)
Lucknow Airport: ಈಗ ಜನರು ವಿಮಾನ ಪ್ರಯಾಣ ಎಂದರೆ ಬೆಚ್ಚಿಬೀಳುವಂತಾಗಿದೆ. ವಿಮಾನ ಪ್ರಯಾಣದ ಬಗ್ಗೆ ಅನೇಕರಿಗೆ ಆಸಕ್ತಿಯೇ ಕಡಿಮೆಯಾಗಿದ್ದು, ಜೀವಭಯ ಶುರುವಾಗಿದೆ. ಏಕೆಂದರೆ ಸತತವಾಗಿ ಬರುತ್ತಿರುವ ಆಘಾತಕಾರಿ ಸುದ್ದಿಗಳು ಜನರನ್ನು ಮತ್ತು ಪ್ರಯಾಣಿಕರನ್ನು ಭಯಭೀತಗೊಳಿಸುತ್ತಿವೆ. 270ಕ್ಕೂ ಹೆಚ್ಚು ಜನರನ್ನ ಬಲಿ ಪಡೆದ ಅಹಮದಾಬಾದ್ ವಿಮಾನ ಅಪಘಾತದ ಸುದ್ದಿ ಮಾಸುವ ಮುನ್ನವೇ ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನವಾಗಿತ್ತು.
ಕೇದಾರನಾಥದಿಂದ ಗುಪ್ತಕಾಶಿಗೆ ಹೊರಟಿದ್ದ ಹೆಲಿಕಾಪ್ಟರ್ ಗೌರಿಕುಂಡ ಅರಣ್ಯ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ಪತನಗೊಂಡಿತ್ತು. ಈ ದುರ್ಘಟನೆಯಲ್ಲಿ ಪೈಲಟ್, ಮಗು ಸೇರಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಏತನ್ಮಧ್ಯೆ ಜೂನ್ 15ರಂದು ಜರ್ಮನಿಯಿಂದ ಹೈದರಾಬಾದ್ನ ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಲುಫ್ಥಾನ್ಸ ಏರ್ಲೈನ್ಸ್ ವಿಮಾನ LH752ಗೆ ಬಾಂಬ್ ಬೆದರಿಕೆ ಬಂದಿತ್ತು. ಪರಿಣಾಮ ವಿಮಾನವನ್ನು ರೊಮೇನಿಯಾದಿಂದ ಫ್ರಾಂಕ್ಫರ್ಟ್ (ಜರ್ಮನಿ) ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಇದೀಗ ಮತ್ತೊಂದು ವಿಮಾನದಲ್ಲಿ ಉದ್ಭವಿಸಿದ ತಾಂತ್ರಿಕ ಸಮಸ್ಯೆ 250 ಪ್ರಯಾಣಿಕರಿಗೆ ಕೆಲಕಾಲ ಶಾಕ್ ಉಂಟು ಮಾಡಿತ್ತು.
ಲಕ್ನೋದಲ್ಲಿ ವಿಮಾನವೊಂದು ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದು, ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಚಕ್ರದಲ್ಲಿ ಬೆಂಕಿಯ ಕಿಡಿಗಳು ಕಾಣಿಸಿಕೊಂಡು ಹೊಗೆ ಕಂಡುಬಂದಿತ್ತು. ಸೌದಿ ಅರೇಬಿಯಾದ ಹಜ್ ಯಾತ್ರಿಕರು ಸೇರಿದಂತೆ 250 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ವಿಮಾನವನ್ನು ಲಕ್ನೋದಲ್ಲಿ ಇಳಿಸಲಾಯಿತು. ವಿಮಾನ ಇಳಿಯುವಾಗ ಎಡ ಟೈರ್ನಿಂದ ಹೊಗೆ ಹೊರಸೂಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೈಡ್ರಾಲಿಕ್ ವ್ಯವಸ್ಥೆಯಲ್ಲಿನ ದೋಷದಿಂದ ಟೈರ್ ವೈಫಲ್ಯ ಸಂಭವಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Hajj Flight Faces Wheel Glitch At Lucknow Airport; Sparks, Smoke Erupt During Landing.#HajjFlight #LucknowAirport #WheelGlitch
(Video: X) pic.twitter.com/QT0QZ9Sh9c
— Deccan Chronicle (@DeccanChronicle) June 16, 2025
ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಏರ್ಬಸ್ A330-343 ವಿಮಾನವು ರಾತ್ರಿ 10.45ಕ್ಕೆ ಜೆಡ್ಡದಿಂದ ಹೊರಟು ಬೆಳಗ್ಗೆ 6.50ಕ್ಕೆ ಲಕ್ನೋದ ಅಮೌಸಿ ವಿಮಾನ ನಿಲ್ದಾಣದಲ್ಲಿ ಇಳಿಯಿತು. ರನ್ವೇಯಲ್ಲಿ ಇಳಿದ ನಂತರ, ಅದು ರನ್ವೇ ಮೇಲೆ ಚಲಿಸುತ್ತಿದ್ದಾಗ ಎಡ ಟೈರ್ನಿಂದ ಕಿಡಿಗಳು ಮತ್ತು ದಟ್ಟವಾದ ಹೊಗೆ ಹರಡಿತು. ಜಾಗೃತ ಪೈಲಟ್ ತಕ್ಷಣ ವಾಯು ಸಂಚಾರ ನಿಯಂತ್ರಕರಿಗೆ ಮಾಹಿತಿ ನೀಡಿದರು. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸಿಬ್ಬಂದಿ 20 ನಿಮಿಷಗಳ ಕಾಲ ಶ್ರಮಿಸಿದರು. ವಿಮಾನ ರನ್ವೇಯಲ್ಲಿ ಇಳಿಯುವಾಗ ಎಡ ಟೈರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದಾಗ ಬೆಂಕಿ ಕಾಣಿಸಿಕೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಘಟನೆಯಿಂದ ಪ್ರಯಾಣಿಕರು ಕೆಲಕಾಲ ಆತಂಕದಲ್ಲಿದ್ದದ್ದು ಕಂಡುಬಂತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ