)
ಕಣ್ಣಾಡಿಸಿದ ಕಡೆಯಲ್ಲ ಬರಿ ಬೂದಿಯೇ. ಸುಟ್ಟು ಕರಕಲಾಗಿರುವ ಕಬ್ಬು. ಕಬ್ಬನ್ನ ತೆರವು ಮಾಡುತ್ತಾ ಶಪಿಸುತ್ತಿರುವ ಅನ್ನದಾತ. ಈ ಎಲ್ಲ ದೃಶ್ಯ ಕಂಡು ಬಂದಿದ್ದು, ಗಡಿ ನಾಡು ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಮಲಾರಪಾಳ್ಯದಲ್ಲಿ. ವೈಯಕ್ತಿಕ ದ್ವೇಷಕ್ಕೆ ಹೊಟ್ಟೆ ಕಿಚ್ಚಿಗೆ ಸ್ವಂತ ಚಿಕ್ಕಪ್ಪನ ಮಗನ ಕಬ್ಬಿನ ಗದ್ದೆ ಶಿವರುದ್ರಪ್ಪ ಎಂಬಾತ ಬೆಂಕಿ ಹಚ್ಚಿದ್ದು ಬರೋಬ್ಬರಿ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಟಾವಿಗೆ ಬಂದಿದ್ದ ಕಬ್ಬಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದದ್ದಾನೆ. ಒಂದೂವರೆ ಎಕರೆ ಕಬ್ಬು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಶಿವರುದ್ರಪ್ಪ ಹಾಗೂ ದೊರೆಸ್ವಾಮಿ ಚಿಕ್ಕಪ್ಪ ಹಾಗೂ ದೊಡ್ಡಪ್ಪನ ಮಕ್ಕಳು. ಇಬ್ಬರ ಜಮೀನು ಕೂಡಾ ಅಕ್ಕ ಪಕ್ಕದಲ್ಲೇ ಇದೆ. ಇವರ ದೊರೆ ಸ್ವಾಮಿಯವರ 2 ಎಕರೆ ಜಮೀನನ್ನ ಕಬ್ಜ ಮಾಡಲು ಶಿವರುದ್ರಪ್ಪ ಹಾಗೂ ಅವರ ಕುಟುಂಬಸ್ಥರು ಯತ್ನಿಸುತ್ತಿದ್ದಾರೆ ಎನ್ನುವ ವಿಷಯಕ್ಕೆ ಪದೇ ಪದೆ ಜಮೀನಿನ ಬಳಿ ಕ್ಯಾತೆ ತೆಗೆಯೋದು ಗಲಾಟೆ ಮಾಡುವುದು ಮಾಡುತ್ತಿದ್ದರು. ಅದೇ ರೀತಿ ನಿನ್ನೆ ಮಧ್ಯಾಹ್ನ ಕಬ್ಬಿನ ಬೆಳೆಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆಂದು ಜಮೀನಿನ ಮಾಲೀಕ ದೊರೆಸ್ವಾಮಿಯವರ ಆರೋಪ.
ಇದನ್ನೂ ಓದಿ : ಚಳ್ಳಕೆರೆಯ ನಿವಾಸ ಸೇರಿ 16ಕ್ಕೂ ಹೆಚ್ಚು ಜಾಗಗಳಲ್ಲಿ ದಾಳಿ
ಸದ್ಯ ಯಳಂದೂರು ಪೊಲೀಸ್ ಠಾಣೆಗೆ ತೆರಳಿ ಜಮೀನಿನ ಮಾಲೀಕ ಶಿವರುದ್ರಪ್ಫರ ಮೇಲೆ ದೂರು ನೀಡಿದ್ದಾರೆ. ಏನೇ ದ್ವೇಷ ಇದ್ದರೂ ಬೆಳೆ ಮೇಲೆ ಹಗೆ ತೀರಿಸಿಕೊಂಡಿದ್ದು ನಿಜಕ್ಕೂ ದುರಂತವೇ ಸರಿ.
ಇದನ್ನೂ ಓದಿ : RCB ದುರಂತದ ಬಗ್ಗೆ ಉತ್ತರ ನೀಡಿದ್ದ ಗೃಹ ಸಚಿವ