ಥ್ಯಾಂಕ್ಯೂ ನಿತೀಶ್ ಕುಮಾರ್...ನೀವು ಸಿಎಂ ಆಗಿಯೇ ಇರಿ - ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್ ಅವರನ್ನು ಜೆಡಿಯುನಿಂದ ಉಚ್ಚಾಟಿಸಿದ ನಂತರ ಪ್ರತಿಕ್ರಿಯಿಸಿರುವ ಅವರು ನಿತೀಶ್ ಕುಮಾರ್ ಗೆ ಬಿಹಾರದ ಮುಖ್ಯಮಂತ್ರಿಯಾಗಿರಲು ಶುಭ ಹಾರೈಸಿದ್ದಾರೆ.
ನವದೆಹಲಿ: ಪ್ರಶಾಂತ್ ಕಿಶೋರ್ ಅವರನ್ನು ಜೆಡಿಯುನಿಂದ ಉಚ್ಚಾಟಿಸಿದ ನಂತರ ಪ್ರತಿಕ್ರಿಯಿಸಿರುವ ಅವರು ನಿತೀಶ್ ಕುಮಾರ್ ಗೆ ಬಿಹಾರದ ಮುಖ್ಯಮಂತ್ರಿಯಾಗಿರಲು ಶುಭ ಹಾರೈಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ನಡೆದ ಸಂಘರ್ಷದ ಹಿನ್ನಲೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿನ್ನೆ ನಿರ್ಗಮನದ ಸುಳಿವು ನೀಡಿದ್ದರು. ಈಗ ಪಕ್ಷದ ಹಿರಿಯ ನಾಯಕ ಪವನ್ ವರ್ಮಾ ಜೊತೆಗೆ ಪ್ರಶಾಂತ್ ಕಿಶೋರ್ ಅವರನ್ನು ಉಚ್ಚಾಟಿಸಿದ ನಂತರ ಈಗ ಟ್ವೀಟ್ ಮಾಡಿರುವ ಅವರು 'ಥಾಂಕ್ಯೂ ನಿತೀಶ್ ಕುಮಾರ್. ನೀವು ಬಿಹಾರದ ಸಿಎಂ ಆಗಿ ಮುಂದುವರೆಯಿರಿ.ದೇವರು ನಿಮಗೆ ಒಳ್ಳೆಯದು ಮಾಡಲಿ' ಎಂದು ಶುಭ ಹಾರೈಸಿದ್ದಾರೆ.
2018 ರಿಂದ ಜನತಾದಳ ಯುನೈಟೆಡ್ ಉಪಾಧ್ಯಕ್ಷರಾಗಿ ಪ್ರಶಾಂತ್ ಕಿಶೋರ್ ನಿತೀಶ್ ಕುಮಾರ್ ಅವರಿಗೆ ನಂಬರ್ ಟು ಆಗಿದ್ದರು. ಈ ಬೆಳಿಗ್ಗೆ, ಜೆಡಿಯು ಪಕ್ಷದ ಮುಖಂಡರು ಶ್ರೀ ಕಿಶೋರ್ ಅವರನ್ನು ಮಾರಣಾಂತಿಕ ಕೊರೊನಾವೈರಸ್ಗೆ ಹೋಲಿಸುವ ಮೂಲಕ ಟೀಕಿಸಿದ್ದರು. ಜೆಡಿಯು ನಾಯಕ ಅಜಯ್ ಅಲೋಕ್ ಅವರು ಪ್ರಶಾಂತ್ ಕಿಶೋರ್ ಅವರು ವಿಶ್ವಾಸಾರ್ಹವಲ್ಲ" ಎಂದು ಹೇಳಿದ್ದರು.
'ಈ ವ್ಯಕ್ತಿ ನಂಬಲರ್ಹನಲ್ಲ. ಅವನಿಗೆ (ಪ್ರಧಾನಿ ನರೇಂದ್ರ ಮೋದಿ ಜಿ ಮತ್ತು ನಿತೀಶ್ ಜಿ ಅವರ ನಂಬಿಕೆಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಅವರು ಎಎಪಿಗಾಗಿ ಕೆಲಸ ಮಾಡುತ್ತಾರೆ, ರಾಹುಲ್ ಗಾಂಧಿಯೊಂದಿಗೆ ಮಾತನಾಡುತ್ತಾರೆ, ಮಮತಾ ದೀದಿ (ಮಮತಾ ಬ್ಯಾನರ್ಜಿ) ಅವರೊಂದಿಗೆ ಕುಳಿತುಕೊಳ್ಳುತ್ತಾರೆ. ಅವರನ್ನು ಯಾರು ನಂಬುತ್ತಾರೆ? ಈ ಕೊರೋನವೈರಸ್ ನಮ್ಮನ್ನು ತೊರೆಯುತ್ತಿರುವುದು ಸಂತೋಷವಾಗಿದೆ, ಅವರು ಎಲ್ಲಿ ಬೇಕಾದರೂ ಹೋಗಬಹುದು "ಎಂದು ಪಕ್ಷದ ಮಾಜಿ ವಕ್ತಾರ ಅಜಯ್ ಅಲೋಕ್ ವಾಗ್ದಾಳಿ ನಡೆಸಿದ್ದರು.
ನಿತೀಶ್ ಕುಮಾರ್ ಅವರು ನಿನ್ನೆ ಕಿಶೋರ್ ಅವರು ಬೇಕಾದರೆ ಪಕ್ಷ ತೊರೆಯಬಹುದು ಅಥವಾ ಅವರು ಪಕ್ಷಕ್ಕೆ ಬದ್ದರಾಗಿರಬೇಕಾಗುತ್ತದೆ ಎಂದು ಹೇಳಿದ್ದರು.