)
ಕಲಿಯುಗದಲ್ಲಿ ಆಸ್ತಿ ಹಣ ಅಂತಸ್ತಿಗಾಗಿ ಏನೂ ಬೇಕಾದರೂ ಆಗಬಹುದು.ಹೆತ್ತವರನ್ನು ಒಡಹುಟ್ಟಿದವರನ್ನೂ ಬಿಡೋಲ್ಲ ಈ ದುರಾಸೆ. ಇದೇ ರೀತಿಯ ಪ್ರಕರಣ ಕೋಲಾರದಲ್ಲಿ ನಡೆದಿದೆ.
ಹೌದು ಆಸ್ತಿ ಗಾಗಿ ಯಾವುದೇ ರೀತಿಯ ಸಂಬಂಧಿಗಳಾದರೂ ಸಹ ಲೆಕ್ಕವಿಲ್ಲ ಎನ್ನುವಂತಾಗಿದೆ.ಇಲ್ಲೊಬ್ಬ ಪಾಪಿ ಆಸ್ತಿ ಗಾಗಿ ತನ್ನ ಸ್ವಂತ ಅಣ್ಣನನ್ನೇ ಕೊಲೆ ಮಾಡಿದ್ದಾನೆ. ಹುಟ್ಟಿನಿಂದ ಜೊತೆಯಲ್ಲಿಯೇ ಆಡುತ್ತಾ ಬೆಳೆದವರು ದೊಡ್ಡವರಾದ ಮೇಲೆ ದಾಯಾದಿಗಳಾಗುತ್ತಾರೆ ಎಂಬ ಗಾದೆ ಇಲ್ಲಿ ಅಕ್ಷರಷಹ ನಿಜವಾಗಿದೆ.
ಇದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ರಾಮಾಪುರ ಗ್ರಾಮ. ಗ್ರಾಮದ ಮುನಿವೆಂಕಟಪ್ಪ ಎಂಬುವರ ಪುತ್ರ ಮುನಿರಾಜು ತನ್ನ ಒಡಹುಟ್ಟಿದ ಅಣ್ಣ ವೆಂಕಟಾ ಚಲಪತಿಯನ್ನ ಬರ್ಬರವಾಗಿ ಕೊಲೆ ಮಾಡಿದ್ದು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾನೆ.ಕಳೆದ ಕೆಲ ತಿಂಗಳುಗಳಲ್ಲಿ ಆಗಾಗ ಅಣ್ಣ ತಮ್ಮ ನಡುವೆ ಆಸ್ತಿ ವಿಚಾರವಾಗಿ ವೈಮನಸ್ಯ ಇತ್ತು. ಪಿತ್ರಾರ್ಜಿತ ಆಸ್ತಿಯನ್ನು ಪಾಲು ಮಾಡಿಕೊಳ್ಳುವ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು. ಆದರೆ ಇಂದು ಬೆಳ್ಳಂಬೆಳ್ಳಿಗ್ಗೆ ಆರು ಗಂಟೆಯ ಸಮಯದಲ್ಲಿ ತಮ್ಮ ಕುರಿಗಳ ಶೆಡ್ ನಲ್ಲಿ ಇಬ್ಬರ ನಡುವೆ ಜಗಳ ಆರಂಭವಾಗಿದೆ.
ಏಕಾ ಏಕಿ ಜಗಳ ವಿಕೋಪಕ್ಕೆ ಹೋಗಿದೆ.ಮುನಿರಾಜು ಒಡಹುಟ್ಟಿದ ಅಣ್ಣನನ್ನು ಕೊಚ್ಚಿದ್ದಾನೆ.ಮುಖ ತಲೆ ಎಲ್ಲೆಂದರಲ್ಲಿ ಮಚ್ಷಿನಿಂದ ಕೊಚ್ಚಿ ಕೊಲೆ ಮಾಡಿ ಮುಗಿಸಿದ್ದಾನೆ.
ಇದನ್ನೂ ಓದಿ : ಮೀಸಲಾತಿ ವರ್ಗಕ್ಕೆ ಬೋವಿ, ಲಂಬಾಣಿ, ಬಲಗೈ ವಿರೋಧ
ರಾಮಾಪುರದ ಮುನಿವೆಂಕಟಪ್ಪರಿಗೆ ನಾಲ್ವರು ಮಕ್ಕಳು. ಅವರಲ್ಲಿ ಹಿರಿಯ ಪುತ್ರ ಕೊಲೆಯಾದ ವೆಂಕಟಾಚಲಪತಿ.ಈ ಆರೋಪಿ ಮುನಿರಾಜು ಎರಡನೇ ಎರಡನೇ ಪುತ್ರ, ಜೊತೆಗೆ ಇಬ್ಬರು ಹೆಣ್ಣು ಮಕ್ಕಳು ಸಹ ಇದ್ದಾರೆ. ಆಸ್ತಿಗಾಗಿ ನಾಲ್ವರಲ್ಲಿ ಇದ್ದ ವ್ಯಾಜ್ಯ ಕೊಲೆವರೆಗೆ ತಲುಪಿದೆ. ಹಿರಿಯ ಪುತ್ರ ಕೊಲೆಯಾದ ವೆಂಕಟಾಚಲಪತಿ ಈಗಾಗಲೇ ಈ ಮುನಿರಾಜುಗೆ ಮುವತ್ತೈದು ಲಕ್ಷ ಹಣವನ್ನ ಸಹ ನೀಡಿದ್ದಾರೆ. ಆದರೆ ಇದಷ್ಟು ಸಾಲದು.ಆಸ್ತಿ ಯಲ್ಲಿ ನನಗೆ ಇನ್ನೂಪಾಲು ಬರಬೇಕು ಎಂಬುದು ಆರೋಪಿಯ ವಾದ. ಹಾಗಾಗಿಯೇ ಇಂದು ಅಣ್ಣನೊಂದಿಗೆ ಜಗಳಕ್ಕಿಳಿದಿದ್ದ ಮುನಿರಾಜು ಮುಂಜಾನೆಯೇ ಅಣ್ಣನನ್ನು ಕೊಂದುಹಾಕಿದ್ದಾನೆ.
ವೆಂಕಟಚಲಪತಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರು. ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿ ಕೊಂಡಿದ್ದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರಪರಿಚಿತ ಮತ್ತು ಜನಾನುರಾಗಿಯೂ ಆಗಿದ್ದವರು. ಆದರೆ ಸ್ವಂತ ಸಹೋದರನ ಆಸ್ತಿ ದಾಹಕ್ಕೆ ಕೊಲೆಯಾಗಿದ್ದಾರೆ.
ಇದನ್ನೂ ಓದಿ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ೯೩ ನವಜೋಡಿಗಳು