ್ಲಾಂಕ್ ರೇಂಜ್‌ಗಳಿಂದ ತಲೆಗೆ ಗುಂಡು ಹಾರಿಸಿದ್ದಾರೆ. ಹೆಚ್ಚಾಗಿ ಪುರುಷರನ್ನು ಗುರಿಯಾಗಿಸಿಕೊಳ್ಳಲಾಗಿದೆ. ಹೆಸರು ಮತ್ತು ಧರ್ಮವನ್ನು ಕೇಳಿ, ನಂತರ ಗುಂಡು ಹಾರಿಸಿ ಕೊಲ್ಲಲಾಗಿದೆ. 

SKICC ಯಲ್ಲಿ ಬೈಸರನ್ ದಾಳಿಯ ನಂತರ ಪರಿಸ್ಥಿತಿಯನ್ನು ಚರ್ಚಿಸಲು ಸಿಎಂ ಒಮರ್ ಅಬ್ದುಲ್ಲಾ ಅವರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಸರ್ವಪಕ್ಷ ಸಭೆ ಕರೆದರು. ಅಂತರರಾಷ್ಟ್ರೀಯ ಗಡಿಯಲ್ಲಿ ಸ್ಥಳಾಂತರ ಎಚ್ಚರಿಕೆ ನೀಡಲಾಗಿದೆ. ಗಡಿಯುದ್ದಕ್ಕೂ ಭಯೋತ್ಪಾದಕರು ಅಥವಾ ಪಾಕಿಸ್ತಾನಿ ಸೈನ್ಯದ ಯಾವುದೇ ರೀತಿಯ ಚಲನವಲನಗಳನ್ನು ಎದುರಿಸಲು ಸೇನೆಯು ಗಸ್ತು ತಿರುಗುವಿಕೆಯನ್ನು ದ್ವಿಗುಣಗೊಳಿಸಿದೆ.

ಇದನ್ನೂ ಓದಿ:Forgotten History: ಪಹಲ್ಗಾಮ್ ಎಂದರೇನು? ಈ ಹೆಸರಿನ ಹಿಂದಿದೆ ರೋಚಕ ಕಥೆ..!

ಪಾಕಿಸ್ತಾನವು ಸಹ ತನ್ನ ಪಡೆಗಳನ್ನು ಜಾಗರೂಕ ಸ್ಥಿತಿಯಲ್ಲಿ ಇರಿಸಿದೆ. ಗಡಿಗಳಿಗೆ ಸಮೀಪವಿರುವ ಹಳ್ಳಿಗಳಲ್ಲಿ ವಾಸಿಸುವ ಜನರು ಸ್ಥಳಾಂತರಗೊಳ್ಳುವಂತೆ ಪಾಕ್‌ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ದಾಳಿ ಬೆನ್ನಲ್ಲೇ ಪಹಲಾಗಮ್‌ನಲ್ಲಿ 90% ಪ್ರವಾಸಿ ಬುಕಿಂಗ್ ರದ್ದುಗೊಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News