ಪಾಕಿಸ್ತಾನ ಮಾಧ್ಯಮದಲ್ಲಿ ಸಿಎಂ ಹವಾ..! ಸಿದ್ದರಾಮಯ್ಯ ಪಹಲ್ಗಾಮ್‌ ಹೇಳಿಕೆಯನ್ನು ಕೊಂಡಾಡಿದ ಸುದ್ದಿ ವಾಹಿನಿ..

Pahalgam Attack : ಶತ್ರು ದೇಶ ಪಾಕಿಸ್ತಾನ ಮಾಧ್ಯಮಗಳಲ್ಲಿ ಸಿಎಂ ಸಿದ್ದರಾಮಯ್ಯರನ್ನು ತೋರಿಸಲಾಗಿದೆ. ಪಹಲ್ಗಾಮ್‌ ಕುರಿತ ಅವರ ಹೇಳಿಕೆಯನ್ನು ಪ್ರಸಾರ ಮಾಡಿ ಮುಖ್ಯಮಂತ್ರಿಯವರನ್ನು ಹೊಗಳಲಾಗುತ್ತಿದೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Written by - Krishna N K | Last Updated : Apr 27, 2025, 11:58 AM IST
    • ಶತ್ರು ದೇಶ ಪಾಕಿಸ್ತಾನ ಮಾಧ್ಯಮಗಳಲ್ಲಿ ಸಿಎಂ ಸಿದ್ದರಾಮಯ್ಯ
    • ಪಹಲ್ಗಾಮ್‌ ಕುರಿತ ಅವರ ಹೇಳಿಕೆಯನ್ನು ಪ್ರಸಾರ ಮಾಡಿ ಮುಖ್ಯಮಂತ್ರಿಯವರನ್ನು ಹೊಗಳಲಾಗುತ್ತಿದೆ.
    • ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
ಪಾಕಿಸ್ತಾನ ಮಾಧ್ಯಮದಲ್ಲಿ ಸಿಎಂ ಹವಾ..! ಸಿದ್ದರಾಮಯ್ಯ ಪಹಲ್ಗಾಮ್‌ ಹೇಳಿಕೆಯನ್ನು ಕೊಂಡಾಡಿದ ಸುದ್ದಿ ವಾಹಿನಿ..

CM Siddaramaiah in Pak media : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ದೇಶದ ಜನತೆ ಬೆಚ್ಚಿ ಬಿದ್ದಿದೆ. ಈ ಉಗ್ರದಾಳಿಯನ್ನು ಪ್ರಪಂಚದ ವಿವಿಧ ದೇಶಗಳು ತೀವ್ರವಾಗಿ ಖಂಡಿಸುತ್ತಿವೆ. ಅಲ್ಲದೆ, ದಾಳಿಕೋರರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು ಅಂತ ರಾಷ್ಟ್ರದ ಜನತೆ ಒತ್ತಾಯಿಸುತ್ತಿದ್ದಾರೆ.

ಇದರ ನಡುವೆ ಹಠಮಾರಿ ಪಾಕ್‌ ಸಹ ಈ ದಾಳಿಗೂ ತಮಗೂ ಯಾವುದೇ ರೀತಿ ಸಂಬಂಧವಿಲ್ಲ ಎನ್ನುತ್ತಿದೆ. ಅಷ್ಟೇ ಅಲ್ಲ, ಯುದ್ಧವಾದರೂ ಸರಿಯೇ ನಾವು ಹೋರಾಡುತ್ತೇವೆ.. ಅಸಮರ್ಥರಲ್ಲ ಅಂತ ದಡ್ಡತನ ತೋರುತ್ತಿದೆ.. ಇನ್ನೂ ಚಲನಚಿತ್ರ ನಟರು, ವಿವಿಧ ಪಕ್ಷಗಳ ನಾಯಕರು, ಕ್ರಿಕೆಟಿಗರು ಸಹ ಪಾಪಿಗಳಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ:ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕ ದಾಳಿ, ಪ್ರವಾಸಿ ಸ್ಥಳಗಳ ಮೇಲೆ ಉಗ್ರರ ಕಣ್ಣು..! ಸೇನೆ ಹೈ ಅಲರ್ಟ್‌

ಇನ್ನು ಗಡಿಯಲ್ಲಿ ಯುದ್ಧ ಭೀತಿ ಕಾಡುತ್ತಿದೆ. ಈಗಾಗಲೇ ಯುದ್ಧ ನಿಯಮಗಳನ್ನು ಉಲ್ಲಂಘಿಸಿ ಪಾಕ್‌ ಗುಂಡಿನ ದಾಳಿ ಮಾಡಿತ್ತು. ಅಲ್ಲದೆ, ಪಹಲ್ಗಾಮ್‌ ದಾಳಿಯ ನಂತರ ಭಾರತ ಸರ್ಕಾರ ಕೈಗೊಂಡ ಅನೇಕ ಕಠಿಣ ನಿರ್ಧಾರಗಳು ಪಾಕ್‌ಗೆ ನುಂಗಲಾರದ ತುತ್ತಾಗಿವೆ.. ಇದರ ನಡುವೆ ಸಿಎಂ ಸಿದ್ದರಾಮಯ್ಯ ಅವರ ವಿಡಿಯೋ ವೈರಲ್‌ ಆಗುತ್ತಿದೆ..

ಪಹಲ್ಗಾಮ್‌ ದಾಳಿ ನಂತರ ಪ್ರತಿಕ್ರಿಯೆ ನೀಡಿದ್ದ ಸಿಎಂ, 'ಪಾಕಿಸ್ತಾನದ ವಿರುದ್ಧ ಯುದ್ಧ ಅನಾವಶ್ಯಕ, ಯುದ್ಧದ ಪರ ನಾವಿಲ್ಲ, ದೇಶದಲ್ಲಿ ಬಿಗಿ ಕ್ರಮಗಳನ್ನು ಕೈಗೊಂಡರೆ ಸಾಕು ಅಷ್ಟೆ. ಜನರಿಗೆ ಭದ್ರತೆ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು' ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.

ಇದನ್ನೂ ಓದಿ:ಇಂಡಿಯಾ ಮಾಸ್ಟರ್‌ ಪ್ಲಾನ್‌! ಸಿಂಧೂ ಬಂದ್‌ ಬೆನ್ನಲ್ಲೇ ಪಾಕಿಸ್ತಾನದ ಈ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಬಿಟ್ಟಿತೇ ಭಾರತ...? ಪಾಕ್‌ನಲ್ಲಿ ಪ್ರವಾಹ ಸ್ಥಿತಿ

ಇದೀಗ ಸಿಎಂ ಅವರ ಮಾತು ಪಾಕಿಸ್ತಾನಕ್ಕೂ ತಲುಪಿದೆ. ಅಲ್ಲಿನ ಸುದ್ದಿ ವಾಹಿನಿಗಳು ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ, ಹೊಗಳುತ್ತಿದ್ದಾರೆ. ಅಲ್ಲದೆ, ಯುದ್ಧ ಮಾಡುವ ಅಗತ್ಯವಿಲ್ಲ, ಭದ್ರತಾ ಕ್ರಮ ಕೈಗೊಳ್ಳಬೇಕು ಎಂಬ ಮುಖ್ಯಮಂತ್ರಿಯವರ ಹೇಳಿಕೆ ಸರಿ ಇದೆ ಅಂತ ಸಮರ್ಥಿಸಿಕೊಳ್ಳುತ್ತಿದೆ ಪಾಕ್‌ ಮಾಧ್ಯಮ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News