ವಿಶ್ವದಲ್ಲಿಯೇ ಮಾಂಸಾಹಾರ, ಪ್ರಾಣಿ ಹತ್ಯೆ, ಮೊಟ್ಟೆ ತಿನ್ನುವುದನ್ನೂ ನಿಷೇಧಿಸಿದ ಏಕೈಕ ನಗರ ನಮ್ಮ ದೇಶದಲ್ಲಿದೆ..!

Interesting facts : ಭಾರತದಲ್ಲಿ ಹಲವು ಧರ್ಮಗಳು ಮತ್ತು ಜಾತಿಗಳಿದ್ದರೂ, ಆಹಾರದ ವಿಷಯಕ್ಕೆ ಬಂದಾಗ, ಮುಖ್ಯವಾಗಿ ಎರಡು ಗುಂಪುಗಳಿವೆ. ಒಂದು ಸಸ್ಯಾಹಾರಿ, ಎರಡು ಮಾಂಸಾಹಾರಿ. ಜನರು ಇಂತಹುದನ್ನೇ ತಿನ್ನಬೇಕು ಎಂಬ ನಿಯಮ, ಕಾನೂನು ಇಲ್ಲ. ಆದರೆ ಭಾರತದಲ್ಲಿನ ಈ ನಗರದಲ್ಲಿ ಸಂಪೂರ್ಣವಾಗಿ ಮಾಂಸಹಾರ ಸೇವನೆ ನಿಷೇಧ.. ಯಾವುದು ಆ ಸಿಟಿ..? ಬನ್ನಿ ನೋಡೋಣ..

Written by - Krishna N K | Last Updated : Apr 12, 2025, 01:06 PM IST
    • ಜನರು ಇಂತಹುದನ್ನೇ ತಿನ್ನಬೇಕು ಎಂಬ ನಿಯಮ, ಕಾನೂನು ಇಲ್ಲ.
    • ಭಾರತದಲ್ಲಿನ ಈ ನಗರದಲ್ಲಿ ಸಂಪೂರ್ಣವಾಗಿ ಮಾಂಸಹಾರ ಸೇವನೆ ನಿಷೇಧ..
    • ಪ್ರಾಣಿ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದ ವಿಶ್ವದ ಮೊದಲ ನಗರವಾಗಿದೆ.
ವಿಶ್ವದಲ್ಲಿಯೇ ಮಾಂಸಾಹಾರ, ಪ್ರಾಣಿ ಹತ್ಯೆ, ಮೊಟ್ಟೆ ತಿನ್ನುವುದನ್ನೂ ನಿಷೇಧಿಸಿದ ಏಕೈಕ ನಗರ ನಮ್ಮ ದೇಶದಲ್ಲಿದೆ..!

Non veg ban city : ದೇಶದ ಒಂದು ನಗರದಲ್ಲಿ ಮಾಂಸಹಾರ ಸೇವನೆ ಮತ್ತು ಮಾರಾಟ ಮಾಡಲು ಅವಕಾಶವಿಲ್ಲ. ಗುಜರಾತ್‌ನ ಭಾವನಗರ ಜಿಲ್ಲೆಯ ಸಣ್ಣ ಪಟ್ಟಣವಾದ ಪಾಲಿಟಾನಾದಲ್ಲಿ ಮಾಂಸಾಹಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಾಲಿಟಾನಾ ನಗರವು ಮಾಂಸ, ಮೊಟ್ಟೆ ಮತ್ತು ಪ್ರಾಣಿ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದ ವಿಶ್ವದ ಮೊದಲ ನಗರವಾಗಿದೆ.

Add Zee News as a Preferred Source

ಪಾಲಿಟಾನಾ ತನ್ನ ಶ್ರೀಮಂತ ಸಂಸ್ಕೃತಿ, ಅಹಿಂಸೆ ಮತ್ತು ಸಸ್ಯಾಹಾರವನ್ನು ಗೌರವಿಸುವ ಜೈನ ಧರ್ಮಕ್ಕೆ ಹೆಸರುವಾಸಿಯಾಗಿದೆ. ಮಾಂಸ ಮತ್ತು ಮೊಟ್ಟೆ ಸೇರಿದಂತೆ ಎಲ್ಲಾ ಮಾಂಸಾಹಾರಿ ಆಹಾರಗಳನ್ನು 2014 ರಲ್ಲಿ ಇಲ್ಲಿ ನಿಷೇಧಿಸಲಾಯಿತು. ಸುಮಾರು 250 ಜೈನ ಸನ್ಯಾಸಿಗಳು ಉಪವಾಸ ಸತ್ಯಾಗ್ರಹ ಮಾಡಿ, ಸುಮಾರು 250 ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದರು.

ಇದನ್ನೂ ಓದಿ:ಅಯ್ಯೋ ಅಯೋಧ್ಯೆ ರಾಮ.. ನಿನ್ನ ಸನ್ನಿಧಿಯಲ್ಲಿ ಇದೆಂಥಾ ಪಾಪದ ಕೆಲಸ..! ಮಹಿಳಾ ಭಕ್ತರು ಸ್ನಾನ ಮಾಡುತ್ತಿದ್ದಾಗ, ಈ ಪಾಪಿ.. 

ಇದರೊಂದಿಗೆ, ಈ ನಿರ್ಧಾರವು ಜಾರಿಗೆ ಬಂದಿತು. ಅವರ ಶಾಂತಿಯುತ ಪ್ರತಿಭಟನೆ ಫಲ ನೀಡಿತು. ಗುಜರಾತ್ ಸರ್ಕಾರ ಕೂಡ ನಿಷೇಧವನ್ನು ಜಾರಿಗೆ ತರಲು ಒಪ್ಪಿಕೊಂಡಿದೆ. ಇದು ಪಾಲಿಟಾನವನ್ನು ಸಂಪೂರ್ಣ ಸಸ್ಯಾಹಾರಿ ನಗರವನ್ನಾಗಿ ಪರಿವರ್ತಿಸಿದೆ.

ಗುಜರಾತ್ ಸರ್ಕಾರ ಜೈನರ ಆಶಯಗಳಿಗೆ ಸಮ್ಮತಿಸಿದೆ. ಪಾಟಿಲಾನಾದಲ್ಲಿ ಮಾಂಸ ಮತ್ತು ಮೊಟ್ಟೆಗಳ ಮಾರಾಟ ಮತ್ತು ಸೇವನೆಯನ್ನು ಹಾಗೂ ಪ್ರಾಣಿಗಳ ಹತ್ಯೆಯನ್ನು ನಿಷೇಧಿಸುವ ಕಾನೂನನ್ನು ಅಂಗೀಕರಿಸಲಾಗಿದೆ. ಜೈನರ ನಂಬಿಕೆಗಳನ್ನು ಗೌರವಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೈನರು ಎಲ್ಲಾ ಜೀವಿಗಳನ್ನು ಪವಿತ್ರವೆಂದು ಪರಿಗಣಿಸುತ್ತಾರೆ ಮತ್ತು ಪ್ರಾಣಿಗಳಿಗೆ ಹಾನಿ ಮಾಡುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News