)
ಬೆಂಗಳೂರು : ನಗರದಲ್ಲಿ ಎಲ್ಲೆಂದರಲ್ಲಿ ರಸ್ತೆ ಗುಂಡಿ ಬಿದ್ದಿದೆ. ಗುಂಡಿ ಮುಚ್ಚಲು ಮೇಲಿಂದಮೇಲೆ ಗಡವು ನೀಡಿದ್ರು ಕೆಲಸ ಮಾತ್ರ ಆಗುತ್ತಿಲ್ಲ. ಹೀಗಾಗಿ ಇದನ್ನೇ ಅಸ್ತ್ರವಾಗಿ ಬಳಸಲು ವಿಪಕ್ಷ ಬಿಜೆಪಿ ಮುಂದಾಗಿದೆ. ಇಂದು ವಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಸಭೆ ನಡೆಸಿ, ಪ್ರತಿ ವಿಧಾನಸಭಾಕ್ಷೇತ್ರದಲ್ಲಿ ರಸ್ತೆ ಗುಂಡಿ ಬಿದ್ದ ಸ್ಥಳಕ್ಕೆ ಭೇಟಿ ನೀಡಲು ಪ್ಲಾನ್ ಮಾಡಿದೆ. ಭೇಟಿ ವೇಳೆ ಗುಂಡಿ ಬಗ್ಗೆ ವಿಭಿನ್ನವಾಗಿ ಪ್ರತಿಭಟಿಸಲು ಉದ್ದೇಶಿಸಲಾಗಿದೆ.
ಸಂಸದರು, ಶಾಸಕರು, ಕೇಂದ್ರ ಸಚಿವರು, ಮಾಜಿ ಕಾರ್ಪೋಟರ್ ಎಲ್ಲರೂ ಕ್ಷೇತ್ರದಲ್ಲಿ ಗುಂಡಿ ಬಿದ್ದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೆ ಕಸದ ಸಮಸ್ಯೆ ಬಗ್ಗೆಯೂ ಈ ವೇಳೆ ಬೆಳಕು ಚೆಲ್ಲುವ ಯತ್ನ ಮಾಡಲಿದ್ದಾರೆ. ನವೆಂಬರ್ 6 ರಿಂದ ಒಂದು ವಾರ ಈ ಹೋರಾಟ ನಡೆಯಲಿದೆ. ಆ ಮೂಲಕವಾಗಿ ರಾಜ್ಯ ಸರ್ಕಾರದ ವೈಫಲ್ಯವನ್ನ ಜನರಿಗೆ ತೋರಿಸುವ ಕೆಲಸ ಬಿಜೆಪಿ ಮಾಡಲಿದೆ.
ಇಂದಿನ ಬಿಜೆಪಿ ಸಭೆಗೆ ಪ್ರಮುಖರನ್ನೇ ಆಹ್ವಾನಸಿದಿರುವುದು ಬಿಜೆಪಿಗೇ ಮುಳುವಾಗಿದೆ. ಪಕ್ಷದಲ್ಲಿ ಈ ಬಗ್ಗೆ ಅಸಮಾಧಾನ ಎದ್ದಿದೆ. ಇದನ್ನೆಲ್ಲ ಸರಿಪಡಿಸಿ, ರಾಜ್ಯ ಸರ್ಕಾರದ ವಿರುದ್ಧ ತೊಡೆ ತಟ್ಟಲು ಕಮಲಪಾಳಯ ಹರಸಾಹಸ ಪಡುತ್ತಿದೆ.