ಉತ್ತರ ಪ್ರದೇಶದಲ್ಲಿ ಮದರಸಾಗಳ ವಿರುದ್ಧ ತೆಗೆದುಕೊಳ್ಳಲಾಗುತ್ತಿರುವ ಕ್ರಮದ ಭಾಗವಾಗಿ, ಸೋಮವಾರ, ಶ್ರಾವಸ್ತಿ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದೆ ಎಂದು ಹೇಳಲಾದ 10 ಮದರಸಾಗಳಿಗೆ ಬೀಗ ಜಡಿಯಲಾಗಿದೆ. ಲಖಿಂಪುರ ಖೇರಿ ಜಿಲ್ಲೆಯಲ್ಲಿ ಒಂದು ಮದರಸಾ ಮತ್ತು ಅದಕ್ಕೆ ಹೊಂದಿಕೊಂಡ ಮಸೀದಿಯನ್ನು ಬುಲ್ಡೋಜರ್ ಬಳಸಿ ಕೆಡವಲಾಯಿತು.
ಕಳೆದ ಎರಡು ದಿನಗಳಲ್ಲಿ ಶ್ರಾವಸ್ತಿ ಜಿಲ್ಲೆಯಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ 10 ಅಕ್ರಮ ಮದರಸಾಗಳನ್ನು ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ಸೀಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಜಂಟಿ ತಂಡವು ಮೊಹರು ಮಾಡಿದ ಮದರಸಾಗಳು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದವು. ಪ್ರಸ್ತುತ, ಮದರಸಾಗಳಲ್ಲಿ ಓದುತ್ತಿರುವ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲಾಗುವುದು.
ಇದನ್ನೂ ಓದಿ : ಪಾಕ್ ಮೇಲೆ ಭಾರತದ ದೊಡ್ಡ ಡಿಜಿಟಲ್ ಮುಷ್ಕರ! 16 ಚಾನೆಲ್ಗಳ ಮೇಲೆ ನಿರ್ಬಂಧ... ಶೋಯೆಬ್ ಅಖ್ತರ್ ಅಕೌಂಟ್ ಕೂಡ ಬ್ಲಾಕ್
ಮತ್ತೊಂದೆಡೆ, ಲಖಿಂಪುರ ಖೇರಿ ಜಿಲ್ಲೆಯಲ್ಲಿ ಬುಲ್ಡೋಜರ್ಗಳನ್ನು ಬಳಸಿ ಮದರಸಾ ಮತ್ತು ಮಸೀದಿಯನ್ನು ಕೆಡವಲಾಯಿತು. ಈ ಮದರಸಾ ಮತ್ತು ಮಸೀದಿ ನೇಪಾಳ ಗಡಿಯಲ್ಲಿರುವ ಕೃಷ್ಣನಗರ ಗ್ರಾಮದಲ್ಲಿತ್ತು. ಮದರಸಾ ಮತ್ತು ಮಸೀದಿ ಎರಡನ್ನೂ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಆರೋಪವಿದೆ. ಇದಕ್ಕೂ ಮುಂಚೆಯೇ, 2023 ರಲ್ಲಿ, ಆಡಳಿತವು ಇಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮಸೀದಿ ಮತ್ತು ಮದರಸಾವನ್ನು ಕೆಡವಿತ್ತು. ಆದರೆ ಜನರು ಮತ್ತೆ ಅದೇ ಸ್ಥಳದಲ್ಲಿ ಮಸೀದಿ ಮತ್ತು ಮದರಸಾವನ್ನು ನಿರ್ಮಿಸಿದ್ದರು. ಸೋಮವಾರ ಜಿಲ್ಲಾಡಳಿತ ಮತ್ತು ತಹಸಿಲ್ ಆಡಳಿತವು ಭಾರೀ ಪೊಲೀಸ್ ಪಡೆಯ ಸಮ್ಮುಖದಲ್ಲಿ ಈ ಅಕ್ರಮ ನಿರ್ಮಾಣ ತೆರವು ಕಾರ್ಯಾಚರಣೆ ನಡೆಸಿತು. ಸರ್ಕಾರದ ಈ ಕ್ರಮಕ್ಕೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ ಎನ್ನಲಾಗಿದೆ.
ಕಾನೂನು ಪ್ರಕಾರ ಕಾರ್ಯ ನಿರ್ವಹಿಸುತ್ತಿತುವ ಮದರಸಾಗಳು ಭಯಪಡುವ ಅಗತ್ಯವಿಲ್ಲ:
ಈ ಮಧ್ಯೆ, ಕಾನೂನುಬಾಹಿರವಾಗಿರುವ ಮದರಸಾಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿದೆ, ಕಾನನೂನು ಪ್ರಕಾರ ಕಾರ್ಯ ನಿರ್ವಹಿಸುತ್ತಿರುವ ಮದರಸಾಗಳು ಭಯಪಡುವ ಅಗತ್ಯವಿಲ್ಲ ಎಂದು ಉತ್ತರ ಪ್ರದೇಶದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಓಂ ಪ್ರಕಾಶ್ ರಾಜ್ಭರ್ ಹೇಳಿದ್ದಾರೆ. ಭದ್ರತಾ ದೃಷ್ಟಿಕೋನದಿಂದ ಅಕ್ರಮ ಮದರಸಾಗಳು ಒಳ್ಳೆಯದಲ್ಲ ಎಂದು ರಾಜ್ಭರ್ ಹೇಳಿದರು. ಅಕ್ರಮ ಮದರಸಾಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳ ಪುರಾವೆಗಳು ಕಂಡುಬಂದಿರುವ ಅನೇಕ ಪ್ರಕರಣಗಳು ಈ ಹಿಂದೆ ಬೆಳಕಿಗೆ ಬಂದಿವೆ.
ಇದನ್ನೂ ಓದಿ : 78 ವರ್ಷಗಳ ಹಿಂದೆ ಭಾರತ- ಪಾಕ್ ಗಡಿ ನಿರ್ಧಾರವಾದದ್ದು ಹೇಗೆ? ಕೇವಲ ಇಬ್ಬರು ಅಧಿಕಾರಿಗಳೇ ನಿರ್ಧರಿಸಿ ಬಿಟ್ಟರೇ ಅಟಾರಿ ಬಾಗಾ ಬಾರ್ಡರ್
ದೂರುಗಳು ಬರುತ್ತಿರುವ ಮದರಸಾಗಳ ವಿರುದ್ಧ ನಾವು ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಉತ್ತರ ಪ್ರದೇಶ ಸರ್ಕಾರದ ಸಚಿವ ಡ್ಯಾನಿಶ್ ಆಜಾದ್ ಹೇಳಿದ್ದಾರೆ. ಮಾನದಂಡಗಳನ್ನು ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









