ಬುರ್ಖಾ ವೀಡಿಯೋ ವೈರಲ್ ಕೇಸ್: ತನಿಖಾ ವರದಿ ಸಲ್ಲಿಕೆ

Burka Video Viral Case: ತನಿಖೆ ವರದಿ ಗಮನಿಸಿದರೆ ಹೆಚ್ಚುವರಿ ತನಿಖೆ ಅವಶ್ಯಕತೆ ಇದೆ, ಇಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು ಸಭೆ ಬಳಿಕ ಹೆಚ್ಚುವರಿ ತನಿಖೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ, ಸಭೆಯಲ್ಲಿ ಪ್ರಕರಣದ ಬಗ್ಗೆ ನಿರ್ಧಾರ ಆಗಲಿದೆ - ಡಿಡಿಪಿಐ ರಾಮಚಂದ್ರರಾಜೇ ಅರಸ್  

Written by - Yashaswini V | Last Updated : Mar 26, 2025, 03:39 PM IST
  • ವೈರಲ್ ವೀಡಿಯೋ ಸಂಬಂಧಿಸಿದಂತೆ ಚಾಮರಾಜನಗರ ಬಿಇಒ ಹನುಮಂತಶೆಟ್ಟಿ ತನಿಖೆ ನಡೆಸಿ ವರದಿಯನ್ನು ಸಲ್ಲಿಸಿದ್ದಾರೆ‌.
  • ವಿದ್ಯಾರ್ಥಿನಿಯು ಖಾಸಗಿ ಶಾಲೆಯ ವಿದ್ಯಾರ್ಥಿನಿ ಎಂಬುದು ಖಚಿತವಾಗಿದೆ.
  • ಸಂಸ್ಥೆಯ ಆಡಳಿತ ಮಂಡಳಿ ಟ್ರಸ್ಟಿ ಮತ್ತು ಮುಖ್ಯ ಶಿಕ್ಷಕ ಲಿಖಿತ ರೂಪದಲ್ಲಿ ಉತ್ತರ ಕೊಟ್ಟಿದ್ದು ಬುರ್ಖಾ ವೀಡಿಯೋ ನಮ್ಮ ಶಾಲೆಯಲ್ಲಿ ನಡೆದೇ ಇಲ್ಲಾ ಎಂದಿದ್ದಾರೆ.
ಬುರ್ಖಾ ವೀಡಿಯೋ ವೈರಲ್ ಕೇಸ್: ತನಿಖಾ ವರದಿ ಸಲ್ಲಿಕೆ

Burka Video Viral Case: ಶಾಲೆಯಲ್ಲಿ ಬುರ್ಖಾ ವೀಡಿಯೋ ವೈರಲ್ ಕೇಸ್ ಸಂಬಂಧಿಸಿದಂತೆ ಬಿಇಒ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ಈ ಕುರಿತು ಡಿಡಿಪಿಐ ರಾಮಚಂದ್ರರಾಜೇ ಅರಸ್  ಮಾಧ್ಯಮದವರೊಂದಿಗೆ ಮಾತನಾಡಿ, ವೈರಲ್ ವೀಡಿಯೋ ಸಂಬಂಧಿಸಿದಂತೆ ಚಾಮರಾಜನಗರ ಬಿಇಒ ಹನುಮಂತಶೆಟ್ಟಿ ತನಿಖೆ ನಡೆಸಿ  ವರದಿಯನ್ನು ಸಲ್ಲಿಸಿದ್ದಾರೆ‌. ವಿದ್ಯಾರ್ಥಿನಿಯು ಖಾಸಗಿ ಶಾಲೆಯ ವಿದ್ಯಾರ್ಥಿನಿ ಎಂಬುದು ಖಚಿತವಾಗಿದೆ. ಸಂಸ್ಥೆಯ ಆಡಳಿತ ಮಂಡಳಿ ಟ್ರಸ್ಟಿ ಮತ್ತು ಮುಖ್ಯ ಶಿಕ್ಷಕ ಲಿಖಿತ ರೂಪದಲ್ಲಿ ಉತ್ತರ ಕೊಟ್ಟಿದ್ದು ಬುರ್ಖಾ ವೀಡಿಯೋ ನಮ್ಮ ಶಾಲೆಯಲ್ಲಿ ನಡೆದೇ ಇಲ್ಲಾ ಎಂದಿದ್ದಾರೆ ಎಂದರು.

ತನಿಖೆ ವರದಿ ಗಮನಿಸಿದರೆ ಹೆಚ್ಚುವರಿ ತನಿಖೆ ಅವಶ್ಯಕತೆ ಇದೆ, ಇಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು ಸಭೆ ಬಳಿಕ ಹೆಚ್ಚುವರಿ ತನಿಖೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ, ಸಭೆಯಲ್ಲಿ ಪ್ರಕರಣದ ಬಗ್ಗೆ ನಿರ್ಧಾರ ಆಗಲಿದೆ ಎಂದರು.

ಇನ್ನು, ಶಾಲೆಗೆ ಶೋಕಾಸ್ ನೋಟಿಸ್ ಕೊಡಲಾಗಿತ್ತು. ಆದರೆ, ಅವರಿಂದ ಯಾವುದೇ ಉತ್ತರ ಬಂದಿಲ್ಲ,ಎರಡನೇ ನೋಟಿಸ್ ಕೊಡಲಿದ್ದು ಅದಕ್ಕೂ ಉತ್ತರ ಕೊಡದಿದ್ದರೇ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ- ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಆಘಾತ: ಯುಗಾದಿ ಹಬ್ಬಕ್ಕೆ ಆಟೋ ಪ್ರಯಾಣ ದರವೂ ಏರಿಕೆ...!

ಏನಿದು ವೀಡಿಯೋ ಕೇಸ್ : 
ಶಾಲೆಯಲ್ಲಿ ಧರ್ಮಾಧರಿತ ವಿಚಾರಗಳಿಗೆ ಉತ್ತೇಜನ, ಬುರ್ಕಾ ಧರಿಸಲು ಪ್ರೇರಣೆ ನೀಡುವಂತೆ ಬಾಲಕಿ ಮಾತನಾಡಿರುವ ವೀಡಿಯೋ ವೊಂದು 3 ದಿನದ ಹಿಂದೆ ವೈರಲ್ಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಎರಡು ತನಿಖಾ ತಂಡ ರಚನೆ ಮಾಡಿ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಆದೇಶ ನೀಡಿದ್ದರು.

ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆಯು ಚಾಮರಾಜನಗರ ಬಿಇಒ ಹನುಮಂತಶೆಟ್ಟಿ ನೇತೃತ್ವದಲ್ಲಿ ಒಂದು ತಂಡ ಹಾಗೂ ಡಿಡಿಪಿಐ ಅಧಿಕಾರಿಗಳ ತಂಡ ರಚನೆ ಮಾಡಲಾಗಿತ್ತು‌.

ಇದನ್ನೂ ಓದಿ- ಟಾಟಾ ಏಸ್ ಹಾಗೂ ಬಸ್ ನಡುವೆ ಅಪಘಾತ: ಇಬ್ಬರು ಸಾವು,15 ಮಂದಿಗೆ ಗಾಯ

ವೀಡಿಯೋದಲ್ಲಿ ಏನಿದೆ..? 
ವೀಡಿಯೋದಲ್ಲಿ 4 ನೇ ತರಗತಿ ಬಾಲಕಿಯೊಬ್ಬಳು ಬುರ್ಖಾ ಧರಿಸಿದ್ರೆ ಸತ್ತ ಮೇಲೆ ಶವಕ್ಕೆ ಏನು ಆಗಲ್ಲ, ತುಂಡು ಉಡುಗೆ ತೊಟ್ಟರೆ ನರಕಕ್ಕೆ ಹೋಗುವುದರ ಜೊತೆಗೆ ನಿಮ್ಮ ದೇಹವನ್ನ ಹಾವು ಚೇಳು ತಿನ್ನುತ್ತವೆ ಎಂದು ಬಾಲಕಿ ಹೇಳಿದ್ದಾಳೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News