ನವದೆಹಲಿ: ಎಂಟು ರಾಜ್ಯಗಳಲ್ಲಿರುವ ಹಿಂದೂಗಳಿಗೆ ಅಲ್ಪಸಂಖ್ಯಾತರ ಸ್ಥಾನಮಾನ ಮತ್ತು ಅಲ್ಪಸಂಖ್ಯಾತರ ಸರಿಯಾದ ವ್ಯಾಖ್ಯಾನವನ್ನು ನಿಗದಿಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Supreme Court refuses to entertain a PIL seeking that minority communities be defined on the basis of state-wise population data instead of national data. pic.twitter.com/YEsOrn4rwT
— ANI (@ANI) December 17, 2019
ಬಿಜೆಪಿ ಮುಖಂಡರ ಪರವಾಗಿ ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರು ಈ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯಲ್ಲಿ ಅನೇಕ ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು, ಅಂತಹವರಿಗೆ ಅಲ್ಪಸಂಖ್ಯಾತರಿಗೆ ನೀಡುವ ಪ್ರಯೋಜನಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ, ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ರಚಿಸಲಾಗಿದೆ. ಆದರೆ ಧರ್ಮವು ಎಲ್ಲಾ ರಾಜಕೀಯ ಮತ್ತು ಗಡಿಗಳನ್ನು ಮೀರಿದ್ದು. ಇದಕ್ಕಾಗಿ ಯಾವುದೇ ಮಾರ್ಗಸೂಚಿಗಳನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ.
ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನದ ಬೇಡಿಕೆ ಇಟ್ಟಿದ್ದ ಎಂಟು ರಾಜ್ಯಗಳು-
- ಜಮ್ಮು ಕಾಶ್ಮೀರ
- ಪಂಜಾಬ್
- ಲಕ್ಷದ್ವೀಪ
- ಮಿಜೋರಾಂ
- ನಾಗಾಲ್ಯಾಂಡ್
- ಮೇಘಾಲಯ
- ಅರುಣಾಚಲ ಪ್ರದೇಶ
- ಮಣಿಪುರ