)
ಪ್ರಕಾಶಂ ಜಿಲ್ಲೆ: ಇತ್ತೀಚಿಗೆ ಸಣ್ಣ ಪುಟ್ಟ ಮನಸ್ಥಾಪಗಳಿಗೆ ಆತ್ಮಹತ್ಯೆಗೆ ಶರಣಾಗುವ ಪ್ರವೃತ್ತಿ ಹೆಚ್ಚಾಗುತ್ತಿದೆ, ಈಗ ಇದಕ್ಕೆ ಪೂರಕ ಎನ್ನುವಂತೆ ಹೆಂಡತಿ ಚಿಕನ್ ಬೇಯಿಸಲಿಲ್ಲ ಎಂದು ಗಂಡನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಯೆರ್ರಗೊಂಡಪಲೆಂ ಮಂಡಲದ ಗೊಲ್ಲವಿಡಿಪಿ ಗ್ರಾಮದಲ್ಲಿ ನಡೆದಿದೆ.
ಭಾನುವಾರದಂದು ತನ್ನ ಹೆಂಡತಿಗೆ ಕೋಳಿ ಬೇಯಿಸಲು ಕೇಳಿದ್ದಾನೆ, ಆದರೆ ಕೋಪಗೊಂಡ ಹೆಂಡತಿ ತನ್ನ ಗಂಡನ ಮೇಲೆ ಚಟ್ನಿ ಎಸೆದಿದ್ದಾಳೆ.ಇದರಿಂದ ತೀವ್ರ ನೊಂದ ಪತಿ ಒಂದು ಕ್ಷಣವೂ ಯೋಚಿಸದೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಎಸ್ಐ ಪಿ. ಚೌಡಯ್ಯ ನೀಡಿದ ವಿವರಗಳ ಪ್ರಕಾರ ಪ್ರಕಾಶಂ ಜಿಲ್ಲೆಯ ಯೆರ್ರಗೊಂಡಪಲೆಂ ಮಂಡಲದ ಗೊಲ್ಲವಿಡಿಪಿ ಗ್ರಾಮದ ನಿವಾಸಿ ಲಕ್ಷ್ಮಿನಾರಾಯಣ (25) ಮತ್ತು ಅವರ ಪತ್ನಿ ಕಾಪುರಂನಲ್ಲಿ ವಾಸಿಸುತ್ತಿದ್ದಾರೆ. ಭಾನುವಾರ, ಲಕ್ಷ್ಮಿನಾರಾಯಣ ಅವರ ಪತ್ನಿಯೊಂದಿಗೆ ಜಗಳವಾಡಿದ್ದರು. ಅವರ ಪತ್ನಿ ಪ್ರತಿದಿನ ಚಟ್ನಿ ಅನ್ನ ಮಾತ್ರ ನೀಡುತ್ತಿದ್ದರು ಎನ್ನಲಾಗಿದೆ.ಹಾಗಾಗಿ ಭಾನುವಾರವಾಗಿದ್ದರಿಂದ ಚಿಕನ್ ತಿನ್ನಲು ಬಯಸಿದ್ದ ವ್ಯಕ್ತಿ ಅದನ್ನು ಬೇಯಿಸಲು ಬೇಡಿಕೆ ಇಟ್ಟಿದ್ದಾನೆ, ಆದರೆ ಇದಕ್ಕೆ ಆಕೆ ನಿರಾಕರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಲಕ್ಷ್ಮಿನಾರಾಯಣ ಮನನೊಂದು ಹೊಲಕ್ಕೆ ಹೋಗಿ ಅಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ನಡೆಸಿದ್ದಾರೆ.ಈಗ ಮೃತರ ತಂದೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಎಸ್ಐ ಪಿ. ಚೌಡಯ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.