ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರದಿಂದ ಎರಡು ದಿನಗಳ ಭೇಟಿಗೆ ಕೇರಳಕ್ಕೆ ಆಗಮಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅವರು ವಯನಾಡಿನಿಂದ 4.31 ಲಕ್ಷ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು.
ರಾಹುಲ್ ಗಾಂಧಿಯವರ ಚುನಾವಣಾ ಸಮಿತಿಯ ಸಂಚಾಲಕ ಮತ್ತು ಸಾಮಾನ್ಯ ಸಂಚಾಲಕರಾದ ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಾಲಿ ರಾಮಚಂದ್ರನ್ ಮತ್ತು ಸದ್ದಾಕ್ಲಿ ಶಿಹಾಬ್ ಥಾಂಗಲ್ ಅವರು ರಾಹುಲ್ ಗಾಂಧಿಯವರ ಭೇಟಿಗಾಗಿ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.ಕ್ಯಾಲಿಕಟ್ ನ ಕರಿಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರು ವಿಶೇಷ ವಿಮಾನದಲ್ಲಿ 1.30 ಗಂಟೆಗೆ ಆಗಮಿಸಿದ್ದಾರೆ.
നിയുക്ത വയനാട് എം.പി, കോൺഗ്രസ്സ് അധ്യക്ഷൻ @RahulGandhi മൂന്ന് ദിവസത്തെ സന്ദർശനത്തിനായി കരിപ്പൂർ വിമാനത്താവളത്തിലെത്തി
Congress President @RahulGandhi arrives at Calicut airport for a three day visit after being elected as the MP from Wayanad. #RahulGandhiWayanad pic.twitter.com/1mffkT2X3n— Rahul Gandhi - Wayanad (@RGWayanadOffice) June 7, 2019
ಕೇರಳದಲ್ಲಿ ಎಡವಣ್ಣ, ಅರೀಕೋಡ್, ಕಾಳಿಕಾವು ಮತ್ತು ನಿಲಂಬೂರ್ನಲ್ಲಿ ಮತದಾರರನ್ನು ಭೇಟಿಯಾಗಲಿದ್ದಾರೆ. ರಸ್ತೆಯ ಮೂಲಕ ಕಲ್ಪೆಟ್ಟಾಗೆ ಪ್ರಯಾಣ ಬೆಳಸಿ ಪಿಡಬ್ಲ್ಯೂಡಿ ವಿಶ್ರಾಂತಿ ಗೃಹಕ್ಕೆ ತೆರಳಿದ್ದಾರೆ. ಶನಿವಾರದಂದು ಅವರು ವಯನಾಡ್ ಸುಲಭೀಕರಣ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಇದೆ ವೇಳೆ ಕಲ್ಪೆಟ್ಟಾ ಪಟ್ಟಣ, ಕಂಬಳಕ್ಕಾಡ್, ಪಣರಾಮಂ, ಮನಾಂತವಡಿ, ಪುಲ್ಪಲ್ಲಿ ಮತ್ತು ಸುಲ್ತಾನ್ ಬಥೆರಿಗಳಲ್ಲಿ ಜನರ ಸ್ವಾಗತವನ್ನು ಸ್ವೀಕರಿಸಲಿದ್ದಾರೆ. ಭಾನುವಾರ ಬೆಳಿಗ್ಗೆ ಕಲ್ಪೆಟ್ಟಾದಿಂದ ಹೊರಟು ವಿಶೇಷ ವಿಮಾನದಲ್ಲಿ ಕಪಿಪುರದಿಂದ ದೆಹಲಿಗೆ ಹಿಂದಿರುಗಲಿದ್ದಾರೆ ಎಂದು ತಿಳಿದುಬಂದಿದೆ.