'ಬಿಜೆಪಿಗೆ ಅಲ್ಪ ಅಂತರದ ಬಹುಮತ' ಎಂದು ಭವಿಷ್ಯ ನುಡಿದ 10ನೇ ಚುನಾವಣೋತ್ತರ ಸಮೀಕ್ಷೆ..!

243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ 125 ರಿಂದ 145 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವೋಟ್ ವೈಬ್ ಭವಿಷ್ಯ ನುಡಿದಿದೆ

Written by - Manjunath Naragund | Last Updated : Nov 12, 2025, 07:26 PM IST
  • ಹರಿಯಾಣದಲ್ಲಿ ಸರ್ಕಾರ ಉಳಿಸಿಕೊಂಡಿದೆ
  • ದೆಹಲಿಯಲ್ಲಿ ಆಪ್‌ ಸರ್ಕಾರವನ್ನು ಅಧಿಕಾರದಿಂದ ಕಿತ್ತೆಸೆದಿದೆ
  • ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದೆ
'ಬಿಜೆಪಿಗೆ ಅಲ್ಪ ಅಂತರದ ಬಹುಮತ' ಎಂದು ಭವಿಷ್ಯ ನುಡಿದ 10ನೇ ಚುನಾವಣೋತ್ತರ ಸಮೀಕ್ಷೆ..!

Add Zee News as a Preferred Source

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಸತತ 10ನೇ ಚುನಾವಣೋತ್ತರ ಸಮೀಕ್ಷೆ ಕೂಡ ಸ್ಪಷ್ಟ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿದೆ.ಆದರೆ ಈ ಬಾರಿ ಅತ್ಯಂತ ಕಡಿಮೆ ಅಂತರದೊಂದಿಗೆ ಗೆಲುವು ಸಾಧಿಸಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ..! ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ; ಸಿಎಂ ರಾಜೀನಾಮೆಗೆ ಆಗ್ರಹ

ವೋಟ್‌ ವೈಬ್‌ ಸಂಸ್ಥೆಯ ಎಕ್ಸಿಟ್‌ ಪೋಲ್‌ ಪ್ರಕಾರ 243 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಿರುವ 122 ಸ್ಥಾನಗಳನ್ನು ಎನ್‌ಡಿಎ 125-145 ಸ್ಥಾನಗಳನ್ನು ಗೆಲ್ಲಲಿದೆ.ಮಹಾಘಟಬಂಧನ್‌ಗೆ 95-115 ಸ್ಥಾನಗಳು ಮಾತ್ರ ಸಿಗಲಿವೆ ಎಂದು ಸಮೀಕ್ಷೆ ಹೇಳಿದೆ.ಪ್ರಶಾಂತ್‌ ಕಿಶೋರ್‌ ಅವರ ಜನ್‌ ಸುರಾಜ್‌ ಪಕ್ಷಕ್ಕೆ ಖಾತೆ ತೆರೆಯದಿರುವ ಸಾಧ್ಯತೆಯಿದ್ದು, ಗರಿಷ್ಠ 2 ಸ್ಥಾನಗಳು ಬರಬಹುದು ಎಂದು ಅಂದಾಜಿಸಲಾಗಿದೆ.

ಮಂಗಳವಾರದಂದು ಬಿಡುಗಡೆಯಾದ 9 ಎಕ್ಸಿಟ್‌ ಪೋಲ್‌ಗಳಲ್ಲಿ ಕನಿಷ್ಠ ಅಂತರವನ್ನು ಚಾಣಕ್ಯ ಸ್ಟ್ರಾಟಜೀಸ್‌ ತೋರಿಸಿದ್ದು, ಎನ್‌ಡಿಎಗೆ 130-138 ಸ್ಥಾನಗಳು ಬರುವ ಸಾಧ್ಯತೆ ಎಂದಿತ್ತು.ಪೀಪಲ್ಸ್‌ ಇನ್‌ಸೈಟ್‌ ಮತ್ತು ಪೀಪಲ್ಸ್‌ ಪಲ್ಸ್‌ ಸಂಸ್ಥೆಗಳು ಕನಿಷ್ಠ 133 ಸ್ಥಾನ ಬರಲಿವೆ ಎಂದು ಹೇಳಿವೆ.ಮ್ಯಾಟ್ರೈಜ್‌ ಸಂಸ್ಥೆಯೇ ಅತ್ಯಧಿಕ ಅಂತರ ತೋರಿಸಿದ್ದು, 147-167 ಸ್ಥಾನಗಳ ನಡುವೆ ಎನ್‌ಡಿಎ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ (ಇದು ಮೂರು-ನಾಲ್ಕನೇ ಒಂದು ಭಾಗದ ಬಹುಮತಕ್ಕಿಂತ ಹೆಚ್ಚು).ಎಲ್ಲಾ ಎಕ್ಸಿಟ್‌ ಪೋಲ್‌ಗಳ ಸಂಯೋಜಿತ ಲೆಕ್ಕಾಚಾರದಲ್ಲಿ ಎನ್‌ಡಿಎಗೆ 146 ಸ್ಥಾನಗಳು, ಮಹಾಘಟಬಂಧನ್‌ಗೆ 91 ಸ್ಥಾನಗಳು ಮತ್ತು ಜನ್‌ ಸುರಾಜ್‌ ಪಕ್ಷಕ್ಕೆ ಕೇವಲ 1 ಸ್ಥಾನ ಬರುವ ನಿರೀಕ್ಷೆಯಿದೆ.

ಇದನ್ನೂ ಓದಿ: ತಿಂಗಳಿಗೆ 11,000 ರೂ. ಪಿಂಚಣಿ : ಹಿರಿಯ ನಾಗರಿಕರಿಗೆ ಜಾಕ್‌ಪಾಟ್

ಒಂದು ವೇಳೆ ಸಮೀಕ್ಷೆ ರೀತಿಯಲ್ಲಿಯೇ ಫಲಿತಾಂಶ ಬಂದಲ್ಲಿ ಲೋಕಸಭಾ ಚುನಾವಣೆ ನಂತರ ಬಿಜೆಪಿ ಮತ್ತು ಎನ್‌ಡಿಎಗೆ ನಾಲ್ಕನೇ ದೊಡ್ಡ ಉತ್ತೇಜನ ಸಿಗಲಿದೆ.ಈಗಾಗಲೇ ಹರಿಯಾಣ, ದೆಹಲಿ, ಮತ್ತು ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಿದೆ.ಈಗ ಬಿಹಾರದಲ್ಲೂ ಎನ್‌ಡಿಎ ಗೆಲುವು ಸಾಧಿಸಿದರೆ, ಅದು ಪಕ್ಷಕ್ಕೆ ಮತ್ತಷ್ಟು ಬಲವನ್ನು ತುಂಬಲಿದೆ.

ಬಿಹಾರದಲ್ಲಿ ಜೆಡಿಯು ನಾಯಕ ನಿತೀಶ್‌ ಕುಮಾರ್‌ 20 ವರ್ಷಗಳಿಂದ (9 ತಿಂಗಳ ವಿರಾಮವನ್ನು ಬಿಟ್ಟರೆ) ಮುಖ್ಯಮಂತ್ರಿಯಾಗಿದ್ದು, ಆದರೆ ಈ ಬಾರಿ ಅವರಿಗೆ anti-incumbency ದೊಡ್ಡ ಪ್ರಶ್ನೆಯಾಗಿತ್ತು.ಆದರೆ ಈಗ ಎಕ್ಸಿಟ್‌ ಪೋಲ್‌ಗಳು ಆಡಳಿತ ವಿರೋಧಿ ಅಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿಲ್ಲ ಎಂದು ತೋರಿಸಿರುವುದು ಸ್ವಲ್ಪ ನಿಟ್ಟುಸಿರುವ ಬಿಡುವಂತೆ ಮಾಡಿದೆ.ಎನ್‌ಡಿಎ ವಿರೋಧಿ ಮತಗಳು ಮಹಾಘಟಬಂಧನ್‌ ಮತ್ತು ಜನ್‌ ಸುರಾಜ್‌ ಪಕ್ಷಗಳ ನಡುವೆ ವಿಭಜನೆಯಾಗಿರುವುದು ಆಡಳಿತ ಮೈತ್ರಿಕೂಟಕ್ಕೆ ಅನುಕೂಲವಾಗಿದೆ ಎಂದು ಪೋಲ್‌ಗಳು ಸೂಚಿಸುತ್ತವೆ.ಆದರೆ ಚುನಾವಣೋತ್ತರ ಸಮೀಕ್ಷೆಗಳು ಎನ್ಡಿಎ ಮೈತ್ರಿಕೂಟದ ಪರವಾಗಿ ಭವಿಷ್ಯ ನುಡಿದಿದ್ದರೂ ಸಹಿತ ನಿಜವಾದ ಫಲಿತಾಂಶದ ಚಿತ್ರಣ ಶುಕ್ರವಾರ ತಿಳಿಯಲಿದೆ.

ಸೂಚನೆ: ಚುನಾವಣೋತ್ತರ ಸಮೀಕ್ಷೆಗಳು ನೈಜ ಫಲಿತಾಂಶವನ್ನು ಪ್ರತಿಫಲಿಸುವುದಿಲ್ಲ ಹಾಗಾಗಿ, ನವೆಂಬರ್ 14 ರಂದೇ ನಿಜವಾದ ಫಲಿತಾಂಶ ಪ್ರಕಟವಾಗಲಿದೆ.

About the Author

Trending News