'ನೀವು ನಮ್ಮನ್ನು ತಳ್ಳಬೇಡಿ, ಅರ್ಥ ಮಾಡಿಕೊಳ್ಳಿ ಸರ್'-ಮಾಧ್ಯಮದವರಲ್ಲಿ ಟಿಎಂಸಿ ಸಂಸದೆ ವಿನಂತಿ

 ನೂತನವಾಗಿ ಚುನಾಯಿತರಾದ ತೃಣಮೂಲ ಕಾಂಗ್ರೆಸ್ ಸಂಸತ್ ಸದಸ್ಯರಾದ ನುಸ್ರತ್ ಜಹಾನ್ ರುಹಿ ಮತ್ತು ಮಿಮಿ ಚಕ್ರವರ್ತಿ ಅವರು ಮಾಧ್ಯಮದವರು ತಮ್ಮ ಹೇಳಿಕೆ ಮತ್ತು ಫೋಟೋ ಕೇಳಿದ್ದಕ್ಕೆ ಸಂಸತ್ತಿನ ಹೊರಗೆ ತಾಳ್ಮೆ ಕಳೆದುಕೊಂಡಿದ್ದಾರೆ. 

Last Updated : Jun 25, 2019, 04:47 PM IST
 'ನೀವು ನಮ್ಮನ್ನು ತಳ್ಳಬೇಡಿ, ಅರ್ಥ ಮಾಡಿಕೊಳ್ಳಿ ಸರ್'-ಮಾಧ್ಯಮದವರಲ್ಲಿ ಟಿಎಂಸಿ ಸಂಸದೆ ವಿನಂತಿ    title=
photo:ANI

ನವದೆಹಲಿ: ನೂತನವಾಗಿ ಚುನಾಯಿತರಾದ ತೃಣಮೂಲ ಕಾಂಗ್ರೆಸ್ ಸಂಸತ್ ಸದಸ್ಯರಾದ ನುಸ್ರತ್ ಜಹಾನ್ ರುಹಿ ಮತ್ತು ಮಿಮಿ ಚಕ್ರವರ್ತಿ ಅವರು ಮಾಧ್ಯಮದವರು ತಮ್ಮ ಹೇಳಿಕೆ ಮತ್ತು ಫೋಟೋ ಕೇಳಿದ್ದಕ್ಕೆ ಸಂಸತ್ತಿನ ಹೊರಗೆ ತಾಳ್ಮೆ ಕಳೆದುಕೊಂಡಿದ್ದಾರೆ. 

ಆರಂಭದಲ್ಲಿ ಫೋಟೋಗೆ ಪೋಸ್ ನೀಡಿದರಾದರು ನಂತರ ಮಾಧ್ಯಮದವರ ಗದ್ದಲದಿಂದಾಗಿ ಏಕಾಏಕಿ ತಾಳ್ಮೆ ಕಳೆದುಕೊಂಡಿದ್ದಾರೆ. ಒಂದು ಹಂತದಲ್ಲಿ, ನುಸ್ರತ್ ಜಹಾನ್ ತನ್ನ ಸ್ನೇಹಿತೆ ಮಿಮಿ ಚಕ್ರವರ್ತಿಯ ಸುತ್ತಲೂ ತನ್ನ ತೋಳನ್ನು ರಕ್ಷಣಾತ್ಮಕವಾಗಿ ಇಟ್ಟುಕೊಂಡು ಮಾಧ್ಯಮ ವ್ಯಕ್ತಿಗಳನ್ನು ಹಿಂದೆ ಸರಿಯುವಂತೆ ಕೇಳಿಕೊಂಡರು. 'ಆಪ್ ಧಕ್ಕಾ ನಹಿನ್ ಮಾರ್ ಸಕ್ತೇ ಸರ್, ಸಮಾಜಿಯೆ ಬಾತ್ ಕೋ (ನೀವು ನಮ್ಮನ್ನು ತಳ್ಳಲು ಸಾಧ್ಯವಿಲ್ಲ ಸರ್, ದಯವಿಟ್ಟು ಅರ್ಥಮಾಡಿಕೊಳ್ಳಿ)' ಎಂದು ಜಹಾನ್ ಹೇಳಿದರು.

ನೂತನ ಸಂಸದರಿಬ್ಬರು ತಮ್ಮ ವಾಹನಗಳ ಕಡೆ ಸಾಗಲು ಭದ್ರತಾ ವ್ಯಕ್ತಿಗಳ ಸಹಾಯವನ್ನು ತೆಗೆದುಕೊಳ್ಳಬೇಕಾಯಿತು. ನಂತರ ಅವರು ಮಾಧ್ಯಮ ವ್ಯಕ್ತಿಗಳಿಗೆ ಸೂಕ್ತ ಸ್ಥಳದಲ್ಲಿ ನಿಂತು ಫೋಟೋ ಕ್ಲಿಕ್ ಮಾಡುವಂತೆ ಕೇಳಿದರು. ಮೊದಲ ಬಾರಿಗೆ ಸಂಸತ್ ಸದಸ್ಯರಾಗಿರುವ  ಜಹಾನ್ ಮತ್ತು ಚಕ್ರವರ್ತಿ ಈ ವರ್ಷ ರಾಜಕೀಯಕ್ಕೆ ಧುಮುಕಿದರು. ಟರ್ಕಿಯಲ್ಲಿ ಜಹಾನ್ ಅವರ ಮದುವೆ ಸಮಾರಂಭವಿದ್ದಿದ್ದರಿಂದಾಗಿ ಈ ತಿಂಗಳ ಆರಂಭದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ತಪ್ಪಿಸಿಕೊಂಡಿದ್ದರು.

Trending News